ಮೀಸಲು ಕ್ಷೇತ್ರದಲ್ಲಿ ಮಾಚನೂರು ಗ್ರಾಮದ ದಲಿತರಿಗಿಲ್ಲಾ – ಸ್ಮಶಾನದ ಭಾಗ್ಯ.
ಮಾನ್ವಿ ಜೂ.18

ಅಂಬೇಡ್ಕರ್ ಬರೆದ ಸಂವಿಧಾನದ ಆಶಯದಂತೆ ದಲಿತರಿಗೆ ಸೌಲಭ್ಯ ಸಿಗುತ್ತದೆ ಎಂದು ಸರಕಾರ ಹೇಳುತ್ತೇ. ಆದರೆ ಮಾನ್ವಿ ವಿಧಾನ ಸಭಾ ಕ್ಷೇತ್ರವು ಮೀಸಲು ಕ್ಷೇತ್ರವಾದರು ಸಹ ಸಿರವಾರ ತಾಲೂಕಿನ ಮಾಚನೂರು ಗ್ರಾಮದಲ್ಲಿ ದಲಿತರು ಸತ್ತರೆ, ಜೀವ ಭಯದ ನಡುವೆ ರಭಸವಾಗಿ ಹರಿಯುವ ಹಳ್ಳ ದಾಟಿ ಅಂತ್ಯ ಸಂಸ್ಕಾರ ಮಾಡಬೇಕಾದ ದುಸ್ಥಿತಿ ಇದೆ.
ರಾಯಚೂರು ಜಿಲ್ಲೆಯ ಮಾನ್ವಿ ವಿಧಾನ ಸಭಾ ಕ್ಷೇತ್ರದ ಶಾಸಕ ಹಂಪಯ್ಯ ನಾಯಕರೆ ತಾವೂ ದಲಿತರಾಗಿ ಮಾಚನೂರು ಗ್ರಾಮದ ದಲಿತರು ಸ್ಮಶಾನದ ಭಾಗ್ಯ ಇಲ್ಲದೆ ನರಳಾಡುತ್ತ ತುಂಬಿದ ಹಳ್ಳದಲ್ಲಿ ಸತ್ತ ಹೆಣ ಹೊತ್ತು ಕೊಂಡು ಸಾಗಿ ಜೀವಂತ ಇರುವವರು ಸತ್ತರೆ ಇದಕ್ಕೆ ಯಾರು ಹೊಣೆ ಎಂದು ಸಾರ್ವಜನಿಕರ ಪ್ರಶ್ನೆಯಾಗಿದೆ.
ದೇಶಕ್ಕೆ 1947 ರಲ್ಲಿ ಸ್ವಾತಂತ್ರ್ಯ ಬಂದಿದೆ ಹೊರತು, ಅಂಬೇಡ್ಕರ್ ಬರೆದ ಸಂವಿಧಾನದ ಆಶಯಗಳು ಸಿರವಾರ ತಾಲೂಕಿನ ಮಾಚನೂರು ಗ್ರಾಮದ ದಲಿತರಿಗೆ ಸ್ವಾತಂತ್ರ್ಯ ಲಭಿಸಿಲ್ಲ ವಾಗಿದ್ದರಿಂದ ಒಂದು ರೀತಿಯಲ್ಲಿ ಅಂಬೇಡ್ಕರ್ ಆಶಯಗಳು ಮಾಚನೂರು ಗ್ರಾಮಕ್ಕೆ ಇಲ್ಲವಾಗಿದೆ ಎಂದು ಗ್ರಾಮಸ್ಥರ ನೋವಿನ ಕೂಗಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