ಮೀಸೆ ಮೂಡದ ಪುಡಿ ಯುವಕ ರಿಂದ ದಂಧೆ, ಗೂಡು ಸೇರಿದ ಮರಳು ಸಮಿತಿಯ ಆಡಳಿತಾತ್ಮಕ ಅಧಿಕಾರಿಗಳ ಸೇವೆ – ಠುಸ್ ಪಟಾಕಿ.

ಮಾನ್ವಿ ಜೂ.29

ಕೇಂದ್ರ ಹಾಗೂ ರಾಜ್ಯ ಸರಕಾರ ಅಕ್ರಮ ಮರಳು ಮಾಫಿಯಾ ದಂಧೆಯನ್ನು ತಡೆಯಲು ಬಲಿಷ್ಠವಾದ ಕಾನೂನನ್ನು ಜಾರಿಗೆ ತಂದರೂ ಸಹ ಮಾನ್ವಿ ತಾಲೂಕಿನಲ್ಲಿ ಮರಳು ಸಮಿತಿ ಅಧಿಕಾರಿಗಳ ದುರಾಡಳಿತ ಡ್ಯೂಟಿ ಮಾಡದೆ ಗೂಡು ಸೇರಿದ್ದರಿಂದ ಅಕ್ರಮ ದಂಧೆ ಕೋರರಿಗೆ ನಿತ್ಯವೂ ಬಾಡೂಟ ಸವಿದಂತಾಗಿದೆ. ಸರಕಾರದ ಅಧಿಕಾರಿಗಳು ಸರಕಾರದ ಹಣವನ್ನು ಸಂಬಳ ರೂಪದಲ್ಲಿ ಪಡೆದರೂ ಖನಿಜ ಸಂಪತ್ತನ್ನಾದರು ಉಳಿಸುವ ಕೆಲಸ ಮಾಡಬೇಕು. ಆದರೆ ಮರಳು ಸಮಿತಿ ಅಧಿಕಾರಿಗಳು ನಮಗ್ಯಾಕೆ ಬೇಕು ಎಂದು ನಾಮಕಾವಸ್ಥೆ ಯಾಗಿ ಒಂದು ಜಿ.ಪಿ.ಎಸ್‌ ಫೋಟೋ ಹಾಕಿ ಮನೆಗೆ ಸೇರುವ ತಂತ್ರ ಅಧಿಕಾರಿಗಳು ಇರುವುದರಿಂದ ನಾಚಿಕ ಗೇಡಿನ ಸಂಗತಿಯಾಗಿದೆ.ಮಾನ್ವಿ ತಾಲೂಕಿನ ದದ್ದಲ ಗ್ರಾಮದಲ್ಲಿ ಹಾದು ಹೋದ ತುಂಗಭದ್ರಾ ನದಿಗೆ ಮೀಸೆ ಮೂಡದ ಪುಡಿ ಕುನ್ನಿಗಳು ಕನ್ನ ಹಾಕುತ್ತ ಸಕಲ ಜೀವ ರಾಶಿಗಳಿಗೂ ಕಂಟಕವಾದರು ಸಹ ಮರಳು ಸಮಿತಿ ಅಧಿಕಾರಿಗಳು ಮಾತ್ರ ಬಲಾಢ್ಯ ರಾಜಕಾರಣಿಗಳ ಮಾತಿಗೆ ಕಿವಿಗೊಟ್ಟು ಎಂಜಲು ಕಾಸಿಗೆ ಹಾಸೆ ಬಿದ್ದು, ಕ್ರಮ ಎಂಬುದು ಇಲ್ಲಿ ಇಲ್ಲವಾಗಿದೆ ಎಂದು ಜನರ ಬಾಯಲ್ಲಿ ಅಧಿಕಾರಿಗಳು