ಮಕ್ಕಳಿಂದ ಸ್ವಾಮಿ ವಿವೇಕಾನಂದರ – ಸ್ವದೇಶ ಮಂತ್ರ ಪಠಣ.
ಚಳ್ಳಕೆರೆ ಜ.27


ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದಲ್ಲಿ ಮಕ್ಕಳಿಗಾಗಿ ಆಯೋಜಿಸಿದ್ದ “ವಿವೇಕ ವಿಹಾರ ವಿದ್ಯಾರ್ಥಿ ಶಿಬಿರ” ಕಾರ್ಯಕ್ರಮದಲ್ಲಿ ಯತೀಶ್ ಎಂ ಸಿದ್ದಾಪುರ ಅವರ ನೇತೃತ್ವದಲ್ಲಿ ಮಕ್ಕಳಿಂದ ಓಂಕಾರ, ದಿವ್ಯತ್ರಯರ ಪ್ರಣಾಮಮಂತ್ರ, ಶ್ರೀರಾಮಕೃಷ್ಣರ ನಾಮಸ್ಮರಣೆ, ಸ್ವಾಮಿ ವಿವೇಕಾನಂದರ ಶಕ್ತಿಮಂತ್ರ, ಸ್ವದೇಶ ಮಂತ್ರ ಹಾಗೂ ಚೈತನ್ಯದಾಯಕ ನುಡಿಗಳು, ಅಮ್ಮಾ ಶಾರದಾಮಾತೆ ಪಠಣ ಮತ್ತು ಭಜನಾ ಕಾರ್ಯಕ್ರಮ ನಡೆಯಿತು.


ತರಗತಿಯಲ್ಲಿ ಸಂತೋಷ್, ಡಾ, ಭೂಮಿಕಾ, ಲಕ್ಷ್ಮೀ, ಹರ್ಷಿತಾ, ವಸಿಷ್ಠ, ಜಶ್ವಿತಾ, ಕೋಮಲಾಸಿರಿ, ವೈಷ್ಣವಿ, ಚರಣ್ಯ, ಸಾಯಿ ಸಮರ್ಥ್, ಶ್ರೇಯಸ್ಸು, ವಿನತಿ, ಯಶಸ್ಸು, ದವನ್, ಶ್ರೀನಿಹಾಂತ್, ವಿಷ್ಣು, ಸಾನ್ವಿ, ಸಾಧ್ವಿ, ಪ್ರಣವ್, ನಮ್ರತಾ ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿ ಮಕ್ಕಳು ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

