🚨ಬ್ರೇಕಿಂಗ್ ನ್ಯೂಸ್, ರಸ್ತೆಗಿಳಿದು ಜನರ ಪ್ರಾಣ ಉಳಿಸಿದ – ಉಡುಪಿ ಟ್ರಾಫಿಕ್ ಪೊಲೀಸ್!🚨
ಉಡುಪಿ ಜು.13

ಮಳೆಯ ಆರ್ಭಟಕ್ಕೆ ಉಡುಪಿಯ ತೆಂಕಪೇಟೆಯ ರಸ್ತೆಯಲ್ಲಿ ಸೃಷ್ಟಿಯಾಗಿದ್ದ ಬೃಹತ್ ಮತ್ತು ಅಪಾಯಕಾರಿ ಹೊಂಡ, ವಾಹನ ಸವಾರರ ಪಾಲಿಗೆ ಮೃತ್ಯುಕೂಪವಾಗಿ ಪರಿಣಮಿಸಿತ್ತು. ಸಾರ್ವಜನಿಕರ ಈ ಸಂಕಷ್ಟಕ್ಕೆ ತಕ್ಷಣ ಸ್ಪಂದಿಸಿದ ಉಡುಪಿ ಟ್ರಾಫಿಕ್ ಪೊಲೀಸ್ ಠಾಣೆಯ ಅಧಿಕಾರಿ “ಹುಸೇನಸಾಬ ಚಪ್ಪರಕರ್” ಹಾಗೂ ಸಿಬ್ಬಂದಿ “ರಾಜಪ್ಪ (ಪಿಸಿ 309)” ಅವರು, ಸ್ವತಃ ರಸ್ತೆಗಿಳಿದು ಹೊಂಡವನ್ನು ಮುಚ್ಚುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ವರದಿಯ ಮುಖ್ಯಾಂಶಗಳು:-
ತ್ವರಿತ ಕಾರ್ಯಚರಣೆ:-
ಅಪಾಯಕಾರಿ ಹೊಂಡದಿಂದ ಸವಾರರಿಗೆ ಉಂಟಾಗುತ್ತಿದ್ದ ತೊಂದರೆಯನ್ನು ಗಮನಿಸಿದ ಅಧಿಕಾರಿಗಳು, ಯಾವುದೇ ವಿಳಂಬ ಮಾಡದೆ ಸ್ಥಳಕ್ಕೆ ಧಾವಿಸಿ ತಾತ್ಕಾಲಿಕ ದುರಸ್ತಿ ಕೈಗೊಂಡರು. ಇದರಿಂದ ಸಂಭವಿಸಬಹುದಾಗಿದ್ದ ಅನಾಹುತಗಳನ್ನು ತಪ್ಪಿಸಿದಂತಾಗಿದೆ.
ಜಿಲ್ಲಾ ಪೊಲೀಸ್ ವ್ಯವಸ್ಥೆಗೆ ಅಭಿನಂದನೆ:-

ಕರ್ತವ್ಯದ ಆಚೆಗೂ ಸಾರ್ವಜನಿಕರ ಜೀವದ ಬಗ್ಗೆ ಕಾಳಜಿ ವಹಿಸಿದ ಟ್ರಾಫಿಕ್ ಪೊಲೀಸ್ ತಂಡದ ಕಾರ್ಯಕ್ಕೆ ಸಾರ್ವಜನಿಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಈ ಕುರಿತು “ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೂ (SP)” ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದು, ಇಲಾಖೆಯ ಈ ಜನಪರ ಕಾರ್ಯದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
ವೈರಲ್ ಆದ ಫೋಟೋಗಳು:-
ಪೊಲೀಸ್ ಅಧಿಕಾರಿಗಳು ಹೊಂಡ ಮುಚ್ಚುತ್ತಿರುವ ದೃಶ್ಯಗಳು ಸಾಮಾಜಿಕ ಜಾಲ ತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, “ಇಂತಹ ಅಧಿಕಾರಿಗಳೇ ಇಲಾಖೆಗೆ ಶಕ್ತಿ” ಎಂದು ನೆಟ್ಟಿಗರು ಪ್ರಶಂಸೆಯ ಸುರಿಮಳೆ ಗೈಯುತ್ತಿದ್ದಾರೆ.
“ಸಾರ್ವಜನಿಕರ ಸುರಕ್ಷತೆ ನಮ್ಮ ಆದ್ಯತೆ. ಜವಾಬ್ದಾರಿ ಯಿಂದ ವಾಹನ ಚಲಾಯಿಸಿ”:-
ಎಂಬ ಸಂದೇಶವನ್ನು ಇಡೀ ಪೊಲೀಸ್ ವ್ಯವಸ್ಥೆ ಈ ಮೂಲಕ ಸಾರಿ ಹೇಳಿದೆ.
ನಿಸ್ವಾರ್ಥ ಸೇವೆ ಸಲ್ಲಿಸಿದ ಪೊಲೀಸ್ ಸಿಬ್ಬಂದಿಗೆ ಸಾರ್ವಜನಿಕ ವಲಯದಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ. 🚔👏⚖️
ವರದಿ:ಆರತಿ.ಗಿಳಿಯಾರು.ಉಡುಪಿ
