ಸಮಾಜ ಸೇವಕ ತಾರಾನಾಥ ಹೊಳ್ಳ ರಿಂದ – ನೆಲ್ಲಿಬೆಟ್ಟು ಗಣೇಶೋತ್ಸವಕ್ಕೆ ಮೆರುಗು.

ಉಡುಪಿ ಸ.03

ನಮ್ಮೂರಿನ ಹೆಮ್ಮೆಯ ಸಮಾಜ ಸೇವಕರು ಹಾಗೂ ಗೆಳೆಯರ ಬಳಗ (ರಿ) ಕಾರ್ಕಡ ಇದರ ಅಧ್ಯಕ್ಷರಾದ ತಾರಾನಾಥ ಹೊಳ್ಳ ಅವರು ನೆಲ್ಲಿಬೆಟ್ಟು ಗಣೇಶೋತ್ಸವಕ್ಕೆ ಆಗಮಿಸಿ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು. ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡಿರುವ ತಾರಾನಾಥ ಹೊಳ್ಳರು, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಸಮುದಾಯದ ಒಗ್ಗಟ್ಟಿಗೆ ಪ್ರೇರಣೆ ಯಾಗಿದ್ದಾರೆ.

ತಾರಾನಾಥ ಹೊಳ್ಳರಂತಹ ಸಮಾಜ ಸೇವಕರ ಉಪಸ್ಥಿತಿಯು, ಕೇವಲ ಧಾರ್ಮಿಕ ಆಚರಣೆಯಷ್ಟೇ ಅಲ್ಲದೆ, ಸಮಾಜದಲ್ಲಿ ಸೌಹಾರ್ದ ಮತ್ತು ಸಹಬಾಳ್ವೆಗೆ ಪ್ರಾಮುಖ್ಯತೆ ನೀಡುತ್ತದೆ. ಅವರ ನಡೆ, ನುಡಿಗಳು ಸಾರ್ವಜನಿಕರಿಗೆ ಒಂದು ಉತ್ತಮ ಸಂದೇಶ ನೀಡುತ್ತವೆ. ಗೆಳೆಯರ ಬಳಗದ ಮೂಲಕ ಹೊಳ್ಳರು ಹಲವಾರು ಸಮಾಜ ಮುಖಿ ಕಾರ್ಯಗಳನ್ನು ನಡೆಸುತ್ತಾ ಬಂದಿದ್ದಾರೆ. ಅವರ ಈ ಸೇವಾ ಮನೋಭಾವವು ಸಮುದಾಯಕ್ಕೆ ಒಂದು ಉತ್ತಮ ಮಾದರಿಯಾಗಿದೆ.

ನೆಲ್ಲಿಬೆಟ್ಟು ಗಣೇಶೋತ್ಸವದಲ್ಲಿ ಅವರ ಉಪಸ್ಥಿತಿಯು, ರಾಜಕೀಯ ಮತ್ತು ಸಾಮಾಜಿಕ ವ್ಯತ್ಯಾಸಗಳನ್ನು ಮೀರಿ ಎಲ್ಲರೂ ಒಂದಾಗಿ ಸೇರುವ ಸಂದೇಶವನ್ನು ಸಾರುತ್ತದೆ. ಅವರ ಸರಳತೆ ಮತ್ತು ಸಮಾಜದ ಬಗ್ಗೆ ಇರುವ ಕಾಳಜಿ ಎಲ್ಲರ ಪ್ರಶಂಸೆಗೆ ಕಾರಣವಾಗಿದೆ. ಈ ರೀತಿಯ ಉತ್ತಮ ವ್ಯಕ್ತಿಗಳ ಭಾಗವಹಿಸುವಿಕೆ ಯಿಂದ ನಮ್ಮ ಹಬ್ಬಗಳು ಹೆಚ್ಚು ಅರ್ಥ ಪೂರ್ಣವಾಗುತ್ತವೆ ಎಂದು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಚಾನಲ್ ನ ಅನಿಸಿಕೆ ಆಗಿದೆ.

ವರದಿ:ಆರತಿ.ಗಿಳಿಯಾರು.ಉಡುಪಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button