ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ – ವಿಶೇಷ ಭಜನೆ ಮತ್ತು ಸತ್ಸಂಗ.

ಚಳ್ಳಕೆರೆ ಆ.20

ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ “ಶ್ರೀಕೃಷ್ಣ ಜನ್ಮಾಷ್ಟಮಿ” ಯ ಪ್ರಯುಕ್ತ ಹೊಸಪೇಟೆಯ ಶ್ರೀರಾಮಕೃಷ್ಣ ಗೀತಾಶ್ರಮದ ಅಧ್ಯಕ್ಷರಾದ ಪೂಜ್ಯ ಸ್ವಾಮಿ ಸುಮೇಧಾನಂದಜೀ ಮಹಾರಾಜ್ ಅವರಿಂದ “ವಿಶೇಷ ಭಜನೆ ಮತ್ತು ಭಗವನ್ನಾಮ ಸಂಕೀರ್ತನಾ” ಕಾರ್ಯಕ್ರಮ ನಡೆದರೆ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಪೂಜ್ಯ ಮಾತಾಜೀ ತ್ಯಾಗಮಯೀ ಅವರು ಸತ್ಸಂಗದ ದಿವ್ಯ ಸಾನಿಧ್ಯ ವಹಿಸಿ “ಶ್ರೀಕೃಷ್ಣನ ಮಹಾನ್ ಚಾರಿತ್ರ್ಯ, ನಂದ ಮಹೋತ್ಸವ ಮತ್ತು ಅವನ ಬಾಲ ಲೀಲೆಗಳ” ಬಗ್ಗೆ ವಿಶೇಷ ಪ್ರವಚನ ಕಾರ್ಯಕ್ರಮವನ್ನು ನಡೆಸಿ ಕೊಟ್ಟರು. ಮಾತಾಜೀ ತ್ಯಾಗಮಯೀ ಮಾತನಾಡಿ ಪರಮ ನಿರ್ವಿಕಾರ ಚಿತ್ತ ಶ್ರೀಕೃಷ್ಣನದು, ಅವನ ಬಾಲ ಲೀಲೆಗಳು ಮತ್ತು ನಂದ ಮಹೋತ್ಸವದ ಘಟನೆಗಳು ಆನಂದದಾಯಕವಾಗಿವೆ. ಅವನ ಅನೇಕ ಸದ್ಗುಣಗಳು ಇಂದಿನ ಜನರಿಗೆ ಮಾದರಿಯಾಗಿವೆ. “ಶ್ರೀಕೃಷ್ಣನ ವಿಚಾರಗಳನ್ನು ಒಳಗೊಂಡ ಶ್ರೀಮದ್ ಭಗವದ್ಗೀತೆ” ಮತ್ತು “ಶ್ರೀಮದ್ ಭಾಗವತ” ಸದ್ಗ್ರಂಥಗಳು ಸಾರ್ಥಕ ಜೀವನಕ್ಕೆ ಬೇಕಾದ ಹಲವಾರು ಉನ್ನತ ವಿಚಾರಗಳನ್ನು ತಿಳಿಸುವ ಮಹತ್ವದ ಪುಸ್ತಕಗಳು ಎಂದು ಬಣ್ಣಿಸಿದರು.

ಜನ್ಮಾಷ್ಟಮಿಯ ಸತ್ಸಂಗ ಕಾರ್ಯಕ್ರಮದಲ್ಲಿ ಶ್ರೀಶಾರದಾಶ್ರಮದ ಸದ್ಭಕ್ತರಾದ ಉದಯಕುಮಾರ್, ಬಸವರಾಜ್ ಎನ್, ಸುಮಾ ಪ್ರಕಾಶ್, ಹೂವಿನ ಲಕ್ಷ್ಮೀದೇವಮ್ಮ, ಶ್ರೀಮತಿ ಎಂ.ಗೀತಾ ನಾಗರಾಜ್, ಜಿ.ಯಶೋಧಾ ಪ್ರಕಾಶ್, ವನಜಾಕ್ಷಿ ಮೋಹನ್, ಯತೀಶ್ ಎಂ ಸಿದ್ದಾಪುರ, ಪಿ.ಎಸ್ ಮಾಣಿಕ್ಯ ಸತ್ಯನಾರಾಯಣ, ಕವಿತಾ ಗುರುಮೂರ್ತಿ, ವೆಂಕಟಲಕ್ಷ್ಮೀ, ಸರಸ್ವತಿ ಗೋವಿಂದರಾಜು, ಗೀತಾ ವೆಂಕಟೇಶರೆಡ್ಡಿ, ಸಿ.ಎಸ್ ಭಾರತಿ, ಕಾಲುವೆಹಳ್ಳಿ ಪಾಲಕ್ಕ, ಮಂಜುಳ, ಅಂಬುಜಾ ಶಾಂತಕುಮಾರ್, ಮಂಜುಳ ಉಮೇಶ್, ಲಕ್ಷ್ಮೀ ವೆಂಕಟಾಚಲಂ, ಡಾ, ಭೂಮಿಕ, ಸಂತೋಷ್, ಚೇತನ್, ಚೆನ್ನಕೇಶವ, ಲಕ್ಷ್ಮೀ, ಲತಾ ಭಕ್ತವತ್ಸಲ, ಪುಷ್ಪಲತಾ, ನಾಗರತ್ನಮ್ಮ, ಶಾರದಾಮ್ಮ, ರತ್ನಮ್ಮ ಚೆನ್ನಬಸಪ್ಪ, ಅಂಬಿಕಾ ಪರಮೇಶ್ವರ್, ಗೋವಿಂದಶೆಟ್ಟಿ, ಸುಮನಾ ಕೋಟೇಶ್ವರ, ಅನುಸೂಯ, ಕಾವೇರಿ, ರಶ್ಮಿ ವಸಂತ, ಯಶಸ್ವಿ ಸೇರಿದಂತೆ ಸಾಕಷ್ಟು ಸಂಖ್ಯೆಯ ಸದ್ಭಕ್ತರು ಭಾಗವಹಿಸಿದ್ದರು .

ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button