🚨 ಕೋಟದ ಅಧಿದೇವತೆ ಶ್ರೀ ಹಿರೇ ಮಾಲಿಂಗೇಶ್ವರ ಸನ್ನಿಧಿಯಲ್ಲಿ – ‘ಸುವರ್ಣ ಸಂಭ್ರಮ-2026’ ರ ಐತಿಹಾಸಿಕ ರಥೋತ್ಸವ..! 🚨

ಕೋಟ, ಉಡುಪಿ ಜ.31

ಪರಶುರಾಮ ಸೃಷ್ಟಿಯ ಸಪ್ತ ಕ್ಷೇತ್ರಗಳ ಸಾಲಿನಲ್ಲಿ ನಿಲ್ಲುವ, ಐತಿಹಾಸಿಕ ಹಿನ್ನೆಲೆಯುಳ್ಳ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಟ ಶ್ರೀ ಹಿರೇ ಮಾಲಿಂಗೇಶ್ವರ ದೇವಸ್ಥಾನವೀಗ 2026 ರ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದೆ. ಭಕ್ತರ ಪಾಲಿನ ಕಾಮಧೇನು, ಕೋಟದ ಆರಾಧ್ಯ ದೈವದ ಈ ಬಾರಿಯ ಉತ್ಸವವು ಹಿಂದೆಂದಿಗಿಂತಲೂ ವಿಜೃಂಭಣೆ ಯಿಂದ ನಡೆಯಲು ಸಜ್ಜಾಗಿದೆ.

🔱 ಕೋಟದ ಕಾರ್ಣಿಕ ಶಕ್ತಿ:-

ಹಿರೇ ಮಾಲಿಂಗೇಶ್ವರ ಈ ದೇವಸ್ಥಾನವು ಕೇವಲ ಕಲ್ಲು-ಮಣ್ಣಿನ ಕಟ್ಟಡವಲ್ಲ, ಬದಲಾಗಿ ಕೋಟದ ಜನರ ನಂಬಿಕೆಯ ಜೀವಾಳ. ಇಲ್ಲಿನ ಶಿವಲಿಂಗವು ಗಾತ್ರದಲ್ಲಿ ದೊಡ್ಡದಾಗಿರುವುದರಿಂದ ‘ಹಿರೇ’ (ದೊಡ್ಡ) ಎಂಬ ಅನ್ವರ್ಥ ನಾಮವನ್ನು ಪಡೆದಿದೆ.

ಅಭಯ ಹಸ್ತ:-

ನಂಬಿ ಬಂದ ಭಕ್ತರ ಸಂಕಷ್ಟಗಳನ್ನು ಪರಿಹರಿಸುವಲ್ಲಿ ಈ ಲಿಂಗವು ಅತ್ಯಂತ ಪ್ರಭಾವಶಾಲಿ ಎಂಬ ನಂಬಿಕೆಯಿದೆ.

ಕಾರ್ಣಿಕದ ಕೆರೆ:-

ದೇವಸ್ಥಾನದ ಎದುರಿಗಿರುವ ಪವಿತ್ರ ತೀರ್ಥ ಪುಷ್ಕರಿಣಿಯಲ್ಲಿ ಸ್ನಾನ ಮಾಡಿದರೆ ಚರ್ಮವ್ಯಾಧಿಗಳು ಗುಣವಾಗುತ್ತವೆ ಎಂಬುದು ಇಂದಿಗೂ ಜೀವಂತವಾಗಿರುವ ಪವಾಡ.

✨ 2026 ರ ಸುವರ್ಣ ಸಂಭ್ರಮದ ವಿಶೇಷತೆಗಳು:-

ಈ ವರ್ಷದ ರಥೋತ್ಸವವು ‘ಸುವರ್ಣ ಸಂಭ್ರಮ-2026’ ಎಂಬ ಹೆಸರಿನಲ್ಲಿ ಲೋಕಾರ್ಪಣೆಯಾಗುತ್ತಿದ್ದು, ಹಲವು ವಿಶೇಷ ಕಾರ್ಯಕ್ರಮಗಳನ್ನು ಒಳ ಗೊಂಡಿದೆ.

ಚಿನ್ನದ ರಥದ ಮೆರುಗು:-

ಸುವರ್ಣ ಸಂಭ್ರಮದ ನೆನಪಿಗಾಗಿ ದೇವರಿಗೆ ವಿಶೇಷ ಚಿನ್ನದ ಆಭರಣಗಳ ಸಮರ್ಪಣೆ.

