ಕನ್ನಡ ಕೌಸ್ತುಭದಲ್ಲಿ ಕನ್ನಡ ಕಲರವ-3 ರ ಕಾರ್ಯಕ್ರಮದ ಕವಿಗೋಷ್ಠಿಗೆ ಕವಿತೆಗಳ ಆಹ್ವಾನ – ಡಿ.ಶಬ್ರಿನಾ ಮಹಮದ್ ಅಲಿ.
ಚಳ್ಳಕೆರೆ ಅ.22





‘ಕನ್ನಡವೇ ಸತ್ಯ ಕನ್ನಡವೇ ನಿತ್ಯ’ ಎಂಬುದನ್ನ ನಂಬಿದ ನಾವು, ಕಳೆದ ಎರೆಡು ವರ್ಷಗಳಿಂದ ನಮ್ಮ ‘ಕನ್ನಡ ಕೌಸ್ತುಭ’ ದಲ್ಲಿ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಿಕೊಂಡು ಬಂದಿರುವುದು ತಮಗೆಲ್ಲಾ ತಿಳಿದ ವಿಚಾರವಾಗಿದೆ. ಅದರಂತೆ, ಈ ಬಾರಿಯೂ, ನವೆಂಬರ್ 1 ಶನಿವಾರ ದಂದು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಗರದ ಹೆಚ್.ಎಂ.ಎಸ್ ಲೇಔಟ್ ನ ಕನ್ನಡ ಕೌಸ್ತುಭದಲ್ಲಿ ‘ಕನ್ನಡ ಕಲರವ ಸೀಜನ್ – ರಲ್ಲಿ 3’ ಕಾರ್ಯಕ್ರಮ ಆಯೋಜಿಸುತಿದ್ದೇವೆ.

ಆದಕಾರಣ ಈ ಕಾರ್ಯಕ್ರಮದಲ್ಲಿ ನಡೆಯುವ ಕವಿ ಗೋಷ್ಠಿಗೆ ಕವಿತೆಗಳನ್ನು ಆಹ್ವಾನಿಸಲಾಗಿದೆ. ಹಾಗೆಯೇ ಅದರೊಟ್ಟಿಗೆ ಕನ್ನಡ ಗೀತೆಗಳ ಗಾಯನವೂ ಸಹ ಇರುತ್ತದೆ. ಆಸಕ್ತ ಕನ್ನಡಿಗರು ತಮ್ಮ ಕವಿತೆಗಳನ್ನು ಈ ಕೆಳಗಿನ ಸಂಖ್ಯೆಗೆ ಕಳುಹಿಸಿ. ಹಾಗೆಯೇ ಕನ್ನಡ ಗೀತ ಗಾಯನದಲ್ಲಿ ಭಾಗವಹಿಸುವವರು ತಮ್ಮ ಹೆಸರನ್ನು ನೊಂದಾಯಿಸಲು ಈ ಮೂಲಕ ಕೋರಲಾಗಿದೆ ಎಂದು ಕನ್ನಡಾಮಾನಿಗಳು ಹಾಗೂ ಶಿಕ್ಷಕ ದಂಪತಿಗಳಾದ ಡಿ.ಶಬ್ರಿನಾ ಮಹಮದ್ ಅಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಈ ಮೊಬೈಲ್ ನಂಬರ್ ಗೆ 9731879840 ಸಂಪರ್ಕಿಸಿರಿ.