ನಾಗಮೋಹನ್ ದಾಸ್ ವರದಿ, ಲೋಪ ಸರಿ ಪಡಿಸಿ – ಮಂಜುನಾಥ್ ಚಲವಾದಿ.
ಮುದ್ದೇಬಿಹಾಳ ಆ.12





ನ್ಯಾ ಎಚ್. ಎನ್.ಯ ಮೋಹನ್ ದಾಸ್ ಆಯೋಗ ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಚಲವಾದಿ (ಹೊಲಯ) ಸಮುದಾಯಕ್ಕೆ ಅನ್ಯಾಯ ಮಾಡಿದೆ. ಸರಿಯಾದ ದತ್ತಾಂಶ ಸಂಗ್ರಹಿಸದೆ. ಹಿಂದಿನ ವರದಿಯನ್ನೇ ಕಾಫಿ ಪೇಸ್ಟ್ ಮಾಡಲಾಗಿದೆ. ಎಂದು ಚಲವಾದಿ ಸಮಾಜದ ರಾಜ್ಯ ಸಮಿತಿ ಸದಸ್ಯ ಮಂಜುನಾಥ್ ಚಲವಾದಿ (ಬಸರಕೋಡ್) ಆರೋಪಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಚಲವಾದಿ ಸಮಾಜಕ್ಕೆ ಸೇರಿದ ಅನೇಕ ಉಪ ಜಾತಿಗಳನ್ನು ವಿಂಗಡಿಸಿ. ಜನಸಂಖ್ಯೆ ಕಡಿಮೆ ಆಗುವಂತೆ ಮಾಡಿದೆ. ಬಲಗೈ ಸಮುದಾಯದ ಚಲವಾದಿ (ಹೊಲಯ) ಹೊಲೇರ. ಪರಯ್ಯ. ಚಾಡಲ. ವಿವಿದ. ಉಪ ಜಾತಿಗಳನ್ನು ವಿಂಗಡಿಸಿ ಸಾಮಾಜಿಕ ಅನ್ಯಾಯ ಮಾಡಲಾಗಿದೆ. ಶತಮಾನದಿಂದ ಶೋಷಣೆಗೆ ಒಳಗಾದ ಸಮಾಜವನ್ನು ರಾಜಕೀಯವಾಗಿ. ಮುಗಿಸುವ ಕೆಲಸ ಇದಾಗಿದೆ. ವರದಿಯಲ್ಲಿನ ಲೋಪಗಳನ್ನು ಸರಿಪಡಿಸಿ ಜಾರಿ ಮಾಡಬೇಕು. ಇಲ್ಲವಾದರೆ ರಾಜ್ಯದ ಎಲ್ಲಾ ತಾಲೂಕು ಜಿಲ್ಲಾ ಕೇಂದ್ರಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು. ಎಂದು ಎಚ್ಚರಿಸಿದ್ದಾರೆ. ಆದಿ ಕರ್ನಾಟಕ. ಆದಿ ದ್ರಾವಿಡ್ ಉಪ ಜಾತಿಗಳಲ್ಲಿ. ಶೇಕಡ 85 ಹೆಚ್ಚು ಹೊಲಯ ಜಾತಿಗೆ ಸೇರಿದ. ಜನರಿದ್ದು ಅವರನ್ನು ವಿಂಗಡಣೆ ಮಾಡಿ. ಸಾಮಾಜಿಕ ನ್ಯಾಯ ದೊರಕದಂತೆ ಮಾಡಲಾಗಿದೆ. ಚಲವಾದಿ. ಹೊಲಯ. ಎರಡನ್ನು ಸೇರಿಸಿದರೆ ಕರ್ನಾಟಕದಲ್ಲಿ. ಬಲಗೈ ಸಮುದಾಯದ ಜನಸಂಖ್ಯೆ ಹೆಚ್ಚಾಗಲಿದೆ. ಸಮಾಜಿಕ ನ್ಯಾಯದ ಸಲುವಾಗಿ ಬಲಗೈ ಸಮುದಾಯದ ನಿಖರ ಸಂಖ್ಯೆ ನಮೂದಿಸಿ.7% ಒಳ ಮೀಸಲಾತಿ ಕಲ್ಪಿಸಬೇಕು ಎಂದು ಆಗ್ರಿಸಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಬಸವರಾಜ.ಸಂಕನಾಳ.ಮುದ್ದೇಬಿಹಾಳ