ಇಂದಿನಿಂದ ಅ.24 ರವರಗೆ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವ ಮತ್ತು ಮೂರ್ತಿ ಪ್ರತಿಷ್ಠಾಪನೆ.
ಹುನಗುಂದ ಅಕ್ಟೋಬರ್.17
![](https://i0.wp.com/sknewskannada.in/wp-content/uploads/2023/10/IMG-20231017-WA0027.jpg?resize=670%2C1024&ssl=1)
ಪಟ್ಟಣದ ಡಾ. ಬಾಬು ಜಗಜೀವನರಾಮ ನಗರದಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನ ಸೇವಾ ಸಮಿತಿ ವತಿಯಿಂದ ಅ.18 ರಿಂದ 24ರವರೆಗೆ ಶ್ರೀ ದುರ್ಗಾದೇವಿ ನೂತನ ದೇವಸ್ಥಾನ ಹಾಗೂ ನೂತನ ಮೂರ್ತಿ ಪ್ರತಿಷ್ಠಾಪನೆ ಜೊತೆಗೆ ಜಾತ್ರಾ ಮಹೋತ್ಸವ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ವಿಜಯ ಕೆಂಚಪ್ಪ ಬಾವಿಕಟ್ಟಿ ತಿಳಿಸಿದ್ದಾರೆ. ಸುದ್ದಿ ಮಾಧ್ಯಮ ದವರೊಂದಿಗೆ ಮಾತನಾಡಿದ ಅವರು ಅ.18 ರಂದು ಬೆಳಿಗ್ಗೆ 1೦ ಗಂಟೆಗೆ ಪಟ್ಟಣದ ಟಿಸಿಎಚ್ ಮೈದಾನದಿಂದ 1೦೧ ಸುಮಂಗಲೆಯರ ಕುಂಭಮೇಳ ಮತ್ತು ಸಕಲ ವಾಧ್ಯ ಮೇಳದೊಂದಿಗೆ ಮೂರ್ತಿ ಮೆರವಣಿಗೆಯೊಂದಿಗೆ ದೇವಸ್ಥಾನ ತಲುಪುವದು.ಅ.19 ರಂದು ಬೆಳಿಗ್ಗೆ 11-11 ಗಂಟೆಗೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಶುಭ ಮುಹೂರ್ತದಲ್ಲಿ ಮೂರ್ತಿ ಪ್ರತಿಷ್ಠಾಪನೆ ಯಾಗುವದು.
![](https://i0.wp.com/sknewskannada.in/wp-content/uploads/2023/10/IMG-20231017-WA0032-1.jpg?resize=708%2C708&ssl=1)
ನೂತನ ಅಡ್ಡಪಲ್ಲಕ್ಕಿಯು ಕೂಡಲಸಂಗಮದಲ್ಲಿ ಗಂಗಾ ಸ್ನಾನದೊಂದಿಗೆ ಅ.24 ರಂದು ದೇವಸ್ಥಾನ ತಲುಪಿ ಆಯುಧ ಪೂಜೆ ಜರುಗುವದು.ಅ.24 ರಂದು ವಿಜಯ ದಶಮಿಯೆಂದು ನಗರದ ಸಕಲ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜಾತ್ರಾ ಮಹೋತ್ಸವ ನಡೆಯುತ್ತವೆ ಎಂದು ತಿಳಿಸಿದರು.
ತಾಲೂಕ ವರದಿಗಾರರು: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