ನೂತನ ಶಾಲಾ ಕಟ್ಟಡಗಳ ಭೂಮಿ ಪೂಜೆ ನೆರವೇರಿಸಿದ – ಶಾಸಕ ಎನ್.ವೈ ಗೋಪಾಲಕೃಷ್ಣ.
ಮೊಳಕಾಲ್ಮುರು ಜೂ.17

ಇಂದು ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಸುಮಾರು ₹145 ತಲಾ 14.50 ಲಕ್ಷ ರಾಂಪುರ ಜಿ.ಎಂ.ಎಸ್.ಆರ್ ಶಾಲಾ ಆವರಣದಲ್ಲಿ ಸಾಂಕೇತಿಕವಾಗಿ ರಾಂಪುರ, ವೆಂಕಟಾಪುರ, ಹೊಸದಡಗೂರು, ಮೊಳಕಾಲ್ಮೂರು ಮುಬಾರಕ್ ಮೊಹೊಲ್ಲ, ಕೊಂಡ್ಲಹಳ್ಳಿ, ಶಿರೇಕೂಳ, ಸಂತೆಗುಡ್ಡ, ರಾಯಾಪುರ, ಚಿಕ್ಕೋಬನಹಳ್ಳಿ, ನಾಗಸಮುದ್ರ ನೂತನ ಸರ್ಕಾರಿ ಶಾಲೆಗಳ ಭೂಮಿ ಪೂಜೆ ನೆರವೇರಿಸದರು.ಶಾಲಾ ಮಕ್ಕಳಿಗೆ ಸಮವಸ್ತ್ರ ಪಠ್ಯ ಪುಸ್ತಕ ವಿತರಿಸಿ ಮಾತನಾಡಿ ಶಾಲಾ ಶಿಕ್ಷಕರು ಮಕ್ಕಳಿಗೆ ಉತ್ತಮ ಗುಣಮಟ್ಟ ಶಿಕ್ಷಣ ನೀಡುವಂತೆ ಶಿಕ್ಷಕರಿಗೆ ಸಲಹೆ ನೀಡಿದರು. ಶಾಲಾ ಪರಿಸರವನ್ನು ಹೆಚ್ಚಿನ ಸಂಖ್ಯೆಯಲ್ಲಿ ಗಿಡಗಳನ್ನು ನೆಡುವ ಮೂಲಕ ಆಸರೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಶಿಕ್ಷಕರಿಗೆ ಸೂಚಿಸಿದರು.ಆದ್ಯತೆಯ ಮೇರೆಗೆ ಶಾಲೆಯ ಕೊಠಡಿಗಳು ಅಂಗನವಾಡಿ ಶೌಚಾಲಯಗಳನ್ನು ದುರಸ್ತಿ ಮೂಲಭೂತ ಸೌಕರ್ಯಗಳನ್ನು ಆದ್ಯತೆ ಮೇರೆಗೆ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ರಾಂಪುರ ಜೆಎಂಎಸ್ಆರ್ ಕಂಪೌಂಡ್ ಆವರಣ ಮಹನೀಯರ ಭಾವ ಚಿತ್ರಗಳು ನೋಡಿದರೆ ಕನ್ಮನ ಸೆಳೆದವು ಕ್ಷೇತ್ರಕ್ಕೆ ಹೆಚ್ಚಿನ ಅನುದಾನವನ್ನು ತಂದು ಬೆಳಕು ಮಾಡಿದಂತ ಶಾಸಕರು ಹಿಂದೆ ಸಚಿವರಾಗಿ ಇದ್ದರೂ ಕೂಡ ಮೊಳಕಾಲ್ಮೂರು ತಾಲೂಕು ಅಭಿವೃದ್ಧಿ ಕಂಡಿರಲಿಲ್ಲ ಹೀಗೆ ಸ್ಥಳೀಯ ಶಾಸಕರು