“ದಿಲ್ಲಿ ಚಲೋ” ಎರಡನೇ ಹಂತದ ಚಿತ್ರೀಕರಣ ಮುಕ್ತಾಯ.
ಹುಬ್ಬಳ್ಳಿ ನವೆಂಬರ್.23
ಮಾರ್ಸ್ ಸ್ಟುಡಿಯೋ ಪ್ರೊಡಕ್ಷನ್ ಹುಬ್ಬಳ್ಳಿ ಅವರ ‘ದಿಲ್ಲಿ ಚಲೋ’ ಎಂಬ ಕನ್ನಡ ಚಲನ ಚಿತ್ರದ ಎರಡನೇ ಹಂತದ ಚಿತ್ರೀಕರಣ ಇದೀಗ ಮುಕ್ತಾಯ ಗೊಂಡಿದೆ . ಹುಬ್ಬಳ್ಳಿ-ಧಾರವಾಡ, ಕೆಲಗೇರಿ, ಹೆಬ್ಬಳ್ಳಿ, ಹಾಗೂ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಕಳೆದ ಇಪ್ಪತ್ತು ದಿನಗಳ ಕಾಲ ಸತತ ಚಿತ್ರೀಕರಣ ನಡೆಸಿ ಪ್ರಮುಖ ದೃಶ್ಯಗಳನ್ನು ಚಿತ್ರೀಕರಿಸು ವದರೊಂದಿಗೆ ಚಿತ್ರದ ಎರಡನೇ ಹಂತದ ಚಿತ್ರೀಕರಣ ಮುಕ್ತಾಯ ಗೊಂಡಿದೆ. ಊರೂರು ತಿರುಗಿ ಬಲೂನ ಮಾರುವ (ಟೆನ್ನಿಸ್ಕೃಷ್ಣ) ವ್ಯಕ್ತಿಯೊಬ್ಬನ ಮಗಳು ಕ್ರೀಡೆಯಲ್ಲಿ ಪಾಲ್ಗೊಂಡು ವಿಜೇತಳಾಗಿ ಹಳ್ಳಿಯಿಂದ-ದಿಲ್ಲಿವರೆಗೂ ಸಾಗಿ ಯಶಸ್ಸಿನ ಗುರಿ ಹೇಗೆ ತಲುಪುತ್ತಾಳೆ ಮತ್ತು ಮುಂದೆ ಪೊಲೀಸ್ ಇಲಾಖೆಯಲ್ಲಿ ಸೇರಿ ಜವಾಬ್ದಾರಿಯುತ ಹುದ್ದೆ ಅಲಂಕರಿಸುವ ವಿಷಯದ ಕಥಾ ವಸ್ತು ಚಿತ್ರದಲ್ಲಿದೆ. ಹೆಣ್ಣೊಬ್ಬಳು ಮನಸ್ಸು ಮಾಡಿದರೆ ಯಾವೂದೂ ಅಸಾಧ್ಯವಲ್ಲ . ಸ್ತ್ರೀಶಕ್ತಿ ಕುರಿತು ಚಿತ್ರದಲ್ಲಿ ಹೇಳಲಾಗಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಡಿಸೆಂಬರ್ ತಿಂಗಳಲ್ಲಿ ಅಂತಿಮ ಹಂತದ ಚಿತ್ರೀಕರಣ ಮುಗಿಸಿ ಫೇಬ್ರುವರಿಯಲ್ಲಿ ಚಿತ್ರವನ್ನು ರಾಜ್ಯಾದ್ಯಂತ ತೆರೆಗೆ ತರುಲಾಗುತ್ತದೆ ಎಂದು ನಿರ್ದೇಶಕ ಶ್ರೀಪಾದ ಹೇಳಿದರು. ಪಾತ್ರ ವರ್ಗದಲ್ಲಿ ಹಾಸ್ಯನಟ ಟೆನ್ನಿಸ್ಕೃಷ್ಣ , ಗಣೇಶ್ರಾವ್ ಕೇಸರಕರ, ಅಪೂರ್ವ ಭರಣಿ, ಶ್ರೀಪಾದ ಕುಲಕರ್ಣಿ, ಮಹಾಂತೇಶ ಹಳ್ಳೂರ, ಡಾ.ಶಿವಕುಮಾರ್ ಸ್ವಾಮೀಜಿ , ಸಿದ್ದುಕೃಷ್ಣ ಢೇಕಣಿೆ, ವಿನಾಯಕ ರುಡ್ನೂರ್. ರಾಜೀವ್ಸಿಂಗ್ , ರಾಜು ಗಡ್ಡಿ, ಲಕ್ಷ್ಮೀ ಹುಬ್ಬಳ್ಳಿ, ಸುಕನ್ಯಾ, ನೀತಾ ಜಾಧವ್, ಅಮೃತಾ ನಾಯ್ಕ, ನಾರಾಯಣ್ ದೇಸಾಯಿ, ಅನ್ನಪೂರ್ಣಾ ಉಂಡಿ, ಪ್ರಭು ಹಂಚಿನಾಳ , ವೀರನಗೌಡ ಸಿದ್ದಾಪುರ, ಕಿರಣ್ ಸಿದ್ದಾಪುರ, ಮಹಾದೇವ ಸತ್ತಿಗೇರಿ, ಮಂಜುನಾಥ ಹಗೇದಾರ, ಆಸಿಫ್ , ರೋಶನ್ ಸಿಂಗ್. ಚಂದ್ರು ದಾಸರ. ಮಾಝ್ ಸುಲ್ತಾನ್, ಮುತ್ತಪ್ಪ ಪಾಲ್ತಿ, ಆನಂದ್ ಜೋಶಿ ಮೊದಲಾದವರು ಅಭಿನಯಿಸಿದ್ದಾರೆ. ತಾಂತ್ರಿಕ ವರ್ಗದಲ್ಲಿ ಓಂ ಪ್ರಕಾಶ್ ಛಾಯಾಗ್ರಹಣ, ಸಿದ್ದು ಯ, ಶ್ರೀಪಾದ ಕುಲಕರ್ಣಿ ಸಾಹಿತ್ಯ, ಪ್ರೇಮ್ ಭರತ್ ಸಂಗೀತ , ಅಶೋಕ್ ದೇವ್, ಸ್ಟ್ರೈಲ್ ಚಂದ್ರು ಸಾಹಸ . ಪ್ರಕಾಶ್ ಕಮ್ಮಾರ ಪ್ರಸಾಧನ, ರೋಹಿತ್ ಪುಣೆ ನೃತ್ಯ , ಶ್ರೀಪಾದ್ ಕೆ, ಅಶೋಕ್ದೇವ್ ಕಥೆ-ಸಂಭಾಷಣೆ , ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ ಪತ್ರಿಕಾಸಂಪರ್ಕ, ಅಶೋಕ್ದೇವ್ ಸಹನಿರ್ದೇಶನ, ಶಾಮ್ಸುಂದರ್ ನಿರ್ವಹಣೆ , ಶ್ರೀಪಾದ ಕುಲಕರ್ಣಿ ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ , ಶ್ರೀಮತಿ ಸಂಧ್ಯಾ ಜೋಶಿ, ಶ್ರೀಪಾದ ಕುಲಕರ್ಣಿ ನಿರ್ಮಾಪಕರಾಗಿದ್ದಾರೆ.
*****
ವರದಿ: ಡಾ.ಪ್ರಭು ಗಂಜಿಹಾಳ-
ಮೊ: ೯೪೪೮೭೭೫೩೪೬