ಗಾನ ಕೋಗಿಲೆ ಉಮೇಶ್ ನಾಯಕ್ ರನ್ನು ಬಂಜಾರ ಧರ್ಮ ಗುರುಗಳಾದ – ತಿಪ್ಪೇಸ್ವಾಮಿ ಮಹಾ ರಾಜರು ಹರಸಿ ಹಾರೈಸಿ ಆಶೀರ್ವದಿಸಿದರು.
ಸಂಡೂರು ಜೂ.24

ಗಾನ ಗಾರುಡಿಗ ಶ್ರೀ ಉಮೇಶ್ ನಾಯಕ್ ಅವರ ಬಗ್ಗೆ ಶ್ರೀ ಸೇವಾಲಾಲ್ ಶಿವಶಕ್ತಿ ಬಂಜಾರ ಗುರು ಪೀಠ ಮಠದ ಬಂಜಾರ ಧರ್ಮ ಗುರುಗಳಾದ ಶ್ರೀ ಕಾಯಕ ಯೋಗಿ ತಿಪ್ಪೇಸ್ವಾಮಿ ಮಹಾ ರಾಜರು ಶ್ರೀ ಉಮೇಶ್ ನಾಯಕ್ ಅವರ ಬಗ್ಗೆ ಹೊಗಳಿ ಕೊಂಡಾಡಿದ್ದಾರೆ ನಮ್ಮ ಹೆಮ್ಮೆಯ ಬಂಜಾರ ಸಮಾಜದ ಗಾನ ಗಾರೂಡಿಗರಾದ ಜಾನಪದ ಕಲಾವಿದರು ನಮ್ಮ ಹೆಮ್ಮೆಯ ಬಂಜಾರ ಹೆಮ್ಮೆಯ ಜಾನಪದ ಕೋಗಿಲೆ ವಿಶೇಷ ಸಾಧಕರು ನಮ್ಮ ಶ್ರೀ ಉಮೇಶ್ ನಾಯಕ್ ಅವರು ಸತತ ಇಪ್ಪತೈದು ಮೂವತ್ತು ವರ್ಷಗಳಿಂದ ತನ್ನ ಕಲೆಯೇ ಬಾಳಿನ ಬೆಳಕೆಂದು ಶ್ರಮ ಪಟ್ಟಿದ್ದಾರೆ.

ತಮ್ಮ ಬದುಕನ್ನೇ ಕಲೆಯನ್ನಾಗಿ ರೂಪಿಸಿ ಕೊಂಡು ಸಾಧಿಸಿರುವ ಇವರಿಗೆ ಸರ್ಕಾರದ ಸೌಲತ್ತು ಸಿಗಬೇಕೆಂದು ನನ್ನ ವಿನಂತಿ ಇವರು ಪುಸ್ತಕ ಬಿಡುಗಡೆ ಮಾಡಿದ್ದಾರೆ ನಮ್ಮ ಬಂಜಾರಕ್ಕೆ ಒಂದು ಹೆಮ್ಮೆಯ ವಿಷಯವಾಗಿದೆ ಎಂದು ಹರಸಿ ಹಾರೈಸಿ ಹೆಮ್ಮರವಾಗಿ ಬೆಳೆಯಲಿ ಎಂದು ಉಮೇಶ್ ನಾಯಕ್ ರನ್ನು ಆಶೀರ್ವದಿಸಿದರು ಎಂದು ವರದಿಯಾಗಿದೆ.