ಅಭಿವೃದ್ಧಿಯೇ ನನ್ನ ಗುರಿ – ಶಾಸಕ ಅಶೋಕ ಮನಗೂಳಿ.

ಹಂದಿಗನೂರು ಜೂ.24

ಸಾರ್ವಜನಿಕರ ಸೇವೆ ಮಾಡಲು ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿದ್ದಾರೆ ಮತದಾರರ ಋಣ ತೀರಿಸಲು ನಾನು ಸಿದ್ಧನಿದ್ದೇನೆ ನಾನು ನನ್ನ ಮತ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡುವುದನ್ನು ನೋಡಿ ವಿರೋಧ ಪಕ್ಷದವರು ಹೋಟ್ಟೆ ಹುರಿ ಆಗುತ್ತದೆ. ನನ್ನ ಆಯ್ಕೆ ಯಾಗಿ ಎರಡೂ ವರ್ಷ ಸಾಕಷ್ಟು ಅಭಿವೃದ್ಧಿ ಮಾಡಿದ್ದೇನೆ ಇನ್ನೂ ಮುಂದೆ ನಮ್ಮ ಮತ ಕ್ಷೇತ್ರ ರಾಜ್ಯದ ಜನರು ನೋಡುವ ಹಾಗೆ ಮಾಡುತ್ತೇನೆ ಎಂದು ಶಾಸಕರಾದ ಅಶೋಕ ಮನಗೂಳಿ ಹೇಳಿದರು.ಸಿಂದಗಿ ತಾಲ್ಲೂಕಿನ ಹಂದಿಗನೂರ ಗ್ರಾಮದಲ್ಲಿ ವಿವಿಧ ಕಾಮಗಾರಿ ಭೂಮಿ ಪೂಜೆ ಮಾಡಿ ಮಾತನಾಡಿದರು.

ಬಾರಖೇಡ, ಬೀಳಗಿ ರಾಜ್ಯ ಹೆದ್ದಾರಿ ೧೨೪ ನೇಯ ರಸ್ತೆ ಹಂದಿಗನೂರ ಕ್ರಾಸ್‌ ದಿಂದ ಬಸ್ತಿಹಾಳ ಕ್ರಾಸ್‌ ವರೆಗೆ ರಸ್ತೆ ಸುಧಾರಣೆ ಹಾಗೂ ಸರ್ಕಾರಿ ಪ್ರೌಢ ಶಾಲೆಯಲ್ಲಿ ಲ್ಯಾಬ್ ಉದ್ಘಾಟನೆ ಹಾಗೂ ಹಂದಿಗನೂರು ತಾಂಡಾ ಗ್ರಾಮದಲ್ಲಿ ಕಸ್ತೂರಬಾ ಗಾಂಧಿ ಬಾಲಕಿಯರ ವಿದ್ಯಾಲಯದಲ್ಲಿ ಹೊಸ ಡೊರ್ ಮೀಟರ ನಿರ್ಮಾಣದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕರಾದ ಅಶೋಕ ಮನಗೂಳಿಯವರು, ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಈರಘಂಟ ಬಿರಾದಾರ, ಪಿಕೆಪಿಎಸ್ ಅಧ್ಯಕ್ಷರಾದ ಅಪ್ಪ ಸಾಹೇಬ ಪಡಶೇಟ್ಟಿ ಹಾಗೂ ಸೋಮು ಬಿರಾದಾರ, ಕಾಂಗ್ರೆಸ್ ಜಿಲ್ಲಾ ಪಂಚಾಯತಿ ಮಾಜಿ ಉಪಾಧ್ಯಕ್ಷರಾದ ಮಲ್ಲಪ್ಪ ಸಾಲಿ ಕನ್ನೊಳ್ಳಿ.

ಜಿಲ್ಲಾ ಪಂಚಾಯತಿ ಪ್ರಬಲ ಆಕಾಂಕ್ಷೆ ಹಾಗೂ ಕಾಂಗ್ರೆಸ್ ಯುವ ಮುಖಂಡರಾದ ಚೇತನಗೌಡ ಬಿರಾದಾರ, ಯಲಗೋಡ ಗ್ರಾಮದ ಪಿಕೆಪಿಎಸ್ ಅಧ್ಯಕ್ಷರಾದ ಸಾಯಬಣ್ಣ ಬಾಗೇವಾಡಿ ಪಿಕೆಪಿಎಸ್ ಮಾಜಿ ಸಿಇಓ ಜಗನ್ನಾಥ ಕುಲಕರ್ಣಿ ಹಾಗೂ ಕಾಂಗ್ರೆಸ್ ಮುಖಂಡರಾದ ಅಣ್ಣಪ್ಪಗೌಡ ಪಾಟೀಲ, ಯುವ ಮುಖಂಡರಾದ ಉಮೇಶ ಇಂಗಳಗಿ, ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷರಾದ ಮಶ್ಯಾಖ ಸಾಬ ಚೌದ್ರರಿ ಹಾಗೂ ಪ್ರೌಢ ಶಾಲೆಯ ಮುಖ್ಯ ಗುರುಗಳು ಸಹ ಶಿಕ್ಷಕರು ವಿದ್ಯಾರ್ಥಿಗಳು ಹಾಗೂ ಕೆರುಟಗಿ, ಬಸ್ತಿಹಾಳ ಹಂದಿಗನೂರ ಯಲಗೋಡ ಗ್ರಾಮದ ಎಲ್ಲಾ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button