ತಾರಾಪೂರ ಗ್ರಾಮದಲ್ಲಿ ಬನ್ನಿ – ಹಬ್ಬ ಆಚರಣೆ.

ತಾರಾಪುರ ಅ.03

ಆಲಮೇಲ ತಾಲೂಕಿನ ತಾರಾಪೂರ ಗ್ರಾಮದಲ್ಲಿ ಬನ್ನಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು ನವರಾತ್ರಿಯ ೧೧ ನೇ. ದಿನಕ್ಕೆ ವಿಜಯ ದಶಮಿಯ ಹಬ್ಬವನ್ನು ಆಚರಿಸಲಾಯಿತು. ನವರಾತ್ರಿಯಲ್ಲಿ ಪ್ರಮುಖವಾದ ಆಚರಣೆ. ಗುರುವಾರ ಸಂಜೆ ಶುಭ ಗಳಿಗೆಯಲ್ಲಿ ಬನ್ನಿ ಮರವನ್ನು ಪೂಜಿಸುವುದು ಹಿಂದಿನಿಂದ ನಡೆದ ಬಂದ ಪದ್ದತಿಯಂತೆ ಹಿರಿಯರಿಗೂ ಕಿರಿಯರಿಗೂ ಬನ್ನಿ ಎಲೆಗಳನ್ನು ನೀಡುವ ಮೂಲಕ ಆಶೀರ್ವಾದ ಪಡೆಯುತ್ತಾರೆ ವಿಜಯ ದಶಮಿ ದಿನದಂದು ಬನ್ನಿ ಎಲೆಗಳನ್ನು ಚಿನ್ನದಂತೆ ಹಂಚಲಾಗುತ್ತದೆ.

ಅಂದರಂತೆ ತಾರಾಪೂರ ಗ್ರಾಮದಲ್ಲಿ ಕೂಡ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಭಜನೆ ಮಾಡುತ್ತಾ ಹಲಿಗೆ ತಮಟೆ ಬಾರಿಸುವ ಮೂಲಕ ಶ್ರೀ ತಾರಕೇಶ್ವರ ದೇವಸ್ಥಾನಕ್ಕೆ ಹಾಗೂ ತಾರಾಪುರ ಹಿರೇಮಠ ಮಠಕ್ಕೆ ಹೋಗಿ ಬನ್ನಿ ಅರ್ಪಿಸಿ ಆಶೀರ್ವಾದ ಪಡೆದು ಕೊಂಡು ಬರುವುದು ತಾರಾಪುರ ಗ್ರಾಮದಲ್ಲಿ ಹಿಂದಿನಿಂದ ಬಂದ ಪದ್ಧತಿಯಂತೆ ಆಚರಣೆ ಮಾಡಲಾಯಿತು ಇದೇ ಸಂದರ್ಭದಲ್ಲಿ ಗ್ರಾಮದ ಹಿರಿಯರು ಯುವಕರು ಪರಸ್ಪರ ಬನ್ನಿ ವಿನಿಮಯ ಕಾರ್ಯಕ್ರಮದಲ್ಲಿ ಭಾಗಿಯಾದರು ಎಂದು ವರದಿಯಾಗಿದೆ.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರೇವಣಸಿದ್ದಯ್ಯ.ಜಿ.ಹಿರೇಮಠ.ಆಲಮೇಲ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button