ಎತ್ತುಗಳ ಮೈ ತೊಳೆಯಲು ಹೋಗಿದ್ದ ರೈತನ – ಎಳೆದೊಯ್ದ ಮೊಸಳೆ.

ಮುದ್ದೇಬಿಹಾಳ ಆ.23

ಅಮಾವಾಸ್ಯೆ ಪ್ರಯುಕ್ತ ಎತ್ತುಗಳನ್ನು ತೊಳೆಯಲು ಕೃಷ್ಣಾ ನದಿ ತೀರಕ್ಕೆ ತೆರಳಿದ್ದ ರೈತ ರೊರ್ವರನ್ನು ಮೊಸಳೆ ಎಳೆದು ಕೊಂಡು ಹೋಗಿರುವ ಘಟನೆ ತಾಲೂಕಿನ ಕುಂಚಗನೂರು ಗ್ರಾಮದಲ್ಲಿ ಶನಿವಾರ ನಡೆದಿದೆ. ತಂಗಡಿಗಿ ಗ್ರಾ.ಪಂ ವ್ಯಾಪ್ತಿಯ ಕುಂಚಗನೂರು ಗ್ರಾಮದ ಪಂಪ ಹೌಸ್ ಬಳಿ ಈ ಘಟನೆ ನಡೆದಿದೆ. ಕುಂಚಗನೂರ ಗ್ರಾಮದ ಕಾಶಿನಾಥ್. ಹನಮಂತ. ಕಂಬಳಿ. (39) ಎಂಬುವರೇ ಮೊಸಳೆ ದಾಳಿಗೆ ಒಳಗಾಗಿ ನಾಪತ್ತೆ ಯಾದವರು. ಕಾಶಿನಾಥ್ ಅಮವಾಸ್ಯೆಯ ಹಿನ್ನೆಲೆ ಎತ್ತುಗಳನ್ನು ತೊಳೆಯಲೆಂದು. ಹೋದಾಗ ಮೊಸಳೆ ದಾಳಿ ಮಾಡಿ. ಅವರನ್ನು ಹೊತ್ತು ಹೊದಿದನ್ನು ನೋಡಿರುವುದಾಗಿ ಕುಂಚಗನೂರು ಗ್ರಾಮದ ದರೇಪ್ಪ ಬಟಗುರ್ಕಿ ಎಂಬುವವರು ತಿಳಿಸಿದ್ದಾರೆ. ಕಾರ್ಯಾಚರಣೆ:- ಕಂದಾಯ ಇಲಾಖೆ. ಅಗ್ನಿಶಾಮಕ. ಪೋಲಿಸ್ ಇಲಾಖೆಯಿಂದ. ಮೊಸಳೆ ಹೊತ್ತೊಯ್ದಿದಿರುವ ವ್ಯಕ್ತಿಗಾಗಿ ಕಾರ್ಯಾಚರಣೆ ಆರಂಭಿಸಲಾಗಿದೆ. ಕೂಡಲ ಸಂಗಮ ದಿಂದ ಬೋಟ್ ತರಿಸಲಾಗಿದ್ದು. ಕಾರ್ಯಾಚರಣೆ ಮುಂದುವರಿಸಲಾಗುವುದು. ಎಂದು ಕಂದಾಯ ಇಲಾಖೆಯ ಮೂಲಗಳು ತಿಳಿಸಿವೆ. ಸ್ಥಳದಲ್ಲಿ ಕಂದಾಯ ನಿರೀಕ್ಷಣಾ ಪವನ್.ತಳವಾರ್. ಗ್ರಾಮ ಆಡಳಿತ ಅಧಿಕಾರಿ. ಹೆಚ್.ಸಿ ಕೊರಬು. ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಉಪಸ್ಥಿತರಿದ್ದರು ಎಂದು ವರದಿಯಾಗಿದೆ.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಬಸವರಾಜ.ಸಂಕನಾಳ.ಮುದ್ದೇಬಿಹಾಳ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button