ಶ್ರೀ ಗ್ರಾಮದೇವತೆ ಹಾಗೂ ಕೊಡೆಕಲ್ ಬಸವೇಶ್ವರ – ಅದ್ದೂರಿ ಜಾತ್ರೆ.
ರೂಡಗಿ ಮೇ.22

ಮುದ್ದೇಬಿಹಾಳ ತಾಲೂಕಿನ ರೂಡಗಿ ಗ್ರಾಮದಲ್ಲಿ ಪ್ರತಿ ವರ್ಷಕ್ಕೊಮ್ಮೆ ಜರುಗುವ ಗ್ರಾಮ ದೇವತೆ ಜಾತ್ರೆ ಹಾಗೂ ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಕೊಡೆಕಲ್ ಬಸವೇಶ್ವರ ಜಾತ್ರೆ ಜರಗುವುದು. ಮೇ 23. ಶುಕ್ರವಾರದಂದು ಮುಂಜಾನೆ 9: 00 ಗಂಟೆಗೆ ಸಕಲ ವಾದ್ಯಗಳೊಂದಿಗೆ ಶ್ರೀ ಗ್ರಾಮ ದೇವತೆಯು ಗಂಗಾ ಸ್ಥಳಕ್ಕೆ ಹೋಗಿ ಬರುವುದು. ಅಂದೇ ರಾತ್ರಿ 10 ಗಂಟೆಗೆ ವಾದಿ ಪ್ರತಿವಾದಿ ಡೊಳ್ಳಿನ ಪದಗಳು ಜರಗುವವು. ಶ್ರೀ ಮಾಳಿಂಗರಾಯ ಡೊಳ್ಳಿನ ಸಂಘ ಮುಗಳಿಹಾಳ ತಾ,/ರಾಮದುರ್ಗ ಮುಖ್ಯ ಗಾಯಕರು ಸುಮಿತ್ರ ಹಾಗೂ ಸಂಗಡಿಗರು. ಹಾಗೂ ಶ್ರೀ ಅಮೋಘ ಸಿದ್ದೇಶ್ವರ ಡೊಳ್ಳಿನ ಸಂಘ ಕಲಗೂರ್ಕಿ ತಾ /ಬ ಬಾಗೇವಾಡಿ ಮುಖ್ಯ ಗಾಯಕರು ಲಕ್ಷ್ಮಿ ಪೂಜಾರಿ ಹಾಗೂ ಸಂಗಡಿಗರು. ಇವರಿಂದ ನಡೆಯಲಾಗುತ್ತದೆ. ಮೇ 24 ಶನಿವಾರ ದಂದು ಮುಂಜಾನೆ 10. ಗಂಟೆಗೆ ರಾಜ್ಯ ಮಟ್ಟದ ತೇರಬಂಡಿ ಸ್ಪರ್ಧೆ ನಡೆಯಲಾಗುತ್ತದೆ.

ಮೇ. 25 ರವಿವಾರ ದಂದು ಮುಂಜಾನೆ 10. ಗಂಟೆಗೆ ಎತ್ತುಗಳಿಂದ ಭಾರವಾದ ಕಲ್ಲು ಜಗ್ಗಿಸುವುದು. ಮೇ .26 ಸೋಮವಾರ ದಂದು ಮುಂಜಾನೆ 9: 00 ಗಂಟೆಗೆ ಶ್ರೀ ಕೊಡೆಕಲ್ ಬಸವೇಶ್ವರ ಪಲ್ಲಕ್ಕಿಯು ಸಕಲ ವಾದ್ಯಗಳೊಂದಿಗೆ ಗಂಗಾ ಸ್ಥಳಕ್ಕೆ ಹೋಗಿ ಬರುವುದು ನಂತರ ಪಂಚ ಕಳಸವು ಶಿಖರಕ್ಕೇರುವುದು. ಮುಂಜಾನೆ 11: 00 ಗಂಟೆಗೆ ಸದ್ಭಕ್ತರಿಂದ ಸುಪ್ರಸಿದ್ಧ ಭಜನೆಗಳು ನಂತರ ಮಧ್ಯಾಹ್ನ ಮಹಾ ಪ್ರಸಾದ. ಮೇ. 27 ಮಂಗಳವಾರ ದಂದು ಮುಂಜಾನೆ 9: 00 ಗಂಟೆಗೆ ಭಾರವಾದ ಚೀಲ ಎತ್ತುವುದು. 11 ಗಂಟೆಗೆ ಸಂಗ್ರಾಣಿ ಕಲ್ಲು ಸಾಗ ಎತ್ತುವುದು. ಮಧ್ಯಾಹ್ನ 12 ಗಂಟೆಗೆ ಸಂಗ್ರಾನಿ ಕಲ್ಲು ಒತ್ತುಗಲ್ಲು ಮಾಡುವುದು. ಜಾತ್ರೆಯ ಅಂಗವಾಗಿ ಪ್ರತಿ ದಿನ ಅನ್ನ ಸಂತರ್ಪಣೆ ಇರುತ್ತದೆ. ಎಂದು ಜಾತ್ರಾ ಕಮೀಟಿಯವರು ತಿಳಿಸಿದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಬಸವರಾಜ.ಸಂಕನಾಳ.ಮುದ್ದೇಬಿಹಾಳ