ಸಾಮುವೇಲಪ್ಪನ ವಿರುದ್ಧ ದಲಿತ ಸಂಘರ್ಷ ಸಮಿತಿ – ಮುಖಂಡ ಸದಾನಂದ ಪನ್ನೂರು ಆಕ್ರೋಶ.
ಜಾಗೀರಪ್ಪನ್ನೂರು ಜೂ.21

ಸರಕಾರ ಪ್ರತಿ ಐದು ವರ್ಷಕ್ಕೊಮ್ಮೆ ಆಡಳಿತ ನಡೆಸಿದರೂ ಸಹ ಮಾನ್ವಿ ತಾಲೂಕಿನ ಜಾಗೀರಪನ್ನೂರು ಗ್ರಾಮಕ್ಕೆ ರಸ್ತೆ ಸೌಲಭ್ಯ ಇಲ್ಲದ ಕಾರಣ ಬಸ್ ಸಂಚಾರವಂತೂ ಅಧೋಗತಿ ಅದರಲ್ಲೂ ರಸ್ತೆ ಸ್ಥಿತಿಯಂತೂ ಯಮರಾಯನಿಗೆ ಗೊತ್ತು.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಜಾಗೀರಪನ್ನೂರು ಗ್ರಾಮದ ರಸ್ತೆ ಸರಿಯಿಲ್ಲದ ಕಾರಣ ರಸ್ತೆ ನಿರ್ಮಿಸಿಕೊಡಿ ಎಂದು ದಲಿತ ಸಂಘರ್ಷ ಸಮಿತಿ ಮುಖಂಡ ಸದಾನಂದ ಪನ್ನೂರು ಅವರು ಹೋರಾಟ ಮನವಿ ಕೊಟ್ಟರು ಸಹ ಮಾನ್ವಿ ಲೋಕೋಪಯೋಗಿ ಇಲಾಖೆ ಜೆಇ ಸಾಮುವೇಲಪ್ಪನ ದುರಾಡಳಿತದಿಂದ ನಮಗೆ ನ್ಯಾಯ ಸಿಕ್ಕಿಲ್ಲ ಎಂದು ಸದಾನಂದ ಗಂಭೀರ ಆರೋಪ ಮಾಡಿದ್ದಾರೆ.
ಸಾಮುವೇಲಪ್ಪ ಸಾಹೇಬ್ರೆ ನೀವು ಶೋಷಿತ ಸಮುದಾಯದಿಂದ ಬಂದವರು ನೀವು, ಆದರೆ ಶೋಷಿತ ಜನಾಂಗದ ಹೋರಾಟಗಾರರಿಗೆ ಸುಳ್ಳು ಹೇಳುತ್ತೀರಾ ಅಂದ ಮೇಲೆ ಇದು ಯಾವ ನ್ಯಾಯ ಸಾಮುವೇಲಪ್ಪ ಸಾಹೇಬ್ರೆ, ಜಾಗೀರಪನ್ನೂರು ಗ್ರಾಮದ ನಿವಾಸಿಗಳಂತೂ ಸಾಮುವೇಲಪ್ಪ ಸಾಹೇಬ್ರೆ ನಿಮಗೆ ಇಡೀ ಶಾಪ ಹಾಕುತ್ತಿದ್ದಾರೆ ಅಂದರೆ ನೀವೆ ಆಲೋಚನೆ ಮಾಡಿ ಆದಷ್ಟು ಬೇಗ ಸರಿ ಪಡಿಸಿದೆ ಇದ್ರೆ ಮುಂದೆ ಕಾದಿದೆ ಮಾರಿಹಬ್ಬ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