ಶ್ರೀ ಮತಿ ಜ್ಯೋತಿ ರವರ ಕಂಚಿನ ಕಂಠದ ಕೋಗಿಲೆಗೆ – ಮುನ್ನೆಲೆಯ ಶುಭ ಸಂದೇಶ.
ಬಾಗಲಕೋಟ ಜೂ.27

ಪುರಾತನ ಕಾಲದಿಂದಲೂ ತನ್ನದೆಯಾದ ಕಲಾ ಸಂಸ್ಕೃತಿಯನ್ನು ಬಿಂಬಿಸುವಲ್ಲಿ ಅಪಾರ ಕೊಡುಗೆಯನ್ನು ನೀಡಿದ ಈ ‘ಜನಪದ ಸಾಹಿತ್ಯ’ ಇಂದಿಗೂ ಕೂಡ ಪ್ರಮುಖ ಪಾತ್ರವನ್ನು ವಹಿಸುತ್ತಿರುವ ಜನಪ್ರಿಯ ಶಾಸ್ತ್ರ ಎಂಬುದು ಮಾನವ ಸಂಸ್ಕೃತಿಯನ್ನು ಅಧ್ಯಯನ ಮಾಡಿದಾಗ ಸಂಪೂರ್ಣ ಅರ್ಥವಾಗುತ್ತದೆ.
ಗೀತ, ಕಥನ, ನಾಟಕ, ಕುಣಿತ ಆದಾವ ಕಲಾ ಪ್ರಕಾರಗಳಿದ್ದರೂ “ಬದುಕಿನ ರೀತಿ ನೀತಿ, ಆಚಾರ-ವಿಚಾರ, ಸಂಪ್ರದಾಯ ನಂಬಿಕೆಗಳನ್ನು ಹಬ್ಬ ಹರಿದಿನಗಳಲ್ಲಿ ಉಳಿಸಿ ಬೆಳೆಸುವ ಶ್ರೀಮಂತ ಲೋಕವಿದು”.
ಇಂತಹ ಅಮೂಲ್ಯ ನಡಿಗೆಯಲ್ಲಿ ಜಾನಪದ ಹಾಡುಗಳ ಮೂಲಕ ನಾಡಿನ ಜನತೆಗೆ ಕಂಠ ಕೊಡುಗೆಯನ್ನು ನೀಡುತ್ತಿರುವ ನಮ್ಮ ನಿಮ್ಮೆಲ್ಲರ ಅಚ್ಚು ಮೆಚ್ಚಿನ ಜಾನಪದ ಹಾಡುಗಾರ ಅತ್ಮೀಯ ಉಮೇಶ ಚಿನ್ನ ಸಮುದ್ರರವರು ನಮ್ಮ ಲಂಭಾಣಿ ಸಮುದಾಯಕ್ಕೊಂದು ಕೀರ್ತಿ ಪಾತ್ರರಾಗಿದ್ದಾರೆ. ಅತ್ಯಂತ ಬಡ ಕುಟುಂಬದಲ್ಲಿ ಜನಿಸಿದ ಇವರು ಸುಮಾರು ವರ್ಷಗಳಿಂದ ತಮ್ಮ ಗಾಯನವೇ ತಮಗೆ ಬಂಡವಾಳ ಎಂಬಂತೆ ಸಾಕಷ್ಟು ಕಾರ್ಯಕ್ರಮಗಳಲ್ಲಿ ಹಾಡು ಹಾಡುವ ಮೂಲಕ ಜಾನಪದ ಕಲಾ ಸೇವೆಯನ್ನು ಸಲ್ಲಿಸುವ ಜೊತೆಗೆ ತಮ್ಮ ಕುಟುಂಬವನ್ನು ಸಾಗಿಸುತ್ತಿದ್ದಾರೆ.

ಇಂತಹ ಬಡ ಪ್ರತಿಭಾನ್ವಿತ ಗಾಯಕನ ಬಗ್ಗೆ “ಮತ್ತೆ ಸುಗ್ಗಿ ಬಂತು ಜಾನಪದ ಲೋಕದಲ್ಲಿ” ಎಂಬ ಪುಸ್ತಕ ಬಿಡುಗಡೆ ಯಾಗುತ್ತಿರುವುದು ನಿಜಕ್ಕೂ ಸಂತಸದ ಸಂಗತಿಯಾಗಿದೆ. ಇದೇ ರೀತಿ ಬಂಜಾರಾ ಭಾಷೆಯಲ್ಲಿಯೂ ಅವರ ಗೀತೆಗಳು ಜನ ಮನ ಮುಟ್ಟಲಿ ಹಾಗೂ ನಮ್ಮಂತಹ ಹಿಂದುಳಿದ ಪ್ರತಿಭೆಗಳನ್ನು ಕರ್ನಾಟಕ ಸರ್ಕಾರ ಗುರುತಿಸಿ ಗೌರವಿಸುವಂತಾಗಲಿ ಎಂದು ಬಂಜಾರಾ ಭಾಷಾ ಚಿಂತಕರಾಗಿರುವ ಶ್ರೀಮತಿ ಜ್ಯೋತಿ ಕೃಷ್ಣ ನಾಯಕರವರು ಮನದಾಳದಿ ಹಾರೈಸಿ, ‘ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್ ಗೆ’ ತಮ್ಮ ಇಂಗೀತವನ್ನು ವ್ಯಕ್ತಪಡಿಸಿದ್ದಾರೆ.
ಲೇಖಕರು:- ಶ್ರೀಮತಿ ಜ್ಯೋತಿ ಕೃಷ್ಣ
ನಾಯಕ ಬಾಗಲಕೋಟ