ಕನ್ನಡ ಕೌಸ್ತುಭದಲ್ಲಿ ಕನ್ನಡ ಕಲರವ-3 ರ ಕಾರ್ಯಕ್ರಮದ ಕವಿಗೋಷ್ಠಿಗೆ ಕವಿತೆಗಳ ಆಹ್ವಾನ – ಡಿ.ಶಬ್ರಿನಾ ಮಹಮದ್ ಅಲಿ.

ಚಳ್ಳಕೆರೆ ಅ.22

‘ಕನ್ನಡವೇ ಸತ್ಯ ಕನ್ನಡವೇ ನಿತ್ಯ’ ಎಂಬುದನ್ನ ನಂಬಿದ ನಾವು, ಕಳೆದ ಎರೆಡು ವರ್ಷಗಳಿಂದ ನಮ್ಮ ‘ಕನ್ನಡ ಕೌಸ್ತುಭ’ ದಲ್ಲಿ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಿಕೊಂಡು ಬಂದಿರುವುದು ತಮಗೆಲ್ಲಾ ತಿಳಿದ ವಿಚಾರವಾಗಿದೆ. ಅದರಂತೆ, ಈ ಬಾರಿಯೂ, ನವೆಂಬರ್ 1 ಶನಿವಾರ ದಂದು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನಗರದ ಹೆಚ್.ಎಂ.ಎಸ್ ಲೇಔಟ್ ನ ಕನ್ನಡ ಕೌಸ್ತುಭದಲ್ಲಿ ‘ಕನ್ನಡ ಕಲರವ ಸೀಜನ್ – ರಲ್ಲಿ 3’ ಕಾರ್ಯಕ್ರಮ ಆಯೋಜಿಸುತಿದ್ದೇವೆ.

ಆದಕಾರಣ ಈ ಕಾರ್ಯಕ್ರಮದಲ್ಲಿ ನಡೆಯುವ ಕವಿ ಗೋಷ್ಠಿಗೆ ಕವಿತೆಗಳನ್ನು ಆಹ್ವಾನಿಸಲಾಗಿದೆ. ಹಾಗೆಯೇ ಅದರೊಟ್ಟಿಗೆ ಕನ್ನಡ ಗೀತೆಗಳ ಗಾಯನವೂ ಸಹ ಇರುತ್ತದೆ. ಆಸಕ್ತ ಕನ್ನಡಿಗರು ತಮ್ಮ ಕವಿತೆಗಳನ್ನು ಈ ಕೆಳಗಿನ ಸಂಖ್ಯೆಗೆ ಕಳುಹಿಸಿ. ಹಾಗೆಯೇ ಕನ್ನಡ ಗೀತ ಗಾಯನದಲ್ಲಿ ಭಾಗವಹಿಸುವವರು ತಮ್ಮ ಹೆಸರನ್ನು ನೊಂದಾಯಿಸಲು ಈ ಮೂಲಕ ಕೋರಲಾಗಿದೆ ಎಂದು ಕನ್ನಡಾಮಾನಿಗಳು ಹಾಗೂ ಶಿಕ್ಷಕ ದಂಪತಿಗಳಾದ ಡಿ.ಶಬ್ರಿನಾ ಮಹಮದ್ ಅಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಈ ಮೊಬೈಲ್ ನಂಬರ್ ಗೆ 9731879840 ಸಂಪರ್ಕಿಸಿರಿ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button