ನಗೆ ಪಾಟಲಿಗೆ ಒಳಗಾಗಿದ್ದಾರೆ. ಮಾನ್ವಿ ತಾಲೂಕಿನ ಮದ್ಲಾಪುರ, ಚೀಕಲಪರ್ವಿ, ಯಡಿವಾಳ, ಜಾಗೀರಪನ್ನೂರು, ಹರನಹಳ್ಳಿ, ರಾಜಲಬಂಡಾ, ಜೂಕೂರು, ರಾಜೊಳ್ಳಿ ಗ್ರಾಮಗಳ ಮೂಲಕ ತುಂಗಭದ್ರಾ ನದಿ ಹಾದು ಹೋದರು ಸಹ ಮರಳು ಖದೀಮರು ಮಾತ್ರ ಯಾವುದನ್ನು ಕೆಲಸ ಮಾಡದೆ, ಹಣ ಗಳಿಸಬೇಕು ಎಂಬ ಕಾರಣಕ್ಕಾಗಿ ಅಕ್ರಮ ಮರಳು ದಂಧೆ ಮಾಡುತ್ತ ಕೋಟಿ ಗಟ್ಟಲೆ ಆಸ್ತಿಗಳಿಸಿ ರಾಜಕಾರಣಿಗಳ ಹಿಂಬಾಲಕರಾಗಿ ಅಧಿಕಾರಿಗಳನ್ನೆ ಯಾಕೆ ಟಿಪ್ಪರ್‌ ಹಿಡಿಯುತ್ತೀರಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ ಚೋರರು.ದದ್ದಲ ಗ್ರಾಮದ ಹೊಸ ಊರಿನ ಮೈದಾನದಲ್ಲಿ ರಾಶಿ ರಾಶಿ ಗಟ್ಟಲೆ ಮರಳು ಸಂಗ್ರಹ ಮಾಡುತ್ತಾರೆ ಅಂದ ಮೇಲೆ ಮಾನ್ವಿ ತಾಲೂಕು ಅನ್ನೋದು ಅಕ್ರಮ ದಂಧೆಗಳ ತವರೂರಾಗಿದೆನಾ ಅಥವಾ ಮಾನ್ವಿ ತಾಲೂಕಿನ ಅಧಿಕಾರಿಗಳಲ್ಲಿ ಗುಂಡಿಗೆ ಇಲ್ಲವೆಂದು ಅಕ್ರಮ ದಂಧೆಕೋರರು ಮರಳು ಮಾಫಿಯಾ ಮಾಡುತ್ತಿದ್ದಾರಾ ಎಂದು ಜನರೆ ಗುಸು ಗುಸು ರೀತಿಯಲ್ಲಿ ಮಾತಾಡುತ್ತಿದ್ದಾರೆ. ಹಗಲು ಮತ್ತು ರಾತ್ರಿ ಟಿಪ್ಪರ್‌ಗಳ ಮೂಲಕ ರಾಯಲ್ಟಿ ಇಲ್ಲದೆ ಅಕ್ರಮವಾಗಿ ಮರಳು ಸಾಗಣೆ ಮಾಡಿದರು ಸಿ.ಸಿ ಕ್ಯಾಮೆರಾದಲ್ಲಿ ಸೆರೆಯಾದರು ಅಧಿಕಾರಿಗಳು ಯಾಕೆ ನಿಷ್ಕಾಳಜಿ ತೋರುತ್ತಿದ್ದಾರೆಂದು ತಿಳಿಯದಾಗಿದ್ದು.

