🚨 BREAKING NEWS,ಅಲೆಲೆಲೇ ಸುಕುಮಾರ- ಕತರ್ನಾಕ್ ಲೂಟಿ ವೀರ..!🚨 ಮಾಜಿ ಶಾಸಕನ ‘ಮರಳು’ ದೌಲತ್ತಿಗೆ ಬೆಚ್ಚಿಬಿದ್ದ ಕುಂದಾಪುರ – ಅಕ್ರಮಗಳ ವಿರುದ್ಧ ಅಜಿತ್ ಶೆಟ್ಟಿ ಕಿಡಿ..!
ಉಡುಪಿ/ಬೈಂದೂರು ಫೆ.11

ಕರಾವಳಿಯ ಶಾಂತಿಯುತ ಪರಿಸರದಲ್ಲಿ ಈಗ ಅಕ್ರಮ ಮರಳುಗಾರಿಕೆಯ ರಣ ರಕ್ಕಸ ಅಟ್ಟಹಾಸ ಶುರುವಾಗಿದೆ. ಜನ ಪ್ರತಿನಿಧಿಯಾಗಿ ರಕ್ಷಣೆ ನೀಡ ಬೇಕಾದವರೇ ಭಕ್ಷಕರಾದರೆ ಹೇಗೆ? ಎನ್ನುವುದಕ್ಕೆ ಈ ವರದಿಯೇ ಸಾಕ್ಷಿ. ಬೈಂದೂರಿನ ಮಾಜಿ ಶಾಸಕ ಸುಕುಮಾರ್ ಶೆಟ್ಟಿ ಮತ್ತು ಯುವ ಕಾಂಗ್ರೆಸ್ ರಾಜ್ಯ ಪ್ರಧಾನಕಾರ್ಯದರ್ಶಿ ಅಜಿತ್ ಶೆಟ್ಟಿ ನಡುವಿನ ಆಡಿಯೋ ಸಂಭಾಷಣೆ ಈಗ ಇಡೀ ಕರಾವಳಿಯಲ್ಲಿ ಸಂಚಲನ ಮೂಡಿಸಿದೆ.
🔴 ವರದಿಯ ಮುಖ್ಯಾಂಶಗಳು:-
📌 ಪ್ರಶ್ನೆ ಮಾಡಿದರೆ ಫಿನಿಶ್..!
ಅಕ್ರಮ ಮರಳುಗಾರಿಕೆ ವಿರುದ್ಧ ಧ್ವನಿ ಎತ್ತಿದ ಯುವಕನಿಗೆ ಮಾಜಿ ಶಾಸಕರಿಂದ ನೇರ ಧಮ್ಕಿ ಬಂದಿದೆ. “ಪ್ರಶ್ನೆ ಮಾಡಿದರೆ ಕಲಾಸ್” ಎಂಬ ಅಹಂಕಾರದ ಮಾತುಗಳು ಆಡಿಯೋದಲ್ಲಿ ಬಹಿರಂಗವಾಗಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
📌 ಖಾಕಿ ಮೌನಕ್ಕೆ ಆಕ್ರೋಶ:-

ಈ ಬಗ್ಗೆ ದೂರು ನೀಡಿದರೂ ಪೊಲೀಸ್ ಇಲಾಖೆ ಮೌನ ವಹಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಪ್ರಭಾವಿಗಳ ಒತ್ತಡಕ್ಕೆ ಮಣಿದಿದೆಯೇ ಕಾನೂನು ರಕ್ಷಕ ಪಡೆ? ಎಂಬ ಪ್ರಶ್ನೆ ಕಾಡುತ್ತಿದೆ.
📌 ಕೊಜೆಮಣ್ಣು ಗಣಿಗಾರಿಕೆ ಹಗರಣ:-
ಬೈಂದೂರು ಭಾಗದಲ್ಲಿ ಅಕ್ರಮವಾಗಿ ತೆಗೆಯುತ್ತಿರುವ ಕೊಜೆಮಣ್ಣು ನೇರವಾಗಿ ಮಾಜಿ ಶಾಸಕರ ಹಂಚಿನ ಕಾರ್ಖಾನೆಗೆ ಸರಬರಾಜು ಆಗುತ್ತಿರುವ ಗಂಭೀರ ಆರೋಪ ಕೇಳಿ ಬಂದಿದೆ.
📌 ಬೇಲಿಯೇ ಎದ್ದು ಹೊಲ ಮೇಯ್ದಂತೆ:-
ಅಧಿಕಾರ ಹೋದರೂ ಬಿಡದ ದೌಲತ್ತು! ತನ್ನ ವೈಯಕ್ತಿಕ ಲಾಭಕ್ಕಾಗಿ ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡುತ್ತಿರುವ ‘ಲೂಟಿ ವೀರ’ನ ಕರಾಮತ್ತು ಇದೀಗ ಬಯಲಾಗಿದೆ.
⚖️ ಕಾನೂನಾತ್ಮಕ ವಿವರಣೆ ಮತ್ತು ಪರಿಣಾಮಗಳು:-
ಈ ಪ್ರಕರಣದಲ್ಲಿ ನಡೆದಿರುವ ಅಕ್ರಮಗಳು ಕೇವಲ ನೈತಿಕವಾಗಿ ಮಾತ್ರವಲ್ಲ, ಕಾನೂನಾತ್ಮಕವಾಗಿಯೂ ಶಿಕ್ಷಾರ್ಹ ಅಪರಾಧಗಳಾಗಿವೆ.
ಗಣಿ ಮತ್ತು ಖನಿಜ ಕಾಯ್ದೆ (MMDR Act 1957):-
ಪರವಾನಗಿ ಇಲ್ಲದೆ ಗಣಿಗಾರಿಕೆ ಮಾಡುವುದು ಜೈಲು ಶಿಕ್ಷೆ ಮತ್ತು ದಂಡಾರ್ಹ ಅಪರಾಧ.

