ಶಿಕ್ಷಕರ ದಿನಾಚರಣೆಗೆ ಗೌರವದ ಸ್ಪರ್ಶ – ನೀಡಿದ ಉಡುಪಿ ಬ್ಲಾಕ್ ಕಾಂಗ್ರೆಸ್ ಗೆ ಅಭಿನಂದನೆಗಳು.

ಉಡುಪಿ ಸ.06

ಬ್ಲಾಕ್ ಕಾಂಗ್ರೆಸ್ ಸಮಿತಿಯು ಶಿಕ್ಷಕರ ದಿನಾಚರಣೆಯನ್ನು ಕೇವಲ ಒಂದು ದಿನದ ಆಚರಣೆ ಯಾಗಿಸದೆ, ಶಿಕ್ಷಕರ ತ್ಯಾಗ ಮತ್ತು ಬದ್ಧತೆಗೆ ನಿಜವಾದ ಗೌರವ ಸಲ್ಲಿಸುವ ಮೂಲಕ ಸಮಾಜದಲ್ಲಿ ಒಂದು ಹೊಸ ಮಾದರಿಯನ್ನು ಸ್ಥಾಪಿಸಿದೆ. ಅಧ್ಯಕ್ಷರಾದ ರಮೇಶ್ ಕಾಂಚನ್ ಅವರ ನೇತೃತ್ವದಲ್ಲಿ, ನಿವೃತ್ತ ಶಿಕ್ಷಕರನ್ನು ಅವರ ನಿವಾಸಗಳಿಗೆ ತೆರಳಿ ಸನ್ಮಾನಿಸಿದ ಈ ಕಾರ್ಯವು, ಪಕ್ಷದ ಬದ್ಧತೆ ಕೇವಲ ರಾಜಕೀಯಕ್ಕೆ ಸೀಮಿತವಲ್ಲ, ಬದಲಾಗಿ ಮಾನವೀಯ ಸಂಬಂಧಗಳನ್ನೂ ಗಟ್ಟಿ ಗೊಳಿಸುತ್ತದೆ ಎಂಬುದನ್ನು ತೋರಿಸಿ ಕೊಟ್ಟಿದೆ.

ಇಂದು ಶಿಕ್ಷಕರನ್ನು ಸನ್ಮಾನಿಸುವುದು ಮಾಮೂಲಿ ಯಾಗಿದ್ದರೂ, ಅವರ ಮನೆಗೇ ಹೋಗಿ ಗೌರವಿಸುವುದು ನಿಜಕ್ಕೂ ಮೆಚ್ಚುವಂತಹ ಸಂಗತಿ. ಇದು ನಿವೃತ್ತ ಶಿಕ್ಷಕರಾದ ಶ್ರೀಮತಿ ನಿರ್ಮಲಾ, ಶ್ರೀಮತಿ ಹೆಲೆನ್ ಸಾಲಿನ್ಸ್, ಶ್ರೀಮತಿ ಅಮಿತಾ ಕಲಾ, ಶ್ರೀಯುತ ಚಂದ್ರಾಯ ಆಚಾರ್ಯ ಮತ್ತು ಶ್ರೀಯುತ ವಿಶ್ವನಾಥ್ ಬಾಯರಿ ಅವರಿಗೆ ವಿಶೇಷ ಗೌರವ ನೀಡಿದೆ. ಈ ಕಾರ್ಯಕ್ರಮದಲ್ಲಿ ಪಕ್ಷದ ನಾಯಕರು ಕೇವಲ ಶಾಲು, ಹೂಗುಚ್ಛ ಮತ್ತು ಸ್ಮರಣಿಕೆಗಳನ್ನು ನೀಡಿದ್ದಲ್ಲಾ, ಬದಲಾಗಿ ಅವರೊಂದಿಗೆ ಬೆರೆತು, ಆಶೀರ್ವಾದ ಪಡೆದದ್ದು ಈ ಸನ್ಮಾನಕ್ಕೆ ಒಂದು ಭಾವನಾತ್ಮಕ ಆಯಾಮ ನೀಡಿದೆ.

ಈ ಸಂಕಲ್ಪವು ಕೇವಲ ವ್ಯಕ್ತಿಗಳಲ್ಲಾ, ಇಡೀ ಶಿಕ್ಷಕ ಸಮುದಾಯದ ಬಗೆಗಿನ ಉಡುಪಿ ಬ್ಲಾಕ್ ಕಾಂಗ್ರೆಸ್‌ನ ಗೌರವ ಮತ್ತು ಕೃತಜ್ಞತೆಯನ್ನು ಎತ್ತಿ ತೋರಿಸುತ್ತದೆ. ಸಮಾಜವನ್ನು ರೂಪಿಸುವ ಶಿಕ್ಷಕರ ಶ್ರಮವನ್ನು ಗುರುತಿಸಿ, ಅವರನ್ನು ಸದಾ ಬೆಂಬಲಿಸುವ ಬದ್ಧತೆಯನ್ನು ಕಾಂಗ್ರೆಸ್ ಪಕ್ಷವು ಪುನರುಚ್ಚರಿಸಿದೆ. ಈ ಮೂಲಕ, ಶಿಕ್ಷಣ ಮತ್ತು ಶಿಕ್ಷಕರಿಗೆ ಕಾಂಗ್ರೆಸ್ ಪಕ್ಷದ ಆದ್ಯತೆ ಎಷ್ಟಿದೆ ಎಂಬುದನ್ನು ಉಡುಪಿ ಘಟಕವು ಸಾಬೀತು ಪಡಿಸಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ನಾಯಕರಿಗೂ ಮತ್ತು ಈ ಅರ್ಥಪೂರ್ಣ ಕಾರ್ಯವನ್ನು ಆಯೋಜಿಸಿದ ಉಡುಪಿ ಬ್ಲಾಕ್ ಕಾಂಗ್ರೆಸ್‌ಗೆ ಅಭಿನಂದನೆಗಳು.

ವರದಿ:ಆರತಿ.ಗಿಳಿಯಾರು.ಉಡುಪಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button