ಶಿಕ್ಷಕ ಶ್ರೀ ಮುತ್ತು ವಡ್ಡರ ಗೆ ಶ್ರೀ ಮೊಗ್ಗಿ ಮಾಯಿದೇವ – ರತ್ನ ಪ್ರಶಸ್ತಿ .

ಹಿರೇಮಾಗಿ ಫೆ.23

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಮಾಗಿ ಗ್ರಾಮದ ಶ್ರೀ ರಾಮಲಿಂಗೇಶ್ವರ ಸಾಂಸ್ಕೃತಿಕ ಕಲಾವಿದರ ಸಂಘ (ರಿ) ಇವರು ಶ್ರೀರಾಮಲಿಂಗೇಶ್ವರ ಜಾತ್ರಾ ಪ್ರಯುಕ್ತ ನೀಡುವ ಈ ವರ್ಷದ ಶ್ರೀ ಮೊಗ್ಗಿ ಮಾಯಿದೇವ ರತ್ನ ಪ್ರಶಸ್ತಿಯನ್ನು ಹಿರೇಮಳಗಾವಿಯ ಶಿಕ್ಷಕರಾದ ಶ್ರೀ ಮುತ್ತು ವಡ್ಡರಿಗೆ ನೀಡಿ ಗೌರವಿಸಲಾಯಿತು.

ವಿಜಯನಗರ ಸಾಮ್ರಾಜ್ಯದ ಒಂದನೇ ಪ್ರೌಢ ದೇವರಾಯರ ಕಾಲದಲ್ಲಿ ಆಸ್ಥಾನದ ರಾಜ ಗುರುವಾಗಿದ್ದ ಶ್ರೀ ಮೊಗ್ಗಿ ಮಾಯಿದೇವರು ಕ್ರಿ.ಶ 1430 ರಲ್ಲಿ ಮಲಪ್ರಭಾ ದರದ ಐಪುರ ಹಿರೇಮಾಗಿ ಎಲ್ಲಿ ಜನಿಸಿದರು. ಶ್ರೀ ಸೋಮೇಶ್ವರ ತನ್ನ ಆರಾಧ್ಯ ದೈವವನ್ನಾಗಿಸಿಕೊಂಡು ಅನುಭವ ಸೂತ್ರ, ಶಿವ ಸೂತ್ರ, ಸಂಸ್ಕೃತ ಗ್ರಂಥಗಳು ಹಾಗೂ ಪ್ರಭು ಗೀತೆ ಮತ್ತು ಐಪುರಿಶ್ವರ ಶತಕ ವಚನಗಳನ್ನು ರಚಿಸಿದ್ದಾರೆ.

ಇವರ ಸ್ಮರಣಾರ್ಥಕವಾಗಿ ಶ್ರೀ ರಾಮಲಿಂಗೇಶ್ವರ ಸಾಂಸ್ಕೃತಿಕ ಕಲಾವಿದರ ಸಂಘವು ಪ್ರತಿ ವರ್ಷವು ಇವರ ಹೆಸರಿನಲ್ಲಿ ಶ್ರೀ ಮೊಗ್ಗಿ ಮಾಯಿದೇವ ರತ್ನ ಪ್ರಶಸ್ತಿ ನೀಡುತ್ತಾ ಬಂದಿರುತ್ತಾರೆ.

ಈ ವರ್ಷದ ಈ ಪ್ರಶಸ್ತಿಯನ್ನು ವೃತ್ತಿಯಲ್ಲಿ ಶಿಕ್ಷಕರಾಗಿರುವ ಹಾಗೂ ಪ್ರವೃತ್ತಿಯಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಹಾಗೂ ಇತ್ತೀಚೆಗೆ ಸನ್ಮಾರ್ಗದ ದುಂಬಿ ಎಂಬ ಸ್ಪೂರ್ತಿದಾಯಕ ಕವನಗಳನ್ನು ಒಳ ಗೊಂಡಿರುವ ಪುಸ್ತಕ ಬಿಡುಗಡೆ ಮಾಡಿದ ಇವರಿಗೆ ಈ ವರ್ಷ ಪ್ರಶಸ್ತಿ ನೀಡಲಾಯಿತು.

ಈ ಸರಳ ಸುಂದರ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀಮ. ನಿ.ಪ್ರ ಅಭಿನವ ಒಪ್ಪತ್ತೇಶ್ವರ ಮಹಾಸ್ವಾಮಿಗಳು ಒಪ್ಪತ್ತೇಶ್ವರ ಮಠ ಗುಳೇದಗುಡ್ಡ, ಹಾಗೂ ಶ್ರೀ ಮ. ನಿ. ಪ್ರ ಶಿವಲಿಂಗ ಮಹಾಸ್ವಾಮಿಗಳು ವಿರಕ್ತಮಠ ಬಿಜಕಲ್, ವೇ. ಮೂ ನಾಗರಾಜ ಸಂ ಹಿರೇಮಠ, ಶ್ರೀ ಶ್ರೀ ಚನ್ನಬಸಪ್ಪ ಅಜ್ಜನವರು, ಶ್ರೀ ಶ್ರೀ ಪ್ರಾಣೇಶ ಅಜ್ಜನವರು ವಹಿಸಿಕೊಂಡಿದ್ದರು, ಶ್ರೀ ಮೊಗ್ಗಿ ಮಾಯಿದೇವರ 644 ನೇ. ಜಯಂತೋತ್ಸವದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button