ನಿಧನ ವಾರ್ತೆ: ದೊಡ್ಡ ಊರಪ್ಪರ ಮಗ ದುರುಗಪ್ಪ ನಿಧನ – ಕೂಡ್ಲಿಗಿ.
ಕೂಡ್ಲಿಗಿ ಅಕ್ಟೋಬರ್.8
![](https://i0.wp.com/sknewskannada.in/wp-content/uploads/2023/10/IMG-20231008-WA0006.jpg?resize=383%2C681&ssl=1)
ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದ14ನೇ ವಾರ್ಡ ವಾಸಿಯಾದ ಡಾ. ಬಿ. ಆರ್. ಅಂಬೇಡ್ಕರ್ ನಗರದ ದೊಡ್ಡ ಊರಪ್ಪರ ಮಗ ದುರುಗಪ್ಪ ರವರು (80) ಇವರು ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಈ ದಿನ ಬೆಳಗಿನ ಜಾವಾ 5.20ರ ಸಮಯಲ್ಲಿ ತಮ್ಮ ಸ್ವಂತ ನಿವಾಸದಲ್ಲಿ ನಿಧನ ಹೊಂದಿರುತ್ತಾರೆ. ಇವರಿಗೆ ಓರ್ವ ಗಂಡು 1 ಜನ ಹೆಣ್ಣು ಮಕ್ಕಳಿದ್ದು ಇವರನ್ನು ಸಮುದಾಯದ ಹಿರಿಯರು ಅವರ ಮಕ್ಕಳು ಹಾಗೂ ಮೊಮ್ಮಕ್ಕಳು ಸೇರಿದಂತೆ, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. *ಅಂತ್ಯಕ್ರಿಯೆ:- ಮೃತರಾದ ದುರುಗಪ್ಪ ಇವರ ಅಂತ್ಯಕ್ರಿಯೆ ಇಂದು ಭಾನುವಾರ ಮಧ್ಯಾಹ್ನ 3.ಗಂಟೆಗೆ, ಪಟ್ಟಣದ ಅಂಚಿನಲ್ಲಿರುವ ಶಾಂತಿ ವನದಲ್ಲಿ ಜರುಗಲಿದೆ. *ಸಂತಾಪ:- ಪಟ್ಟಣ ಸೇರಿದಂತೆ ತಾಲೂಕಿನ ಸಮಸ್ತ ಸಮಾಜದವರು, ಹಾಗೂ ವಿವಿಧ ಸಮಾಜದವರು ಮುಖಂಡರಗಳು ಹಾಗೂ ಸಾಲುಮನೆ ದೊಡ್ಡ ಊರಪ್ಪರ ವಂಶದವರು ಸೇರಿದಂತೆ ವಿವಿಧ ಜನ ಪ್ರತಿನಿಧಿಗಳು. ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ರೈತರು, ಕಾರ್ಮಿಕರು, ವಿವಿಧ ಪಕ್ಷಗಳ ಮುಖಂಡರು, ನಾಗರಿಕರು ಹಾಗೂ ಗಣ್ಯರು, ನಿಧನರಾದ ದುರುಗಪ್ಪ ರವರ ಅಗಲಿಕೆಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ವರದಿಗಾರರು:ರಾಘವೇಂದ್ರ.ಬಿ.ಸಾಲುಮನಿ ಕೂಡ್ಲಿಗಿ