🚨BREAKING NEWS, ಬ್ರಹ್ಮಾವರ ತಹಶೀಲ್ದಾರ ರಿಂದ – ಮಹತ್ವದ ಆದೇಶ..!🚨
ಬ್ರಹ್ಮಾವರ ಫೆ.13

ತಾಲೂಕಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದವರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ನೀಡುವ ನಿಟ್ಟಿನಲ್ಲಿ ತಹಶೀಲ್ದಾರರು ಮಹತ್ವದ ಹೆಜ್ಜೆ ಇಟ್ಟಿದ್ದಾರೆ.
📌 ಪ್ರಮುಖ ಮುಖ್ಯಾಂಶಗಳು:-
ದಿನಾಂಕ: ಫೆಬ್ರವರಿ 18, 2026 (ಬುಧವಾರ) ಸಮಯ: ಬೆಳಗ್ಗೆ 11:00 ಗಂಟೆಗೆ ಸ್ಥಳ: ವಾರಂಬಳ್ಳಿ ಗ್ರಾಮ ಪಂಚಾಯತ್ ಸಭಾಂಗಣ ಅಧ್ಯಕ್ಷತೆ: ಮಾನ್ಯ ತಹಶೀಲ್ದಾರರು, ಬ್ರಹ್ಮಾವರ ತಾಲೂಕು.
ಸಭೆಯ ಉದ್ದೇಶ:-
2026 ನೇ. ಸಾಲಿನ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡದವರ (ST) ಹಿತರಕ್ಷಣೆ ಹಾಗೂ ಕುಂದು ಕೊರತೆಗಳ ಕುರಿತು ಸಮಾಲೋಚನೆ ನಡೆಸಲು ಈ ವಿಶೇಷ ಸಭೆಯನ್ನು ಕರೆಯಲಾಗಿದೆ. ಈ ಹಿಂದೆ ಸಮುದಾಯದವರಿಂದ ಸ್ವೀಕರಿಸಲಾದ ಅಹವಾಲುಗಳಿಗೆ ಸಂಬಂಧಪಟ್ಟ ಇಲಾಖೆಗಳು ಏನು ಕ್ರಮ ಕೈಗೊಂಡಿವೆ ಎಂಬ ಬಗ್ಗೆ ವರದಿ ಕೇಳಲಾಗುವುದು.
ಅಧಿಕಾರಿಗಳಿಗೆ ಖಡಕ್ ಸೂಚನೆ:-
ಈ ಸಭೆಗೆ ತಾಲೂಕು ಮಟ್ಟದ ಎಲ್ಲಾ ಪ್ರಮುಖ ಇಲಾಖಾ ಅಧಿಕಾರಿಗಳು (ಪೊಲೀಸ್, ಸಮಾಜ ಕಲ್ಯಾಣ, ಕೃಷಿ, ತೋಟಗಾರಿಕೆ, ಲೋಕೋಪಯೋಗಿ ಮತ್ತು ಮೆಸ್ಕಾಂ) ಕಡ್ಡಾಯವಾಗಿ ಪೂರ್ಣ ಮಾಹಿತಿಯೊಂದಿಗೆ ಖುದ್ದಾಗಿ ಹಾಜರಿರಬೇಕು ಎಂದು ತಹಶೀಲ್ದಾರರು ಆದೇಶಿಸಿದ್ದಾರೆ.
ಜನತೆಗೆ ಸುವರ್ಣಾವಕಾಶ:-
ಬ್ರಹ್ಮಾವರ ತಾಲೂಕು ವ್ಯಾಪ್ತಿಯ SC/ST ಸಮುದಾಯದವರು ತಮ್ಮ ಯಾವುದೇ ಸಮಸ್ಯೆಗಳು ಅಥವಾ ದೂರುಗಳಿದ್ದಲ್ಲಿ ಈ ಸಭೆಯ ಪ್ರಯೋಜನವನ್ನು ಪಡೆದು ಕೊಳ್ಳಬಹುದಾಗಿದೆ.
ವರದಿ:ಆರತಿ.ಗಿಳಿಯಾರು.ಉಡುಪಿ