ಟಿಪ್ಪರ್‌ಗಳಿಗೆ ಚಾಲಕರು ಯಾರು ಅವರ ಪರವಾನಗಿ ಎಲ್ಲಿದೆ ಎಂಬುದು ತಿಳಿಯುತ್ತಿಲ್ಲ. ಒಂದು ವೇಳೆ ಅಕ್ರಮವಾಗಿ ಮರಳು ಸಾಗಣೆ ಮಾಡುವ ಟಿಪ್ಪರ್‌ ಮೂಲಕ ಅನಾಹುತವಾದರೆ ಬೇರೊಬ್ಬ ಚಾಲಕ ಬಂದು ನಾನೆ ಚಾಲನೆ ಮಾಡಿದ್ದು, ಅಪಘಾತ ಸಂಭವಿಸಿದೆ ಎಂದು ವಿಚಾರಣೆ ವೇಳೆ ಉತ್ತರ ತಿಳಿಸುತ್ತಾರೆ ಅಂದ ಮೇಲೆ ಮಾನ್ವಿಯಲ್ಲಿ ಕಾನೂನು ಸುವ್ಯವಸ್ಥೆ ಅನ್ನೋದು ಎಷ್ಟರ ಮಟ್ಟಿಗೆ ಇದೆ ಎಂದು ಕಣ್ಣ ಮುಂದೆಯೇ ಕಾಣುತ್ತದೆ.ದದ್ದಲ ಗ್ರಾಮದ ಹೊಸ ಊರಿನಲ್ಲಿರುವ ಮೈದಾನದಲ್ಲಿ ಮರಳು ಖದೀಮರು ರಾತ್ರೋ ರಾತ್ರಿ ಬಂದು ಮರಳು ತುಂಬಿ ಕೊಂಡು ಕಾಲುವೆ ಮಾರ್ಗದ ಮೂಲಕ ಸಾದಾಪುರ ಗ್ರಾಮಕ್ಕೆ ತಲುಪಿ ಕಪಗಲ್‌ ಕ್ರಾಸ್‌ ಮೂಲಕ ತೆರಳುತ್ತಾರೆ ಅಂದ ಮೇಲೆ ಕಳ್ಳರ ದಾರಿ ಎಂತದ್ದು ಎಂದು ಅವರ ರಹದಾರಿ ಮಾರ್ಗವೆ ತೋರಿಸುತ್ತದೆ. ದದ್ದಲ ಗ್ರಾಮದಲ್ಲಿ ನಿತ್ಯವೂ ಮರಳು ಮಾಫಿಯಾ ನಡೆಯುತ್ತದೆ ಅಂದ ಮೇಲೆ ಶಾಸಕ ಹಂಪಯ್ಯ ನಾಯಕರು ಅಕ್ರಮ ಮರಳು ಮಾಫಿಯಾ ದಂಧೆಯನ್ನು ಸ್ಟಾಪ್‌ ಮಾಡಿಸುತ್ತಾರಾ ಅಥವಾ ನಮಗೆ ಏನು ಗೊತ್ತಿಲ್ಲವೆಂದು ಕಾಣದೆ ಇರುವ ರೀತಿಯಲ್ಲಿ ಕಾರಲ್ಲಿ ಸಂಚಾರ ಮಾಡುತ್ತಾರಾ ಎಂಬುದು ಜನರ ಪ್ರಶ್ನೆಯಾಗಿದೆ.ಬಾಕ್ಸ್:-ಗಣಿ ಅಧಿಕಾರಿ ಮಹದೇವಸ್ವಾಮಿಯ ಸೇವೆ ‘ಠುಸ್ ಪಟಾಕಿ” ಗಣಿ ಅಧಿಕಾರಿ ಮಹದೇವಸ್ವಾಮಿ ಸಾಹೇಬ್ರು ಮಾತ್ರ ಅದೇನು ಡ್ಯೂಟಿ ಮಾಡುತ್ತಾರೆಂದು ಮಾನ್ವಿ ತಾಲೂಕಿನ ದದ್ದಲ ಗ್ರಾಮದ ಹೊಸ ಊರಿನಲ್ಲಿ ನಡೆಯುವ ಅಕ್ರಮ ಮರಳು ಮಾಫಿಯಾ ದಂಧೆಯೇ ಸಾಕ್ಷಿಯಾಗಿ ಕಾಣುತ್ತದೆ. ಮಹದೇವಸ್ವಾಮಿ ಸಾಹೇಬ್ರು ಮಾತ್ರ ನೋಡೋಕೆ ಮಹದೇವಸ್ವಾಮಿ ಆದರೆ ಇವರ ಆಡಳಿತ ಮಾತ್ರ “ಠುಸ್‌ ಪಟಾಕಿ” ಎಂದು ಮಾನ್ವಿಯ ಜನರೆ ಗುಸು ಗುಸು ಮಾತಾಡಿ ಕೊಳ್ಳುತ್ತಿದ್ದಾರೆ.‌

