ಕಬ್ಬಿನ ಗದ್ದೆಗೆ ಬೆಂಕಿ – 2.ಲಕ್ಷ ಮೊತ್ತದ ಕಬ್ಬು ಸುಟ್ಟು ಭಸ್ಮ.
ಬಣವಿಕಲ್ಲು ಡಿಸೆಂಬರ್.28
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಕಬ್ಬಿನ ಗದ್ದಗೆ ಬೆಂಕಿ ಬಿದ್ದು, ಸುಮಾರು 2 ಲಕ್ಷ ರೂ.ಮೊತ್ತದ ಕಬ್ಬು ಸುಟ್ಟು ಕರಕಲಾದ ಘಟನೆ ಕೂಡ್ಲಿಗಿ ತಾಲೂಕಿನ ಬಣವಿಕಲ್ಲು ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ. ಬಣವಿಕಲ್ಲು ಗ್ರಾಮದ ರೈತ ಕೆ ನಾಗಭೂಷಣ ತಂದೆ ಸದಾನಂದಪ್ಪ ಇವರಿಗೆ ಸೇರಿದ 4:30 ಎಕರೆ ಕಬ್ಬು ಬೆಳೆದ ಜಮೀನಿನಲ್ಲಿ ಸುಮಾರು 2:30 ಎಕರೆ ಕಬ್ಬಿನ ಬೆಳೆ ಸುಟ್ಟು ಭಸ್ಮವಾಗಿದೆ. 5 ಲಕ್ಷ ರೂ.ಮೊತ್ತದ ಕಬ್ಬು ಬೆಳೆದಿದ್ದರು. ಮಂಗಳವಾರ ಮಧ್ಯಾಹ್ನ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಕಬ್ಬಿನ ಗದ್ದೆಗೆ ಬೆಂಕಿ ಹೊತ್ತಿಕೊಂಡು 2 ಲಕ್ಷ ರೂ.ಬೆಲೆ ಬಾಳುವ ಕಬ್ಬು ಸುಟ್ಟು ಹೋಗಿದೆ.
![](https://i0.wp.com/sknewskannada.in/wp-content/uploads/2023/12/IMG-20231228-WA0003.jpg?resize=708%2C531&ssl=1)
ಸ್ಥಳೀಯ ಸಾರ್ವಜನಿಕರು ಹಾಗೂ ನೀರಿನ ಟ್ಯಾಂಕರ್, ಜೆಸಿಬಿ ಯಂತ್ರದಿಂದ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಸುದ್ದಿ ತಿಳಿದು ಕೂಡ್ಲಗಿ ಅಗ್ನಿ ಶಾಮಕದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವುದರ ಮೂಲಕ ಹೆಚ್ಚಿನ ಹಾನಿಯನ್ನು ತಡೆದಿದ್ದಾರೆ. ಈ ಸಂಬಂಧ ಅಗ್ನಿ ಶಾಮಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಭೇಟಿ ನೀಡಿ ಪರಿಶೀಲಿಸಿದರು. ಬೆಳೆ ನಷ್ಟಕ್ಕೆ ತಕ್ಷಣ ಪರಿಹಾರ ಒದಗಿಸಬೇಕು ಎಂದು ರೈತರ ಸಂಘದ ತಾಲ್ಲೂಕು ಅಧ್ಯಕ್ಷರು ಹಾಗೂ ಉಪಾಧ್ಯಕ್ಷ, ಮತ್ತು ಬೆಳೆ ನಷ್ಟಾದ ರೈತ ಒತ್ತಾಯಿಸಿದ್ದಾರೆ.ಹೋಬಳಿ
ವರದಿಗಾರರು:ಕೆ.ಎಸ್.ವೀರೇಶ್.ಕಾನಾ ಹೊಸಹಳ್ಳಿ