ಸುವರ್ಣ ಕರ್ನಾಟಕ ಮಹಿಳಾ ಸಾಧಕಿಗೆ ರಾಜ್ಯ ರತ್ನ ಪ್ರಶಸ್ತಿ – ನೀಡಿ ಗೌರವಿಸಿದರು.
ವಿಜಯಪುರ ಜೂ.26

ವಿಜಯಪುರದ ಶ್ರೀ ಸಿದ್ದೇಶ್ವರ ಕಲಾ ಭವನದಲ್ಲಿ ಸೋಮವಾರ ದಂದು ನಡೆದ ವಿಶ್ವ ಕನ್ನಡ ಜಾನಪದ ಪರಿಷತ್ ಬೆಂಗಳೂರು ವತಿಯಿಂದ ನೀಡಿದ ರಾಷ್ಟ್ರೀಯ ಗುಮ್ಮಟ ಉತ್ಸವ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ವಿಜಯಪುರ ಜಿಲ್ಲೆಯ ಕನ್ನೂರ ಗ್ರಾಮದ ಶಿಕ್ಷಕಿಯರಾದ ಶ್ರೀಮತಿ ಪ್ರಿಯಾಂಕಾ ಮಲ್ಲಿಕಾರ್ಜುನ ತಾಂಬೆ ಅವರು ಶಿಕ್ಷಣ ಕ್ಷೇತ್ರದಲ್ಲಿನ ಅಗಾಧ ಸೇವೆಯನ್ನು ಗುರುತಿಸಿ ಸುವರ್ಣ ಕರ್ನಾಟಕ ಮಹಿಳಾ ಸಾಧಕಿ ರಾಜ್ಯ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಮಗಳ ಸಾಧನೆ ಕಂಡು ತಂದೆ-ತಾಯಿ ಮತ್ತು ಕುಟುಂಬಸ್ಥರು ಸಂತೋಷ ವ್ಯಕ್ತಪಡಿಸಿದರು. ಪ್ರಶಸ್ತಿ ಪಡೆದ ಪ್ರಿಯಾಂಕಾ ತಾಂಬೆ ಅವರು ಮಾತನಾಡಿ ನನ್ನ ಶೈಕ್ಷಣಿಕ ಸಮಾಜ ಸೇವೆಯನ್ನು ಗುರುತಿಸಿ ನನಗೆ ಸುವರ್ಣ ಕರ್ನಾಟಕ ಮಹಿಳಾ ಸಾಧಕಿ ರಾಜ್ಯ ರತ್ನ ಪ್ರಶಸ್ತಿಯನ್ನು ನೀಡಿದ ವಿಶ್ವ ಕನ್ನಡ ಪರಿಷತ್ ಬೆಂಗಳೂರು ಅವರಿಗೆ ಧನ್ಯವಾದಗಳನ್ನು ತಿಳಿಸಿದರು. ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ರಾಜ್ಯಾಧ್ಯಕ್ಷರಾದ ಸುರೇಶ ವಾಘಮೋರೆ, ಹಾಗೂ ಸಮಾಜದ ಪೂಜ್ಯರು ಹಾಗೂ ಇನ್ನಿತರರು ಇದ್ದರು.
ವರದಿ:ಮುತ್ತು.ಬೀರಗೊಂಡ.ಢವಳಗಿ