ನಿಧನ ವಾರ್ತೆ:ತಳವಾರ. ದುರುಗಪ್ಪ ನಿಧನ.
ಕೂಡ್ಲಿಗಿ ಆ.19

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪಟ್ಟಣದ ಡಾ, ಬಿ.ಆರ್ ಅಂಬೇಡ್ಕರ್ ನಗರ 14 ನೇ. ವಾರ್ಡಿನಲ್ಲಿ ತಳವಾರ ದುರುಗಪ್ಪ ಇವರು ವಾಸವಿದ್ದು (60) ಇಂದು ಆಗಸ್ಟ್ 19 ಬೆಳಿಗಿನ ಜಾವಾ 5:40 ಗಂಟೆಗೆ ಅನಾರೋಗ್ಯ ನಿಮಿತ್ತ ಹೊಸಪೇಟೆಯ ಸಾರ್ವಜನಿಕ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇವರು ಕೆಲವೇ ದಿನಗಳಲ್ಲಿ ಅನಾರೋಗ್ಯ ದಿಂದ ಬಳಲುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ. ಮೃತರು ಇವರ ಕುಟುಂಬದಲ್ಲಿ 3 ಜನ ಗಂಡು ಹಾಗೂ 3 ಹೆಣ್ಣು ಮಕ್ಕಳು ಇದ್ದು ಮೃತ ತಳವಾರ ದುರುಗಪ್ಪನಿಗೆ ಹಾಗೂ ಮೊಮ್ಮಕ್ಕಳಿದ್ದು ತುಂಬು ಕುಟುಂಬವನ್ನು ಹೊಂದಿದವರಾಗಿದ್ದರು. ಅಂತ್ಯ ಕ್ರಿಯೆ:- ಆಗಸ್ಟ್ 19 ರಂದು ಮಧ್ಯಾಹ್ನ 1.30 ಗಂಟೆಗೆ ಪಟ್ಟಣದ 16 ನೇ. ವಾರ್ಡಿನ ರಾಜೀವ್ ಗಾಂಧಿ ನಗರ ಪಕ್ಕದಲ್ಲಿ ಬರುವ ರುದ್ರ ಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು. ಸಂತಾಪ:- ತಂಗಿಯರು ತಮ್ಮ ಹಾಗೂ ಅಣ್ಣಂದಿರು ಹಾಗೂ ಅಪಾರ ಕುಟುಂಬ ಬಂಧು ಬಳಗದವರು ಹಾಗೂ ಡಾ, ಬಿ.ಆರ್ ಅಂಬೇಡ್ಕರ್ ನಗರದ ಹಿರಿಯರು ಅಗಲಿಕೆ ಯಿಂದಾಗಿ ಅವರ ಕುಟುಂಬದಲ್ಲಿ ದುಖಃ ಮಡುವು ಗಟ್ಟಿದೆ ಸೂಚಕದ ಛಾಯೆ ಆವರಿಸಿದೆ. ಸಮಸ್ತ ಬಂಧುಗಳು ದುಖಃ ತಪ್ತರಾಗಿದ್ದಾರೆ. ಮಾದಿಗ ಸಮುದಾಯದವರು ಸೇರಿದಂತೆ. ವಿವಿದ ಸಮುದಾಯದವರು. ಕೂಡ್ಲಿಗಿ ಅಂಬೇಡ್ಕರ ನಗರ ಸಮಸ್ತ ಗ್ರಾಮಸ್ಥರು. ಕ್ಷೇತ್ರದ ಶಾಸಕರಾದ ಡಾ, ಎನ್.ಟಿ ಶ್ರೀನಿವಾಸ್ ರವರು. ಕೂಡ್ಲಿಗಿ ಪಟ್ಟಣ ಪಂಚಾಯ್ತಿ ಅಧ್ಯಕ್ಷರು ಸರ್ವ ಸದಸ್ಯರು ವಿವಿಧ ಜನ ಪ್ರತಿನಿಧಿಗಳು. ಕೂಡ್ಲಿಗಿ ತಾಲೂಕಿನ ಸಮಸ್ತ ಮಾದಿಗ ಸಮುದಾಯದ ಎಲ್ಲಾ ಸಂಘಟನೆಗಳು. ಹಾಗೂ ದಲಿತ ಪರ ಸಂಘಟನೆಗಳು ಪೌರ ಕಾರ್ಮಿಕರು ಮಹಿಳಾ ರೈತರ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳವರು. ವಿವಿಧ ಪಕ್ಷಗಳ ಪ್ರಮುಖರು ಸಮಾಜ ಸೇವಕರು ಹೋರಾಟಗಾರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ.ಬಿ.ಸಾಲುಮನೆ.ಕೂಡ್ಲಿಗಿ