ಬಾಕ್ಸ್:-

ಬೀಟ್‌ ಪೊಲೀಸರು ಹೆಸರಿಗಷ್ಟೆ ಸೇವೆ “ಠುಸ್‌ ಪಟಾಕಿ”

ಮಾನ್ವಿ ತಾಲೂಕಿನ ದದ್ದಲ ಗ್ರಾಮದ ಹೊಸ ಊರಿನಲ್ಲಿ ಹಗಲು ಮತ್ತು ರಾತ್ರಿ ಟಿಪ್ಪರ್‌ಗಳ ಮೂಲಕ ಮರಳನ್ನು ಅಕ್ರಮವಾಗಿ ಸಾಗಣೆ ಮಾಡಿದರು ಸಹ ನಮ್ಮ ವ್ಯಾಪ್ತಿಯಲ್ಲಿ ಯಾವ ದಂಧೆ ನಡೆಯಲ್ಲ ಎಂದು ಬೀಟ್‌ ಪೊಲೀಸರು ಮೇಲಿನ ಅಧಿಕಾರಿಗಳಿಗೆ ವರದಿ ಕೊಡುತ್ತಾರೆ. ಆದರೆ ಇವರ ಸೇವೆ “ಠುಸ್‌ ಪಟಾಕಿ” ಆಗಿದ್ದರಿಂದ ದದ್ದಲ ಗ್ರಾಮದ ಹೊಸ ಊರಿನಲ್ಲಿ ಮರಳು ಮಾಫಿಯಾ ದಂಧೆ ನಡೆಯುತ್ತಿರುವುದು ಜಿ.ಪಿ.ಎಸ್‌ ಫೋಟೋಗಳೆ ಸಾಕ್ಷಿ.

ಕೋಟ್:-

ಅಕ್ರಮ ಮರಳು ಮಾಫಿ ದಂಧೆಯನ್ನು ತಡೆಯಲು ಕಾನೂನು ಬದ್ಧವಾಗಿ ನಿಯಂತ್ರಣ ಮಾಡಲಾಗುತ್ತದೆ. ಎಲ್ಲಿಯಾದರು ಮರಳು ಮಾಫಿಯಾ ದಂಧೆ ಮಾಡುತ್ತಿರುವುದು ಕಂಡು ಬಂದರೆ ಕಾನೂನು ಪ್ರಕಾರ ಕ್ರಮ ಜರುಗಿಸಿ ಪ್ರಕರಣ ದಾಖಲು ಮಾಡತ್ತೇವೆ.

– ಸೋಮಶೇಖರ ಕೆಂಚರೆಡ್ಡಿ,ಪಿಐ ಮಾನ್ವಿ ಠಾಣೆ.

ಕೋಟ್:-

ತುಂಗಭದ್ರಾ ನದಿಯ ಮೂಲಕ ಅಕ್ರಮವಾಗಿ ಮರಳು ಮಾಫಿಯಾ ದಂಧೆ ನಡೆಯುತ್ತಿರುವುದು ಕಾನೂನು ಪ್ರಕಾರ ತಪ್ಪು, ಇದೇ ರೀತಿಯಲ್ಲಿ ಮುಂದುವರಿದರೆ ಜೀವ ಸಂಕುಲಗಳಿಗೆ ತೊಂದರೆ ಅಲ್ಲದೆ ನೀರಿನ ಸಮಸ್ಯೆ ಕೂಡ ಸಂಭವಿಸುತ್ತದೆ.

ರಜಾಕ್ ಉಸ್ತಾದ್, ಕೆಪಿಸಿಸಿ ಮಾಧ್ಯಮ ವಕ್ತಾರರು.

ಕೋಟ್:-

ಸರ್ ದದ್ದಲ್ ಗ್ರಾಮದ ಹೊಸ ಊರಿನ ಮೈದಾನದಲ್ಲಿ ಮರಳು ಸಂಗ್ರಹ ಮಾಡಿಕೊಂಡು ಹಗಲು ಮತ್ತು ರಾತ್ರಿ ಕಾಲುವೆ ಮಾರ್ಗದ ಮೂಲಕ ಸಾದಾಪುರ ಗ್ರಾಮದ ಮೂಲಕ ತೆರಳುತ್ತಾರೆ.ನಮಗೆ ಟಿಪ್ಪರ್ ಶಬ್ಧ ಹಾಗೂ ಜೆಸಿಬಿಯ ಶಬ್ಧದಿಂದಾಗಿ ನಿದ್ದೆ ಇಲ್ಲದಂತಾಗಿದೆ. ಪೊಲೀಸ್ ಇಲಾಖೆಯ ಬೀಟ್ ಪೊಲೀಸರು ಮಾತ್ರ ಅದೇನು ಡ್ಯೂಟಿ ಮಾಡುತ್ತಾರೆ ತಿಳಿಯುತ್ತಿಲ್ಲ.

ಹೆಸರು ಹೇಳಲಿಚ್ಛಿಸದ, ದದ್ದಲ್ ಗ್ರಾಮದ ನಿವಾಸಿ.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button