ಭಗವನ್ನಾಮ ಸ್ಮರಣೆಯಿಂದ ಮೋಕ್ಷದ ದಾರಿ ಸುಗಮ – ಡಾ, ವೈ.ರಾಜಾರಾಮ್ ಗುರುಗಳು ಅಭಿಮತ.
ಚಳ್ಳಕೆರೆ ಜು.04

ನಿತ್ಯ ಭಗವನ್ನಾಮ ಸ್ಮರಣೆಯಿಂದ ಮೋಕ್ಷ ಸಾಧನೆಯ ಗುರಿ ಸುಗಮವಾಗುತ್ತದೆ ಎಂದು ನರಹರಿ ನಗರದ ಶ್ರೀನರಹರಿ ಸದ್ಗುರು ಆಶ್ರಮದ ಪೀಠಾಧ್ಯಕ್ಷರಾದ ಡಾ, ವೈ.ರಾಜಾರಾಮ್ ಗುರುಗಳು ತಿಳಿಸಿದರು. ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ “ಶ್ರೀಮದ್ ಭಾಗವತ ಪ್ರವಚನ ಸಪ್ತಾಹ” ಕಾರ್ಯಕ್ರಮದ ಮೊದಲ ದಿನದ ಸತ್ಸಂಗದ ದಿವ್ಯ ಸಾನಿಧ್ಯ ವಹಿಸಿ ಅವರು “ಶ್ರೀಮದ್ ಭಾಗವತದಲ್ಲಿ ಮೋಕ್ಷಧರ್ಮ” ಎಂಬ ವಿಷಯವಾಗಿ ಪ್ರವಚನ ನೀಡಿದರು.

ಮನುಷ್ಯ ಕ್ಷಣಿಕ ಸುಖದ ಹಿಂದೆ ಬಿದ್ದು ದುಃಖವನ್ನೇ ಅನುಭವಿಸುತ್ತಾನೆ. ಆದರೆ ಶಾಶ್ವತ ಸುಖದ ಗಣಿಯಾದ ಭಗವಂತನನ್ನು ಭಕ್ತ ಆಶ್ರಯಿಸಬೇಕು. “ಶ್ರೀಮದ್ ಭಾಗವತ” ದ ನಿತ್ಯ ಶ್ರವಣ ಮತ್ತು ಅಧ್ಯಯನದಿಂದ ನಾವು ಖಂಡಿತವಾಗಿಯೂ ನಾಲ್ಕನೇ ಪುರುಷಾರ್ಥವಾದ ಮೋಕ್ಷವನ್ನು ಪಡೆದು ಭಗವಂತನ ಸನ್ನಿಧಾನವನ್ನು ಸೇರಬಹುದು ಎಂದರು. ಈ ಸಂದರ್ಭದಲ್ಲಿ ನವಲಗುಂದದ ಶ್ರೀಶಾರದೇಶ್ವರಿ ಆಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ಅನನ್ಯಮಯೀ ಅವರು ವಿಶೇಷ ಭಜನೆ ಮತ್ತು ಮಂಗಳಾರತಿ ಕಾರ್ಯಕ್ರಮವನ್ನು ನಡೆಸಿ ಕೊಟ್ಟರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ವಹಿಸಿದ್ದರು. ಪ್ರವಚನ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಜ್ಯೋತಿ ಪ್ರಕಾಶ್, ಮಂಜುಳ. ಕೆ,ವಿಮಲ, ಸಿರಿ, ವನಜಾಕ್ಷಿ ಮೋಹನ್, ಯತೀಶ್.ಎಂ ಸಿದ್ದಾಪುರ, ಗೀತಾ ನಾಗರಾಜ್, ಗೀತಾ ವೆಂಕಟೇಶರೆಡ್ಡಿ, ಪಿ.ಎಸ್ ಮಾಣಿಕ್ಯ, ಉಮೇಶ್, ಕಾವೇರಿ ಸುರೇಶ್, ಕವಿತಾ, ಜಿ.ಯಶೋಧಾ ಪ್ರಕಾಶ್, ರಶ್ಮಿ ಪಂಡಿತಾರಾಧ್ಯ, ಭಾರತಿ, ವೆಂಕಟಸುಬ್ಬಣ್ಣ, ಸಂತೋಷ್, ಚೇತನ್, ಡಾ, ಭೂಮಿಕ, ಋತಿಕ್, ಭಾಗ್ಯಲಕ್ಷ್ಮೀ, ರತ್ನಮ್ಮ, ಜಗದಂಬಾ ಸೇರಿದಂತೆ ಶ್ರೀಶಾರದಾಶ್ರಮ ಹಾಗೂ ನರಹರಿ ಸದ್ಗುರು ಆಶ್ರಮದ ಸದ್ಭಕ್ತರು ಉಪಸ್ಥಿತರಿದ್ದರು.
ವರದಿ-ಯತೀಶ್.ಎಂ ಸಿದ್ದಾಪುರ, ಚಳ್ಳಕೆರೆ.