ಯೋಗ ದಿನಾಚರಣೆ ಪ್ರಯುಕ್ತ ಮಕ್ಕಳಿಗೆ – ಪೂರ್ವ ಭಾವಿಯಾಗಿ ಯೋಗ ಅಭ್ಯಾಸ.
ತಾಯಕನಹಳ್ಳಿ ಜೂ.20

ಕೂಡ್ಲಿಗಿ ತಾಲೂಕಿನ ತಾಯಕನಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢ ಶಾಲೆಯಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ವಿಜಯನಗರ, ಆಯುಷ್ಯ ಇಲಾಖೆ ವಿಜಯನಗರ ಹಾಗೂ ವಿವಿಧ ಯೋಗ ಸಂಘ ಸಂಸ್ಥೆಗಳ ಸಹಯೋಗ ದೊಂದಿಗೆ 11 ನೇ. ಅಂತರರಾಷ್ಟ್ರೀಯ ಯೋಗ ದಿನದ ಅಂಗವಾಗಿ ಪೂರ್ವ ಭಾವಿಯಾಗಿ ಮಕ್ಕಳಿಗೆ ಯೋಗ ಅಭ್ಯಾಸ ಮಾಡಿಸಲಾಯಿತು. ಈ ವೇಳೆ ಯೋಗ ಶಿಕ್ಷಕಿ ಸುನಿತಾ ಗುರುರಾಜ್ ವಿದ್ಯಾರ್ಥಿಗಳಿಗೆ ಯೋಗ ಹಾಗೂ ಧ್ಯಾನ ಪ್ರಾಣಯಾಮಗಳಿಂದ ಆಗುವ ಉಪಯೋಗಗಳನ್ನು ಮಕ್ಕಳಿಗೆ ತಿಳಿಸಿದರು. ಯೋಗ ಪ್ರಾಣಾಯಮ ದಿಂದ ಮಾನಸಿಕ ಹಾಗೂ ದೈಹಿಕ ದೃಢತೆ ಹೆಚ್ಚುತ್ತದೆ ಯೋಗ ದಿಂದ ಆರೋಗ್ಯ ಯೋಗ ಮಾಡಿ ರೋಗದಿಂದ ಮುಕ್ತರಾಗಿ ಹಾಗೂ 11 ನೇ. ಅಂತರಾಷ್ಟ್ರೀಯ ಯೋಗ ದಿನದ ಧ್ಯೇಯ ವಾಕ್ಯ “ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗ” ಎಂಬ ವಾಕ್ಯದೊಂದಿಗೆ ಮಕ್ಕಳಿಗೆ ಯೋಗ ಭ್ಯಾಸ ಮಾಡಿಸುವ ಮೂಲಕ ಜಾಗೃತಿ ಮೂಡಿಸಲಾಯಿತು.

ಈ ಸಂದರ್ಭದಲ್ಲಿ ಡಾ, ಟಿ.ಎಂ ಮಂಗಳ ವೈದ್ಯಾಧಿಕಾರಿ ಆಯುಷ್ಯ ಇಲಾಖೆ, ಸರ್ಕಾರಿ ಪ್ರೌಢ ಶಾಲಾ ಮುಖ್ಯ ಗುರುಗಳು ರಂಗಪ್ಪ, ದೈಹಿಕ ಶಿಕ್ಷಕರಾದ ಕರಿಯಣ್ಣ, ಸಹ ಶಿಕ್ಷಕರಾದ ರಮೇಶ, ಹಾಲಪ್ಪ, ನವೀನ್, ಎಂ ಜೆ ಕುಬೇರ, ಶೀಲಾ, ವಿಶಾಲಾಕ್ಷಿ, ಸುಮಂಗಳ ಹಾಗೂ ಆಯುಷ್ಯ ಇಲಾಖೆ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಯೋಗ ಅಭ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್.ಕೆ.ಹೊಸಹಳ್ಳಿ