ಮಾದಿಗ ಸಮುದಾಯದ ಪ್ರತಿಭೆಗಳಾದ ಕು.ಸಂಜನಾ ಮತ್ತು ಕು.ಪ್ರಫುಲ್ ಅವರಿಗೆ – ಸನ್ಮಾನ ಮತ್ತು ಅಭಿನಂದನಾ ಸಮಾರಂಭ.

ಕುಷ್ಟಗಿ ಜೂ.27

ದಿನಾಂಕ 26/06/25 ರಂದು ಸಂಜೆ ಕುಷ್ಟಗಿಯ ವಾಲ್ಮೀಕಿ ಭವನದಲ್ಲಿ ಕುಷ್ಟಗಿ ತಾಲೂಕಿನ ಮಾದಿಗ ನೌಕರರ ಸಂಘದ ವತಿಯಿಂದ ನಮ್ಮ ಮಾದಿಗ ಸಮುದಾಯದ ನೌಕರರು ಆದ ಶ್ರೀ ಶಶಿಕಾಂತ ಶಾಖಾಪೂರ ಶಿಕ್ಷಣ ಇಲಾಖೆ ದೋಟೀಹಾಳ ಇವರ ಸಹೋದರ (ತಮ್ಮ) ನ ಮಗಳಾದ ಕುಮಾರಿ ಸಂಜನಾ ಇವರು MBBS ನೀಟ್ ಪರೀಕ್ಷೆಯಲ್ಲಿ ರಾಜ್ಯಕ್ಕೆ 3800 ರ್ಯಾಂಕ್ ಗಳಿಸಿ ಉತ್ತಮ ಸಾಧನೆ ಮಾಡಿದ್ದಾರೆ ಹಾಗೂ ಶ್ರೀಯುತ ದಂಡಪ್ಪ ಹೊಸಮನಿ. CRP ಶಿಕ್ಷಣ ಇಲಾಖೆ ಇವರ ಸುಪುತ್ರ ಕುಮಾರ ಪ್ರಪುಲ್.ದಂಡಪ್ಪ ಹೊಸಮನಿ NEET ಪರೀಕ್ಷೆಯಲ್ಲಿ 2613 ರ್ಯಾಂಕ್ ಗಳಿಸಿದ್ದಾರೆ.ಆದ್ದರಿಂದ ಸಮುದಾಯದ ಎಲ್ಲಾ ನೌಕರರು ಸೇರಿ ಇಂದು ದಿನಾಂಕ 26/6/2025 ಗುರುವಾರ ಸಂಜೆ 5:30 ಶ್ರೀ ಮಹರ್ಷಿ ವಾಲ್ಮೀಕಿ ಭವನ ಕುಷ್ಟಗಿಯಲ್ಲಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡರು. ಸಾಧನೆಗೈದ ಕುಮಾರಿ ಸಂಜನಾ ಹಾಗೂ ಕುಮಾರ ಪ್ರಪುಲ್ ಇರ್ವರಿಗೂ ಅಭಿನಂದನೆ ಹಾಗೂ ಮುಂದಿನ ವಿದ್ಯಾಭ್ಯಾಸಕ್ಕೆ ಶುಭಾಷಯಗಳನ್ನು ಕೋರಲಾಯಿತು. ಈ ಸಂಧರ್ಭದಲ್ಲಿ ಅಧ್ಯಕ್ಷರು ಲಕ್ಷ್ಮಣ್ ಸರ್, ಕಾರ್ಯದರ್ಶಿ ಮಹಾಂತೇಶ ಜಾಲಿ ಗಿಡದ, ಖಜಾಂಚಿ, ವಿಜಯಕುಮಾರ್ ಮೈತ್ರಿ, ಸಂಘಟನಾ ಕಾರ್ಯದರ್ಶಿ ಮಹೇಂದ್ರ ಹೋಸಮನಿ, ವಿಠಲ್ ಎಮ್, ಮಾರ್ಗದರ್ಶಕರು, ದಂಡಪ್ಪ ಸರ್, ಸಮಾಜದ ವಕೀಲರುಗಳಾದ ಶಿವಕುಮಾರ ದೊಡ್ಡಮನಿ, ಸುಖಮುನಿ ಗುಮಗೇರ, ಹಾಗೂ ಚಿದಾನಂದ ಇಂಡಿ, ಧರ್ಮರಾಜ, ದೊಡ್ಡಮನಿ, ಬುಡ್ಡಪ್ಪ ದೋಟಿಹಾಳ, ಮಂಜುನಾಥ,ಹೊಸಮನಿ, ಶ್ರೀಕಾಂತ್ ಕೆಂಗಾರಿ, ಪರಶುರಾಮ ಸರ್ ಲಕ್ಷ್ಮಣ್ ಸರ್, ಮುಂತಾದವರು ಪಾಲ್ಗೊಂಡಿದ್ದರು ಎಂದು ವರದಿಯಾಗಿದೆ.

ವರದಿ:ಶಿವಕುಮಾರ.ದೊಡ್ಡಮನಿ.ವಕೀಲರು.ಕುಷ್ಟಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button