ಶಟಲ್ ಬ್ಯಾಡ್ಮಿಂಟನಲ್ಲಿ ಗೌತಮ್ ರೆಡ್ಡಿ ರಾಜ್ಯ ಮಟ್ಟಕ್ಕೆ ಆಯ್ಕೆ.
ಹರಪನಹಳ್ಳಿ ಅಕ್ಟೋಬರ್.14
![](https://i0.wp.com/sknewskannada.in/wp-content/uploads/2023/10/IMG-20231013-WA0046.jpg?resize=461%2C1024&ssl=1)
2023-24ನೇ ಸಾಲಿನ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ನಡೆಯುವ ಗುಲ್ಬರ್ಗ ವಿಭಾಗ ಮಟ್ಟದಲ್ಲಿ ಶಟಲ್ ಬ್ಯಾಡ್ಮಿಂಟನ್ ಹೊಸಪೇಟೆ ಒಳಾಂಗಣದಲ್ಲಿ ನಡೆಸಲಾಯಿತು.ಬಾಲಕರ 14 ವರ್ಷ ವಯಾಮಿತಿ ವಿಭಾಗದಲ್ಲಿ ವಿದ್ಯಾನಿಧಿ ಅಕಾಡೆಮಿ ಹರಪನಹಳ್ಳಿಯ ಬಾಲಕ ಗೌತಮ್ ರೆಡ್ಡಿ ಜೆ .ಎಚ್ ತಂದೆ ಜನಾರ್ಧನ್ ರೆಡ್ಡಿ ರಾಜ್ಯಕ್ಕೆ ಆಯ್ಕೆಯಾಗಿರುತ್ತಾರೆ. ಈ ಸಂದರ್ಭದಲ್ಲಿ ತರಬೇತಿದಾರರು ಮತ್ತು ಪ್ರಾಂಶುಪಾಲರಾದ ಸಂತೋಷ್ ಜತ್ತಿ ಸರ್ ಮತ್ತು ಅಧ್ಯಕ್ಷರು ಸರ್ವ ಸದಸ್ಯರು ವಿದ್ಯಾನಿಧಿ ಅಕಾಡೆಮಿ ಇವರು ಗೌತಮ್ ರೆಡ್ಡಿ ಜೆಎಚ್ ಶಟಲ್ ಬ್ಯಾಟ್ಮಿಟನ್ ನಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಶಾಲೆಗೆ ಹಾಗೂ ತಂದೆ ತಾಯಿಗಳಿಗೂ ತಮ್ಮ ನೆಚ್ಚಿನ ತರಬೇತುದಾರರಾದ ಸಂತೋಷ್ ಜತ್ತಿ ಯವರಿಗೂ ಹೆಸರು ಮತ್ತು ಕೀರ್ತಿ ತಂದು ಕೊಟ್ಟಂತಹ ಬಾಲಕನಿಗೆ ಶುಭ ಹಾರೈಸಿ ಅಭಿನಂದನೆಗಳನ್ನು ಸಲ್ಲಿಸಿದರು.
ತಾಲೂಕ ವರದಿಗಾರರು:ಪ್ರದೀಪ್.ಕುಮಾರ್.ಸಿ ಕೊಟ್ಟೂರು