🚨ಬ್ರೇಕಿಂಗ್ ನ್ಯೂಸ್, ಮಾನವೀಯತೆಯ ಹಾದಿಯಲ್ಲಿ ಹುಟ್ಟು ಹಬ್ಬದ ಸಂಭ್ರಮ..!🚨ಸಾಲಿಗ್ರಾಮದ ಹೊಸಬೆಳಕು ಆಶ್ರಮದಲ್ಲಿ ಅಜಿತ್ ಕುಮಾರ್ ಶೆಟ್ಟಿ ಅವರ ಜನ್ಮ ದಿನಾಚರಣೆ – ಗೆಳೆಯರ ಬಳಗದಿಂದ ಸಮಾಜ ಮುಖಿ ಕಾರ್ಯ.

ಸಾಲಿಗ್ರಾಮ ಫೆ.12

ಯುವ ನಾಯಕರು ಹಾಗೂ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಅಜಿತ್ ಕುಮಾರ್ ಶೆಟ್ಟಿ ಅವರ ಹುಟ್ಟುಹಬ್ಬದ ಅಂಗವಾಗಿ, ಅವರ ಗೆಳೆಯರ ಬಳಗವು ಈ ಬಾರಿ ಅತ್ಯಂತ ಅರ್ಥಪೂರ್ಣವಾಗಿ ಜನ್ಮದಿನವನ್ನು ಆಚರಿಸಲು ನಿರ್ಧರಿಸಿದೆ.

ಫೆಬ್ರವರಿ 12 ರಂದು ಮಧ್ಯಾಹ್ನ 12:45 ಕ್ಕೆ ಸಾಲಿಗ್ರಾಮದ ‘ಹೊಸಬೆಳಕು’ ಆಶ್ರಮದಲ್ಲಿ ಈ ವಿಶೇಷ ಕಾರ್ಯಕ್ರಮ ನಡೆಯಲಿದೆ. ಕೇವಲ ಸಂಭ್ರಮಕ್ಕೆ ಸೀಮಿತವಾಗದೆ, ಆಶ್ರಮದ ಸದಸ್ಯರ ಬಾಳಿನಲ್ಲಿ ಹೊಸ ಬೆಳಕು ನೀಡುವ ಉದ್ದೇಶದಿಂದ ಈ ಕೆಳಗಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

📍 ಕಾರ್ಯಕ್ರಮದ ಮುಖ್ಯಾಂಶಗಳು:-

ಹೊಸ ಬಟ್ಟೆ ವಿತರಣೆ:-

ಆಶ್ರಮದ ಎಲ್ಲಾ ಸದಸ್ಯರಿಗೆ ಪ್ರೀತಿಯಿಂದ ಹೊಸ ಉಡುಪುಗಳನ್ನು ನೀಡಲಾಗುವುದು. ಪ್ರೀತಿಯ ಭೋಜನ:-ಹುಟ್ಟುಹಬ್ಬದ ಸಂಭ್ರಮದ ಸವಿಯಾದ ಊಟವನ್ನು ಆಶ್ರಮದ ನಿವಾಸಿಗಳೊಂದಿಗೆ ಹಂಚಿಕೊಳ್ಳಲಾಗುವುದು.

ಸರಳ ಆಚರಣೆ:-

ಆಡಂಬರವಿಲ್ಲದೆ, ನೊಂದವರ ಮೊಗದಲ್ಲಿ ನಗು ಮೂಡಿಸುವ ಮೂಲಕ ಅಜಿತ್ ಕುಮಾರ್ ಅವರ ಜನ್ಮದಿನವನ್ನು ಆಚರಿಸಲು ಗೆಳೆಯರ ಬಳಗ ಸಜ್ಜಾಗಿದೆ.”ಅಧಿಕಾರ ಮತ್ತು ರಾಜಕೀಯದ ಜೊತೆಗೆ ಸಮಾಜದ ಕಟ್ಟಕಡೆಯ ವ್ಯಕ್ತಿಯ ಮುಖದಲ್ಲಿ ನಗು ಮೂಡಿಸುವುದೇ ನಿಜವಾದ ಸಂಭ್ರಮ” ಎಂಬ ಆಶಯದೊಂದಿಗೆ ಈ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಅಜಿತ್ ಕುಮಾರ್ ಶೆಟ್ಟಿ ಅವರ ಅಭಿಮಾನಿಗಳು ಹಾಗೂ ಗೆಳೆಯರ ಬಳಗ ತಿಳಿಸಿದೆ.

🎂 ಜನ್ಮ ದಿನದ ಶುಭಾಶಯಗಳು..!

ಯುವ ಮನಸ್ಸುಗಳ ಸ್ಪೂರ್ತಿ, ಜನಾನುರಾಗಿ ನಾಯಕ ಶ್ರೀ ಅಜಿತ್ ಕುಮಾರ್ ಶೆಟ್ಟಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ನಿಮ್ಮ ಸಮಾಜಮುಖಿ ಕಾರ್ಯಗಳು ಹೀಗೆಯೇ ಮುಂದುವರಿಯಲಿ, ತಾಯಿ ಚಾಮುಂಡೇಶ್ವರಿ ನಿಮಗೆ ಆಯುಷ್ಯ, ಆರೋಗ್ಯ ಮತ್ತು ಯಶಸ್ಸನ್ನು ಕರುಣಿಸಲಿ ಎಂದು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್ ಹಾರೈಸುತ್ತದೆ.

ವರದಿ:ಆರತಿ.ಗಿಳಿಯಾರು.ಉಡುಪಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button