ಚಿತ್ರದುರ್ಗ ಲೇಖಕಿಯರ ಸಂಘದಿಂದ ನಡೆಯುವ ರಾಜ್ಯ ಮಟ್ಟದ ಕವಿ ಗೋಷ್ಠಿಗೆ – ಕವಿತೆಗಳ ಆಹ್ವಾನ.
ಚಿತ್ರದುರ್ಗ ಫೆ.22

ಜಿಲ್ಲೆಯ ಲೇಖಕಿಯರ ಸಂಘದ ವತಿಯಿಂದ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳಾ ಕವಿ ಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ. ಸಾಹಿತ್ಯಾಸಕ್ತರು ವಿದ್ಯಾರ್ಥಿನಿಯರು, ಮಹಿಳೆಯರು ತಮ್ಮ ಒಂದು ಕವಿತೆಯನ್ನು ಈ ಕೆಳಗೆ ನೀಡಲಾಗಿರುವ ಯಾವುದಾದರು ಒಂದು ನಂಬರಿಗೆ ದಿನಾಂಕ ೦೫/೦೩/೨೦೨೬ ಒಳಗೆ ಕಳುಹಿಸ ಬಹುದಾಗಿದೆ. ಕವಿತೆಗಳ ಆಯ್ಕೆಯನ್ನು ಆಧರಿಸಿ ಕವಿ ಗೋಷ್ಠಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಸಂಘದ ಅಧ್ಯಕ್ಷೆಯಾದ ಶ್ರೀಮತಿ ನಿರ್ಮಲ ಮರಡಿಹಳ್ಳಿ ಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಪರ್ಕ ಸಂಖ್ಯೆಗಳು
ನಿರ್ಮಲ ಮರಡಿಹಳ್ಳಿ.
ಅಧ್ಯಕ್ಷರು,ಕಲೇಸಂ,
ಚಿತ್ರದುರ್ಗ/99015 27137,
ದೀಪಿಕಾ ಬಾಬು
ಕಾರ್ಯದರ್ಶಿಗಳು,ಕಲೇಸಂ
7996321323,
ಡಿ.ಶಬ್ರಿನಾ ಮಹಮದ್ ಅಲಿ.
ಉಪಾಧ್ಯಕ್ಷರು, ಕಲೇಸಂ
97318 79840

