“ಕವಿ ಮನ ಸವಿಮನ”…..

ಕಂಡಿದ್ದು ಕಾಣದ್ದು ಸತ್ಯತೇಯ ಸಾರವು

ನಿತ್ಯ ಜೀವನದ ನಡೆ ನುಡಿಯು

ಗತ ವೈಭವದ ಸಂಸ್ಕಾರ ಸಂಸ್ಕೃತಿಯು

ಕವನ ಕಥೆ ಸೃಜಿಸುವ ಶುದ್ಧ ಕವಿಮನವು

ನೇಸರ ಸಿರಿ ಬರದ ಬರಿ ಅಕ್ಕರೆಯ ಶಬ್ಧ

ಅಲಂಕಾರವು

ಸುರ ರೂಪದ ಸಂಗಮ ಸ್ವಂತ ಬರಹವು

ನೋವು ನಲಿವು ನಿಸ್ವಾರ್ಥ ಬೆಸುಗೆ ದುಃಖದಿ

ಕುಗ್ಗದೇ ಸುಖದಿ ಹಿಗ್ಗದೇ ನಗು ಮೊಗದ

ಸಂತೃಪ್ತ ಆಪ್ತಮಿತ್ರನು ಶಬ್ಧ ಕಂಡಾಕ್ಷಣ ನೈಜ

ಕಲ್ಪನಾ ವಿಹಾರಿ

ಲೇಖನಿಯ ಪಿಡಿದು ಹಕ್ಕಿಯ ಗೂಡಿನಾಂಗ

ಪದ ಕುಂಜದ ಕೆತ್ತನೆಯ ಕಾವ್ಯವು

ನೆಲ ಜಲ ನಾಡ ನುಡಿಗಾಗಿ ಜೀವನ ಮುಡಿಪು

ಸಮಾಜದ ಅಂಕು ಡೊಂಕು ಕೊಂಕುಗಳ

ಸುಧಾರಣೆಗೆ ಕಾವ್ಯರೂಪವು

ಜನಮನ ಬೆಳಗುವ ಹೃದಯವಂತ ಕವಿಜೀವಿ

ಮೆಚ್ಚಲಿ ಮೆಚ್ಚದಿರಲಿ ಅವನಿಚ್ಚೆಗೆ ಇರುವ

ನಿರತಂರ ಬರೆವ ಸುಭಾವ ಜೀವಿ

ವೈರತ್ವ ಮರೆತು ಸವಿ ಮಿತ್ರುತ್ವ ಬೆಸೆಯುವ

ಸ್ನೇಹಜೀವಿ

ಜಗದಲಿ ಕವಿ ಮನಗಳಿಗೆ ಸರ್ವರ ಓದಗರ

ಹೃದಯದಲಿ ಸದಾ ಗೌರವು ಆದರಣೀಯ

ಆಥಿತ್ಯವು ಕವಿಮನಗಳಿಗೆ ಸುನಮನಗಳು

-ಶ್ರೀದೆಶಂಸು

ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ

ದೇವರ ಹಿಪ್ಪರಗಿ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button