ಹಂಪಿ ವಿಶ್ವ ವಿದ್ಯಾಲಯದಿಂದ ಸಮದೇವ್ವನವರ ಚಾರೇಶ ರವರಿಗೆ – ಪಿ.ಎಚ್.ಡಿ ಪದವಿ ಪ್ರಧಾನ.
ಕೂಡ್ಲಿಗಿ ಫೆ.03

ಪಟ್ಟಣದ ಡಾ, ಬಿ.ಆರ್ ಅಂಬೇಡ್ಕರ್ ನಗರದ ನಿವಾಸಿ ಸಮದೇವ್ವನವರ ಚಾರೇಶ ಇವರಿಗೆ ಕನ್ನಡ ವಿಶ್ವವಿದ್ಯಾಲಯ ಹಂಪಿ ಪ್ರಾಧ್ಯಾಪಕ ಡಾ, ವೈ. ಚಂದ್ರಬಾಬು ಅವರ ಮಾರ್ಗದರ್ಶನದಲ್ಲಿ ಕನ್ನಡ ದಲಿತ ಸಾಹಿತ್ಯದಲ್ಲಿ ದಲಿತರ ಶ್ರಮ ಸಂಸ್ಕೃತಿ ತಾತ್ವಿಕ ವಿಶ್ಲೇಷಣೆ ಎಂಬ ವಿಷಯಕ್ಕೆ ಹಂಪಿ ವಿಶ್ವವಿದ್ಯಾಲಯವು ಸಮದೇವ್ವನವರ ಚಾರೇಶ ಇವರಿಗೆ ಪಿ.ಹೆಚ್.ಡಿ ಪದವಿ ನೀಡಲಾಗಿದೆ.
ಅವರ ಸಾಧನೆಗೆ ಕುಟುಂಬ ವರ್ಗದವರು, ತಂದೆ ದಿ/ಎಸ್.ಚೌಡಪ್ಪ, ಇವರ ಮಗನಾಗಿ ದಲಿತ ಸಮುದಾಯದಲ್ಲಿ ಪಿ.ಎಚ್.ಡಿ ಡಾಕ್ಟರೇಟ್ ಪದವಿ ಪಡೆದಿರುವುದು ಹೆಮ್ಮೆಯ ಸಂಗತಿ ಯಾಗಿದೆ.
ಇವರಿಗೆ ಪಿ.ಹೆಚ್.ಡಿ ಪದವಿ ಪ್ರಧಾನ ಆಗಿರುವುದಕ್ಕೆ ಅವರ ಕುಟುಂಬದವರು, ಗೆಳೆಯರು, ಶಿಕ್ಷಕರು, ಹಿತೈಷಿಗಳು ಮತ್ತು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್ ಕೂಡ ಶ್ರಮ ಸಾಧನೆಯ ಸಾರ್ಥಕಕ್ಕೆ ತುಂಬಾ ಹೃದಯ ಪೂರ್ವಕವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತದೆ.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್ ಕೆ ಹೊಸಹಳ್ಳಿ

