ಬ್ರಾಹ್ಮಣ ಮಹಾ ಸಭಾ ಜಿಲ್ಲಾ ಪ್ರತಿ ನಿಧಿ ಸ್ಥಾನಕ್ಕೆ – ಗುರುರಾಜ ಗೊಂಬಿ ಸ್ಪರ್ಧೆ.

ಇಲಕಲ್ಲ ಏ.10

ಶೈಕ್ಷಣಿಕ ಹಾಗೂ ಸಾಮಾಜಿಕ ಸೇವೆಗಳಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡಿರುವ ಇಳಕಲ್ಲ ನಗರದ ಯುವಕ ಗುರುರಾಜ.ಹ ಗೊಂಬಿ ಅವರನ್ನು ಮಹಾ ಸಭಾ ಚುನಾವಣೆಯಲ್ಲಿ ಬೆಂಬಲಿಸುವಂತೆ ಇಳಕಲ್ ಬ್ರಾಹ್ಮಣ ಸಮಾಜದ ಅಧ್ಯಕ್ಷರಾಗಿರುವ ಪಾಂಡುರಂಗ ಕುಲಕರ್ಣಿ ಅವರು ಬ್ರಾಹ್ಮಣ ಸಮಾಜ ಬಾಂಧವರನ್ನು ಕೋರಿದರು.ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣೆಯು ಎಪ್ರಿಲ್ 13 ರವಿವಾರ ದಂದು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ನಡೆಯಲಿದೆ. ನಡೆಯಲಿದೆ. ರಾಜ್ಯಾಧ್ಯಕ್ಷ ಸ್ಥಾನಕ್ಕಾಗಿ ಬೆಂಗಳೂರಿನ ಎಸ್.ರಘುನಾಥ್ ಹಾಗೂ ಬಾಗಲಕೋಟೆ ಜಿಲ್ಲಾ ಪ್ರತಿ ನಿಧಿ ಸ್ಥಾನಕ್ಕಾಗಿ ಇಳಕಲ್‌ನ ಗುರುರಾಜ ಗೊಂಬಿ ಅವರು ಸ್ಪರ್ಧಿಸಿದ್ದಾರೆ. ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯ ಮಹಾ ಸಭಾ ಸದಸ್ಯರ ಅನುಕೂಲಕ್ಕಾಗಿ ಮತದಾನ ಕೇಂದ್ರವನ್ನು ವಿಜಯಪುರದ ಪಿ.ಡಿ.ಜೆ. ಹೈಸ್ಕೂಲ್‌ನಲ್ಲಿ ಸ್ಥಾಪಿಸಲಾಗಿದೆ.

ಅಂದು ಬೆಳಗಿನ 8 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ಮಾಡುವ ಅವಕಾಶವಿರುತ್ತದೆ. ಬಾಗಲಕೋಟೆ ಜಿಲ್ಲಾ ಪ್ರತಿ ನಿಧಿ ಸ್ಥಾನಕ್ಕೆ ಸ್ಪರ್ಧಿಸಿರುವ ಗುರುರಾಜ ಗೊಂಬಿಯವರು ಪತ್ರಿಕೆಯೊಂದಿಗೆ ಮಾತನಾಡುತ್ತಾ ಈ ಎಲ್ಲ ವಿಷಯ ತಿಳಿಸಿದರು. ಸಹಕಾರ, ರಾಜಕೀಯ, ಹಣಕಾಸು, ಸಮಾಜಸೇವೆ ಮುಂತಾದ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿರುವ ಎಸ್. ರಘುನಾಥ ತಂಡಕ್ಕೆ ಮತ ನೀಡಿ ಗೆಲ್ಲಿಸಲು ಅವರು ಕೋರಿದರು. ಶುಕ್ರವಾರ ದಂದು ಇಲ್ಲಿಯ ಶ್ರೀ ವೆಂಕಟೇಶ ದೇವಸ್ಥಾನದಲ್ಲಿ ಬ್ರಾಹ್ಮಣ ಮಹಾ ಸಭಾ ಮತದಾರರ ವಿಶೇಷ ಸಭೆಯನ್ನು ಏರ್ಪಡಿಸಿರುವುದಾಗಿ ಅವರು ತಿಳಿಸಿದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರತಾಪ್.ವಾಯ್.ಕಿಳ್ಳಿ.ಇಲಕಲ್ಲ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button