ಐಪಿಸಿ ಸೆಕ್ಷನ್ 506 (ಕ್ರಿಮಿನಲ್ ಬೆದರಿಕೆ) :-
ಪ್ರಾಣ ಬೆದರಿಕೆ ಹಾಕುವುದು ಗಂಭೀರ ಪ್ರಕರಣವಾಗಿದ್ದು, ಆಡಿಯೋ ಸಾಕ್ಷ್ಯವು ಮಾಜಿ ಶಾಸಕರಿಗೆ ಕಾನೂನು ಉರುಳಾಗುವುದು ಗ್ಯಾರಂಟಿ. ಅಧಿಕಾರ ದುರುಪಯೋಗ:-ವ್ಯವಸ್ಥೆಯ ಮೇಲೆ ಪ್ರಭಾವ ಬೀರಿ ಅಕ್ರಮಕ್ಕೆ ಸಾಥ್ ನೀಡುವುದು ಪ್ರಜಾಪ್ರಭುತ್ವ ವಿರೋಧಿ ಕೆಲಸ.
🗣️ ರಾಜಕೀಯ ಪ್ರಭಾವದ ದುರುಪಯೋಗ:-
ಅಜಿತ್ ಶೆಟ್ಟಿ ಕಿಡಿ ಸಾಮಾಜಿಕ ಕಾರ್ಯಕರ್ತ ಅಜಿತ್ ಶೆಟ್ಟಿ ಅವರು ಈ ಬಗ್ಗೆ ಗಂಭೀರವಾಗಿ ಪ್ರತಿಕ್ರಿಯಿಸಿದ್ದು, “ರಾಜಕೀಯ ಪ್ರಭಾವ ಬಳಸಿ ನನ್ನ ಮೇಲೆ ಸುಳ್ಳು ಮೊಕದ್ದಮೆಗಳನ್ನು ದಾಖಲಿಸಲಾಗುತ್ತಿದೆ. ಸತ್ಯದ ಪರವಾಗಿ ಧ್ವನಿ ಎತ್ತಿದ್ದಕ್ಕಾಗಿ ದ್ವೇಷ ಸಾಧನೆಯ ಉದ್ದೇಶದಿಂದ ಎಫ್.ಐ.ಆರ್ ದಾಖಲಿಸಿ ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ. ಆದರೆ ಈ ದಮನಕಾರಿ ನೀತಿಯ ವಿರುದ್ಧ ಹೋರಾಟ ಮುಂದುವರಿಯಲಿದೆ” ಎಂದು ಎಚ್ಚರಿಸಿದ್ದಾರೆ.
ಸಾರ್ವಜನಿಕರ ಪ್ರಶ್ನೆ:-
ಅಕ್ರಮದ ವಿರುದ್ಧ ಧ್ವನಿಯೆತ್ತಿದರೆ ಜೈಲು ಫಿಕ್ಸ್ ಎನ್ನುವ ವಾತಾವರಣ ನಿರ್ಮಾಣವಾಗಿದೆಯೇ? ಹಿರಿಯ ರಾಜಕಾರಣಿಯಿಂದಲೇ ಈ ‘ಮಣ್ಣು ತಿನ್ನುವ ಕೆಲಸ’ ನಡೆಯುತ್ತಿರುವುದು ಎಷ್ಟು ಸರಿ?
ವರದಿ:ಆರತಿ.ಗಿಳಿಯಾರು.ಉಡುಪಿ