ಆಗಿರುವುದರಿಂದ ತನ್ನ ಮನೆಯ ಜವಾಬ್ದಾರಿ ಹೇಗೆ ನಡೆಸುತ್ತಿದ್ದಾರೆ ಅದೇ ರೀತಿಯಾಗಿ ಕ್ಷೇತ್ರದ ಎಲ್ಲಾ ಗ್ರಾಮಗಳಿಗೆ ಅಭಿವೃದ್ಧಿ ಮಾಡಿಸಿದ್ದಾರೆ ಹಾಳು ಮಾಡಿದರೆ ಹಾಳು ಮನೆ ಮಗ ಮಾಡಿದರೆ ಊಡು ಎಂದು ಹಿಂದೆ ಗಾದೆ ಮಾತು ಹೇಳುತ್ತಿದ್ದರು. ಅದೇ ರೀತಿಯಾಗಿ ಮನೆಯ ಜವಾಬ್ದಾರಿಯಂತೆ ಕ್ಷೇತ್ರದ ಎಲ್ಲಾ ಗ್ರಾಮಗಳಿಗೆ ಶಿಕ್ಷಣ ಆರೋಗ್ಯ ರಸ್ತೆಗಳು ಸ್ವಚ್ಛತೆಯ ಕುಡಿಯುವ ನೀರು ಬೀದಿ ದೀಪ ಕೃಷಿಕರಿಗೆ ಸವಲತ್ತುಗಳು ಕೆರೆ ಕಟ್ಟೆಗಳು ಚೆಕ್ ಡ್ಯಾಮ್ ಗಳು ಹೊಸ ಕೆ.ಎಸ್.ಆರ್.ಟಿ.ಸಿ ಬಸ್ ಸ್ಟ್ಯಾಂಡ್ ಗಳು ಎನ್.ವೈ ಗೋಪಾಲಕೃಷ್ಣ ಶಾಸಕರು ಮಾಡಿಸಿದ್ದಾರೆ ಎಂದು ಮತದಾರರು ಹೇಳುತ್ತಾರೆ.

ರಾಂಪುರ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಟಿ.ನಾಗವೇಣಿ ಉಪಾಧ್ಯಕ್ಷರಾದ ಅನಂತಮ್ಮ ತಾಲೂಕ ಪಂಚಾಯತಿ ಇ.ಓ ಹನುಮಂತಪ್ಪ ಬಿ.ಇ.ಓ ನಿರ್ಮಲಾದೇವಿ ಸದಸ್ಯರುಗಳಾದ ಬಿಟಿ ತಿಮ್ಮಣ್ಣ ಅಬ್ದುಲ್ ರಹೀಮ್ ರವಿಕುಮಾರ್ ಸಿದ್ದನಗೌಡ ರಾಮತುಲ್ಲು ಪಿಡಿಓ ಗುಂಡಪ್ಪ ಮುಖಂಡರುಗಳಾದ ಹೊನ್ನೂರಪ್ಪ ಮಂಜುನಾಥ ಪರಮೇಶ್ವರಪ್ಪ ಕಾಡಪ್ಪ ಭರತ್ ಕುಮಾರ್ ಗುತ್ತಿಗೆದಾರರು ಖಾದರ್ ಗೋವಿಂದಪ್ಪ ಉಜ್ಜಿನಪ್ಪ ವಿವಿಧ ರಾಂಪುರ ಪಿಎಸ್ಐ ಬಾಹುಬಲಿ ಕೆ.ಆರ್.ಐ.ಡಿ.ಎಲ್ ಇಲಾಖೆ ಸಿಬ್ಬಂದಿಗಳು ಶಾಲೆಗಳಿಂದ ಆಗಮಿಸಿದ ಮುಖ್ಯ ಶಿಕ್ಷಕರು ಪ್ರಮುಖರು ಉಪಸಿತರಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ತಿಪ್ಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮೂರು