ರಾಷ್ಟ್ರೀಯ ಸಮಾವೇಶ ದೆಹಲಿಯಲ್ಲಿ ನಡೆದ ಹಲವು ಬೇಡಿಕೆಗಳು ಈಡೇರಿಸುವಂತೆ ಗ್ರಾಕೋಸ್ ಹೋರಾಟ.
ಹಗರಿಬೊಮ್ಮನಹಳ್ಳಿ ಅಕ್ಟೋಬರ್.21
![](https://i0.wp.com/sknewskannada.in/wp-content/uploads/2023/10/IMG-20231021-WA0039.jpg?resize=708%2C423&ssl=1)
ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ನರೇಗಾ ಸಂಘರ್ಷ ಮೋರ್ಚಾ 3 ದಿನದ ರಾಷ್ಟ್ರೀಯ ಸಮಾವೇಶ ದೆಹಲಿಯ ರಾಜಾರಾಮ್ ಮೋಹನ್ ರಾಯ್ ಮೆಮೊರಿಯಲ್ ಹಾಲ್ ನಲ್ಲಿ ನಡೆಯಿತು. ಎಂಬುವುದಾಗಿ ಗ್ರಾಕೋಸ್ ತಾಲೂಕು ಅಧ್ಯಕ್ಷರು ಕೊಟ್ರಮ್ಮ ಇವರು ತಿಳಿಸಿದ್ದಾರೆ,ಈ ರಾಷ್ಟ್ರೀಯ ಸಮಾವೇಶದಲ್ಲಿ ೧೫ ರಾಜ್ಯಗಳ ಸಂಘಟನೆ ಸಾವಿರಾರು ಪ್ರತಿನಿಧಿಗಳು ಹಾಗೂ ಮುಖಂಡರುಗಳು ಭಾಗವಹಿಸಿದ್ದರು.
![](https://i0.wp.com/sknewskannada.in/wp-content/uploads/2023/10/IMG-20231021-WA0040.jpg?resize=708%2C533&ssl=1)
ಹಾಗೂ ಕರ್ನಾಟಕದಿಂದ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ, ಜಾಗೃತಿ ಮಹಿಳಾ ಸಂಘಟನೆ , ಅಂಗವಿಕಲರ ಹಕ್ಕುಗಳ ರಾಷ್ಟ್ರೀಯ ವೇದಿಕೆ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದೇವು. ಹಾಗೂ ಹಗರಿಬೊಮ್ಮನಹಳ್ಳಿ ತಾಲೂಕಿನ ಗ್ರಾಕೋಸ್ ಸದಸ್ಯರು ಹಾಗೂ ೧೫ ಕ್ಕೂ ಹೆಚ್ಚು ರಾಜ್ಯದ ನೂರಾರು ಗ್ರಾಕೋಸ್ ಅಧ್ಯಕ್ಷರುಗಳು ಹಾಗೂ ಗ್ರಾಮಸ್ಥರು ತಮ್ಮ ತಮ್ಮ ಅನಿಸಿಕೆಗಳನ್ನು ತಿಳಿಸಿದ್ದಾರೆ, ಹಾಗೂ ಅನೇಕ ಗ್ರಾಮದ ಗ್ರಾಕೋಸ್ ಸದಸ್ಯರುಗಳು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಗ್ರಾಕೋಸ್ ಸಂಘಟನೆಯಿಂದ ಪತ್ರ ಚಳುವಳಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಈ ಗ್ರಾಮೀಣ ಕೂಲಿ ಕಾರ್ಮಿಕ ಪತ್ರ ಚಳುವಳಿಯನ್ನು ಅರಿತು ಕೊಂಡು ಈ ಕಾರ್ಮಿಕರ ಬೇಡಿಕೆಯನ್ನು ಇಡೇರಿಸುವರೋ ಕಾದು ನೋಡಬೇಕಾಗಿದೆ.
![](https://i0.wp.com/sknewskannada.in/wp-content/uploads/2023/10/IMG-20231021-WA0041.jpg?resize=708%2C455&ssl=1)
ಮುಖ್ಯ ಬೇಡಿಕೆಗಳು,೧ ಕುಟುಂಬಕ್ಕೆ ೨೦೦ ದಿನಗಳ ಕೆಲಸ ಕೊಡಬೇಕು. ದಿನಕ್ಕೆ ೬೦೦ ರಿಂದ ೮೦೦ ಕೂಲಿ ಹಣ ಕೊಡಬೇಕು. ಭ್ರಷ್ಟಾಚಾರ ನಿಲ್ಲಿಸಲು ಸಾಮಾಜಿಕ ಲೆಕ್ಕ ಪರಿಶೋಧನೆ ಬಲ ಪಡಿಸುವುದು. ನರೇಗಾ ಸಂಬಂಧ ಪ್ರತಿ ತಿಂಗಳು ಗ್ರಾಮ ಸಭೆ ಆಗಬೇಕು.ನರೇಗಾ ಕಾರ್ಮಿಕರನ್ನು ಕಟ್ಟಡ ಕಾರ್ಮಿಕರ ಜೊತೆ ಸೇರಿಸಬೇಕು. ನರೇಗಾ ಕೂಲಿ ಕಾರ್ಮಿಕರ ಹಣ ಕೂಡಲೇ ಬಿಡುಗಡೆ ಮಾಡಬೇಕು. ಈ ಸಂರ್ಭದಲ್ಲಿ ಭಾಗವಹಿಸಿದ ಕಾರ್ಮಿಕರಾದ ಅಕ್ಕಮ್ಮ, ಬಸವರಾಜ,ಗುಂಡಪ್ಪ,ಬಸವರಾಜ್ ಆಶಾಪುರ, ಕೊಟ್ರಮ್ಮ,ಸ್ವಪ್ನದೀಪ,ಹುಚ್ಚಪ್ಪ. ಮಹಾಲಕ್ಷ್ಮಿ ಇವರೆಲ್ಲರೂ ಪಾಲ್ಗೊಂಡಿದ್ದರು.
ಜಿಲ್ಲಾ ವರದಿಗಾರರು:ರಾಘವೇಂದ್ರ.ಬಿ.ಸಾಲುಮನಿ ಕೂಡ್ಲಿಗಿ