“ಭಕ್ತಿಗೆ ಹೆಸರಾದ ಬೇವೂರ ನಮ್ಮೂರು”…..

ಭಕ್ತಿಗೆ ಹೆಸರಾದ ಬೇವೂರ ನಮ್ಮೂರುಗ್ಯಾನಪ್ಪಜ್ಜನ ಶ್ರೀಪಾದ | ಗ್ಯಾನಪ್ಪಜ್ಜನ ಶ್ರೀಪಾದ ನೆನೆದರಭಕ್ತರ ಬಾಳು ಬಂಗಾರ ||೧||

ಬೇವೂರ ಬಸವಣ್ಣಗ ಭಕ್ತಿಲೆ ಬಂದರತೊಟ್ಟಿಲ ಕಾಯಿ ಒಡದಾನತೊಟ್ಟಿಲ ಕಾಯ ಒಡದಾನ ಮಾರಾಯ ಬೇಡಿದ ವರಗಳ ಕೊಟ್ಟಾನ|| ೨||

ಭವರೋಗ ಕಳಿಯಾಕ ಕೈವಲ್ಯ ಪಡಿಯಾಕಶರಣಾಗು ಬೇವೂರ ರುದ್ರಮುನಿಗೆಶರಣಾಗು ಬೇವೂರ ರುದ್ರಮುನಿಗೆ ಪಾದಪಡೆದವರಿಗೆ ಪಾವನ ||೩||

ಹಠಯೋಗಿ ಹುಚ್ಚಯ್ಯ ಮಠದಾಗ ಕುಂತಾನಆರೂಢ ಸುಖದ ಶೆಲೆಯಾಗಿಆರೂಢ ಸುಖದ ಶೆಲೆಯಾಗಿ ಬೇವೂರಭಾಗ್ಯದ ಬುತ್ತಿಯ ಬಿಚ್ಚ್ಯಾನ ||೪||

ಬೇವೂರ ದರ್ಗಾ ದಾವಲಮಲೀಕ ಫೀರಾಹರಕಿ ಹೊತ್ತವಗ ಬೆಳಕಾಗಿ ಫೀರಾಹರಕಿ ಹೊತ್ತವಗ ಬೆಳಕಾಗಿ ಫೀರಾನಾಡಿಗೆ ದೊಡ್ಡವನು ಆಗ್ಯಾನ ಫೀರಾ ||೫||

ಕಲಗುಡಿ ಕಾಳಮ್ಮ,ದುಗ್ಗಮ್ಮ,ದುರಗಮ್ಮದೇಗುಲದ ಈಶ್ವರದೇಗುಲದ ಈಶ್ವರ ಹನಮಂತ ದೇವರುಬೇವೂರ ಸೀಮಿಯ ಕಾದಾರೋ ||೬||

ಕೂಡಲಕ ಹೊಂಟ ಸಂಗಯ್ಯನ ಕಳಸ ಬೇವೂರಾಗ ನಿಂತ ಮೆರವಣಿಗಿಬೇವೂರಾಗ ನಿಂತ ಮೆರವಣಿಗಿ ಮಾಡಿದರಭಕ್ತರ ಬಾಳು ಸಾರ್ಥಕ ||೭||

ಬೇವೂರ ಗಂಡು ಮಹಾದಂಡನಾಯಕನಾಗಿ ದೇಶ ರಕ್ಷಣೆ ಮಾಡ್ಯಾನ ದೇಶ ರಕ್ಷಣೆ ಮಾಡ್ಯಾನಬಹದ್ದೂರ ಬೇವೂರ ಹೆಸರ ಮೆರಸ್ಯಾನ ||೮||

ಕೈಲಾಸ ಸಾರುದಕ ಬೇವೂರ ಸಾಕುಕಾಶಿ ಶ್ರೀಶೈಲ ಮತ್ಯಾಕಕಾಶಿ ಶ್ರೀಶೈಲ ಮತ್ಯಾಕ ಹುಚ್ಚಪ್ಪ ಮನದಾಗ ಗ್ಯಾನಯ್ಯ ನಿಂತಾನ ||೯||

ಕವನ ರಚನೆ:ಶ್ರೀ ಸಂಗನಗೌಡ.ರಾಮನಗೌಡ.

ತೆಗ್ಗಿನಮನಿ.

(ಪ್ರಗತಿಪರ ರೈತರು ಬೇವೂರ ತಾ.ಜಿ.ಬಾಗಲಕೋಟೆ.)

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button