ಭಾರತ ತಂಡ ವಿಶ್ವಕಪ್ ಗೆಲ್ಲಲಿ ಎಂದು ವಿಶೇಷ ಪೂಜೆ ಸಲ್ಲಿಸಿದ ಯು. ನಾಗೇಶ್.
ಕಾನಾ ಹೊಸಹಳ್ಳಿ ನವೆಂಬರ್.15
![](https://i0.wp.com/sknewskannada.in/wp-content/uploads/2023/11/IMG-20231115-WA0005.jpg?w=708&ssl=1)
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಹೋಬಳಿಯ ಹೊಸಹಳ್ಳಿ ಗ್ರಾಮದ ಆರ್.ಗ್ರೂಪ್ ಸಂಸ್ಥಾಪಕರಾದ ಯು ನಾಗೇಶ್ ಪಟ್ಟಣದ ಶ್ರೀ ಸಾಲೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ನಂತರ ಆರ್ ಗ್ರೂಪ್ ನ ಸಂಸ್ಥಾಪಕರಾದ ಯು ನಾಗೇಶ್ ಮಾತನಾಡಿ ಇಂದು ನಡೆಯಲಿರುವ ವಿಶ್ವಕಪ್ ನ ಮೊದಲನೇ ಸೆಮಿ ಫೈನಲ್ ಪಂದ್ಯಾವಳಿ ಭಾರತ ಮತ್ತು ನ್ಯೂಜಿಲ್ಯಾಂಡ್ ಕ್ರಿಕೆಟ್ ಪಂದ್ಯಾವಳಿ ನಡೆಯಲಿದ್ದು. ಈ ಪಂದ್ಯಾವಳಿಯಲ್ಲಿ ಭಾರತ ತಂಡ ಜಯ ಸಾಧಿಸಲೆಂದು ಮತ್ತು ಈ ವಿಶ್ವಕಪ್ ನಲ್ಲಿ ಭಾರತ ತಂಡ ವಿಶ್ವಕಪ್ ವಿಜಯಶಾಲಿ ಆಗಲೆಂದು ಸಾಲೇಶ್ವರ ದೇವಸ್ಥಾನದಲ್ಲಿವಿಶೇಷ ಅಭಿಷೇಕ ಪೂಜಾ ಕೈಂಕರ್ಯ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಹಿರಿಯರಾದ ಬಸವರಾಜ್ ಸಿದ್ದನಕೋಟೆ. ಯುವ ಮುಖಂಡರಾದ ಎ ಟಿ ಬಸವರಾಜ್. ಸಾಲೇಶ್. ಗಜೇಂದ್ರ ಆಚಾರಿ. ಯು ಏನ್ ಜೀವನ್. ಯು.ಎನ್. ಬಾಲಾಜಿ. ಅನಿಲ್ ಕುಮಾರ್ ಬಾಬು. ದೇವೇಂದ್ರ. ಸೇರಿದಂತೆ ಇತರರು ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು:ಕೆ.ಎಸ್.ವೀರೇಶ್. ಕಾನಾ ಹೊಸಹಳ್ಳಿ