ಹದಿನೆಂಟು ಪೇಟೆಗಳ ಸಂಗಮ:-

ಐತಿಹಾಸಿಕವಾಗಿ ಕೋಟದ ಸುತ್ತಮುತ್ತಲ 18 ಹಳ್ಳಿಗಳ (ಪೇಟೆಗಳ) ಜನರು ಒಟ್ಟಾಗಿ ಸೇರಿ ನಡೆಸುವ ಈ ಬೃಹತ್ ರಥೋತ್ಸವ ಸೌಹಾರ್ದತೆಯ ಸಂಕೇತ.

ಅಹೋ ರಾತ್ರಿ ಯಕ್ಷಗಾನ ವೈಭವ:-

ಕಲಾ ತಪಸ್ವಿ ಡಾ, ಶಿವರಾಮ ಕಾರಂತರ ಪುಣ್ಯಭೂಮಿಯಲ್ಲಿ ಹೆಸರಾಂತ ಕಲಾವಿದರಿಂದ ಸತತ 5 ದಿನಗಳ ಕಾಲ ‘ಯಕ್ಷಗಾನ ಬಯಲಾಟ’ ಪ್ರದರ್ಶನ.

ಸಹಸ್ರ ಕುಂಭಾಭಿಷೇಕ:-

ಲೋಕ ಕಲ್ಯಾಣಕ್ಕಾಗಿ ನೂರಾರು ಅರ್ಚಕರಿಂದ ಶಿವನಿಗೆ ಜಲಾಭಿಷೇಕ ಮತ್ತು ಮಹಾ ಪೂಜೆ.

🥁 ದರ್ಶನ ಬಲಿ ಮತ್ತು ರಥೋತ್ಸವದ ರೋಚಕತೆ:-

ಇಲ್ಲಿ ನಡೆಯುವ ‘ದರ್ಶನ ಬಲಿ’ ಕಾರ್ಯಕ್ರಮವು ಮೈ ನವಿರೇಳಿಸುವಂತಿರುತ್ತದೆ. ದೇವದರ್ಶನ ಪಾತ್ರಧಾರಿಗಳ ನೃತ್ಯ, ವಾದ್ಯಘೋಷಗಳ ಆರ್ಭಟ ಮತ್ತು ಭಕ್ತರ ‘ಹರ ಹರ ಮಹಾದೇವ’ ಘೋಷಣೆಗಳ ನಡುವೆ ಬ್ರಹ್ಮರಥ ಎಳೆಯುವ ದೃಶ್ಯ ಭವ್ಯವಾದುದು. ರಥದ ಮೇಲೆ ಭಕ್ತರು ಹಣ್ಣು-ಜವನ ಎಸೆಯುವ ಮೂಲಕ ತಮ್ಮ ಹರಕೆಯನ್ನು ತೀರಿಸುತ್ತಾರೆ.

📍 ಭಕ್ತಾದಿಗಳ ಗಮನಕ್ಕೆ:-

ಸ್ಥಳ, ಶ್ರೀ ಹಿರೇ ಮಾಲಿಂಗೇಶ್ವರ ದೇವಸ್ಥಾನ, ಕೋಟ (ರಾಷ್ಟ್ರೀಯ ಹೆದ್ದಾರಿ 66 ಕ್ಕೆ ಹೊಂದಿ ಕೊಂಡಿದೆ).

ವಿಶೇಷ ಆಕರ್ಷಣೆ:-

ಸುಸಜ್ಜಿತ ಅನ್ನದಾಸೋಹ ಮತ್ತು ಸಾಂಸ್ಕೃತಿಕ ವೈಭವ.

“ಕೋಟದ ಮಣ್ಣಿನ ಕಣ ಕಣದಲ್ಲೂ ಶಿವನ ನಾಮವಿದೆ. ಈ 2026 ರ ಸುವರ್ಣ ಸಂಭ್ರಮವು ಕರಾವಳಿಯ ಇತಿಹಾಸದಲ್ಲಿ ಸುರ್ಣಾಕ್ಷರಗಳಲ್ಲಿ ಬರೆಯಲ್ಪಡುವ ಕ್ಷಣವಾಗಲಿದೆ.

“📢 ಬನ್ನಿ, ಕೋಟದ:-

ಈ ಮಹಾ ಸಂಭ್ರಮದಲ್ಲಿ ಪಾಲ್ಗೊಳ್ಳಿ, ಹಿರೇ ಮಾಲಿಂಗೇಶ್ವರನ ಕೃಪೆಗೆ ಪಾತ್ರರಾಗಿ..!

ವರದಿ:ಆರತಿ.ಗಿಳಿಯಾರು.ಉಡುಪಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button