ಉಚಿತ ಮೇವಿನ ಬೀಜ ವಿತರಣೆ – ಡಾ. ದೇವೇಂದ್ರಪ್ಪ.
ತರೀಕೆರೆ ಮಾರ್ಚ್.6
ಪಶು ಸಂಗೋಪನೆ ಇಲಾಖೆಯಿಂದ ನೀರಿನ ಸೌಕರ್ಯ ಇರುವ ರೈತರಿಗೆ ಉಚಿತವಾಗಿ ಮೇವಿನ ಬೀಜಗಳಾದ ಸಜ್ಜೆ, ಅಲಸಂದಿ, ಹಾಗೂ ಜೋಳದ ಬೀಜಗಳನ್ನು ಉಚಿತವಾಗಿ ವಿತರಿಸುತಿದ್ದೇವೆ ಎಂದು ಪಶು ಸಂಗೋಪನ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ದೇವೇಂದ್ರಪ್ಪ ಅವರು ಹೇಳಿದರು. ಅವರು ಇಂದು ಪಟ್ಟಣದ ಪಶು ಸಂಗೋಪನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಕಚೇರಿಯಲ್ಲಿ, ಪಶು ಸಖಿಯರು ಕರೆದುಕೊಂಡು ಬಂದಿದ್ದ ಫಲಾನುಭವಿಗಳಿಗೆ ಮೇವಿನ ಬೀಜ ವಿತರಿಸಿ ಮಾತನಾಡಿದರು. ತಾಲೂಕಿನಾದ್ಯಂತ ನೀರಾವರಿ ಸೌಲಭ್ಯ ಇರುವ ಅರ್ಹ ರೈತರು ಈ ಸೌಲಭ್ಯವನ್ನು ಪಡೆದು ಕೊಳ್ಳಬೇಕೆಂದು ಹೇಳಿದರು ಗೋಪಾಲ ಮತ್ತು ದೋರನಾಳು ಗ್ರಾಮದ ರೈತರಿಗೆ ಬೇವಿನ ಬೀಜ ವಿತರಿಸಲಾಯಿತು.
ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್.ವೆಂಕಟೇಶ್.ತರೀಕೆರೆ