ಚತುಷ್ಪಥ ರಸ್ತೆ ಕಾಮಗಾರಿಯನ್ನು ವೀಕ್ಷಿಸಿದ – ಸಂಸದ ಜಿ.ಕುಮಾರ ನಾಯಕ.
ಮಾನ್ವಿ ಜೂ.16

ಇಂದು ಕಲ್ಮಾಲ ಜಂಕ್ಷನ್ ಯಿಂದ ಸಿಂಧನೂರು ವರೆಗೆ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ (ಕೆ.ಆರ್.ಡಿ.ಸಿ.ಎಲ್) ವತಿಯಿಂದ ನಿರ್ಮಾಣವಾಗುತ್ತಿರುವ ಚತುಷ್ಪಥ ರಸ್ತೆ ಕಾಮಗಾರಿಯನ್ನು ರಾಯಚೂರು ಲೋಕಸಭಾ ಕ್ಷೇತ್ರದ ಸಂಸದರಾದ ಜಿ.ಕುಮಾರ ನಾಯಕ ರವರು ರಸ್ತೆಯ ಕಾಮಗಾರಿ ಮತ್ತು ಗುಣಮಟ್ಟವನ್ನು ವೀಕ್ಷಿಸಿ ತದನಂತರ ಮಾನ್ವಿಯ ಸಮೀಪದ ಕಪಗಲ್ KRDCL ನ ಕ್ಯಾಂಪ್ಗೆ ಭೇಟಿ ನೀಡಿ ಪ್ರಯೋಗಾಲಯವನ್ನು ವೀಕ್ಷಣೆ ಮಾಡಿ ಅಧಿಕಾರಿಗಳಿಗೆ ರಸ್ತೆಗೆ ಬಳಸುವ ಸಾಮಾಗ್ರಿಗಳ ಗುಣಮಟ್ಟವನ್ನು ಪರೀಕ್ಷಿಸಿ ಹಾಗೆಯೇ ಕಾಮಗಾರಿಯ ಸ್ಥಳದಲ್ಲಿ ಇದ್ದು ಕಾಮಗಾರಿಯನ್ನು ವೀಕ್ಷಣೆ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಈ ಕಾಮಗಾರಿಯ ಒಟ್ಟು ಯೋಜನೆ 1,695. 85 ₹ಕೋಟಿ ಗಳಿಗೆ ಅನುಮೋದನೆ ನೀಡಿದ್ದು ಈ ಕಾಮಗಾರಿಯು ಸುಮಾರು 78.45 ಕಿ.ಮೀ ಉದ್ದದ ರಸ್ತೆ ನಿರ್ಮಾಣದಲ್ಲಿ ಶೇಕಡಾ ಸದರಿ ರಸ್ತೆಯು 30 ಕಿ.ಮೀ ಕಾಮಗಾರಿ ಪೂರ್ಣ ಗೊಂಡಿರುವುದರಿಂದ ಅಧಿಕಾರಿಗಳಿಗೆ ಆದಷ್ಟು ಬೇಗನೆ ಕಾಮಗಾರಿಯನ್ನು ತೀವ್ರ ಗೊಳಿಸಿ ಹಾಗೆ ಕಾಮಗಾರಿಯ ಗುಣಮಟ್ಟದಿಂದ ಕೂಡಿರಲಿ ಜೊತೆಗೆ ಮುಖ್ಯ ರಸ್ತೆಯಲ್ಲಿ ಬರುವ ಹಳ್ಳಿಗಳಿಗೆ ಸೂಚನಾ ಫಲಕಗಳು ಹಾಗೂ ರಸ್ತೆ ಮಧ್ಯದಲ್ಲಿ ಜನ ಸಾಮಾನ್ಯರಿಗೆ ಅನುಕೂಲವಾಗುವ ಕಡೆ ಡಿವೈಡರ್ ಗಳನ್ನು ಮಾಡಿ, ಅವಶ್ಯಕತೆ ಇರುವ ಕಡೆ ಸೇತುವೆ ಕೆಳಗಡೆ ಅಂಡರ್ ಪಾಸ್ ನಿರ್ಮಾಣ ಮಾಡಿ ಜನ ಸಾಮಾನ್ಯರಿಗೆ ಅನುಕೂಲ ಮಾಡಿಕೊಡಿ ಎಂದು ಸೂಚಿಸಿದರು. ಈ ಸಂದರ್ಭದಲ್ಲಿ KRDCL ನ ಕಾರ್ಯ ನಿರ್ವಾಹಕ ಎಂಜಿನಿಯರ್ ಮುರಳೀಧರ್ ಟಿ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಂಜುನಾಥ್, ಸಹಾಯಕ ಎಂಜಿನಿಯರ್ ವಿನೋದ್, ಅಶೋಕ್ ಮಾನೆ, ಎಂಜಿನಿಯರ್ ಅತುಲ್. ಸೇರಿದಂತೆ ನಿಯಮಿತೀಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