ತಿಪ್ಪೇರುದ್ರಸ್ವಾಮಿ ಆಶ್ರಯದಲ್ಲಿ ತಾಯಿ ಮಗಳು ಆತ್ಮ ಹತ್ಯೆ, ನೀರಿನ ಸಂಪಿನಲ್ಲಿ ಮೃತದೇಹ ಪತ್ತೆ.
ತುರುವನೂರು ಏಪ್ರಿಲ್.17
![](https://i0.wp.com/sknewskannada.in/wp-content/uploads/2024/04/IMG-20240417-WA00261.jpg?resize=692%2C358&ssl=1)
ಚಿತ್ರದುರ್ಗ ನಗರದ ತುರುವನೂರು ರಸ್ತೆಯಲ್ಲಿರುವ ಶ್ರೀ ತಿಪ್ಪೇರುದ್ರಸ್ವಾಮಿ ಆಶ್ರಮದಲ್ಲಿ ತಾಯಿ ಮತ್ತು ಮಗಳು ಮೃತಪಟ್ಟಿದ್ದಾರೆ.ಕೆಳಗೋಟೆಗೆ ಹೊಂದಿ ಕೊಂಡಿರುವ, ತುರುವನೂರು ರಸ್ತೆಯಲ್ಲಿರುವ ಶ್ರೀ ತಿಪ್ಪೇರುದ್ರಸ್ವಾಮಿ ಆಶ್ರಮದಲ್ಲಿರುವ ನೀರಿನ ಸಂಪಿನಲ್ಲಿ ಮಗಳ ಮೃತದೇಹ ಪತ್ತೆಯಾದರೆ, 200 ಲೀಟರ್ ನೀರಿನ ಡ್ರಮ್ಮಿನಲ್ಲಿ ತಾಯಿಯ ಮೃತ ದೇಹ ಪತ್ತೆಯಾಗಿದೆ.ಶಿವಮೊಗ್ಗ ಜಿಲ್ಲೆ, ಭದ್ರಾವತಿ ಮೂಲದ ಸುರೇಶ್ ಎಂಬುವವರ ಪತ್ನಿ ಗೀತಾ (40) ಹಾಗೂ ಪುತ್ರಿ ಪ್ರಿಯಾಂಕ(22) ಶವವಾಗಿ ಪತ್ತೆಯಾಗಿದ್ದಾರೆ.ಮಂಗಳವಾರ ರಾತ್ರಿ ವೇಳೆ ಈ ಘಟನೆ ನಡೆದಿದ್ದು, ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ತಡರಾತ್ರಿ 1 ಗಂಟೆ ವರೆಗೆ ಮಹಜರ್ ನಡೆಸಿ ಮೃತದೇಹಗಳನ್ನು ಶವಾಗಾರಕ್ಕೆ ಸ್ಥಳಾಂತರ ಮಾಡಿಸಿದ್ದಾರೆ.ಕಳೆದ ಮೂರ್ನಾಲ್ಕು ವರ್ಷದಿಂದ ತಿಪ್ಪೇರುದ್ರಸ್ವಾಮಿ ಆಶ್ರಮದಲ್ಲಿ ನೆಲೆಸಿದ್ದ ಸುರೇಶ್ ಹಾಗೂ ಗೀತಾ ಕುಟುಂಬ ದೇವಸ್ಥಾನದಲ್ಲಿ ಪೂಜೆ ಮಾಡಿಕೊಂಡು ಜೀವನ ನಡೆಸುತ್ತಿದ್ದರು.ಮಂಗಳವಾರ ಸಂಜೆ ಗೀತಾ ಅವರ ಪತಿ ಸುರೇಶ್ ಹಾಗೂ ಪುತ್ರ ಮೋಹನ್ ಆಶ್ರಮದಿಂದ ಹೊರಗೆ ತೆರಳಿದ್ದರು, ರಾತ್ರಿ ವಾಪಾಸು ಬಂದಾಗ ಇಬ್ಬರು ಮೃತ ಪಟ್ಟಿರುವುದು ಗೊತ್ತಾಗಿದೆ.ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿದ್ದು, ಚಿತ್ರದುರ್ಗ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ತನಿಖೆ ಕೈಗೊಂಡಿದ್ದಾರೆ.ಇಂತಹ ಅಮಾನವೀಯ ಘಟನೆಗಳು ನಮ್ಮ ಜಿಲ್ಲೆಯಲ್ಲಿ ಮತ್ತೊಮ್ಮೆ ಮರುಕಳಿಸದಿರಲಿ ಎನ್ನುವುದೇ ನಮ್ಮ ಆಶಯ.
ವರದಿ:ಶಿವಮೂರ್ತಿ.ಟಿ. ಕೋಡಿಹಳ್ಳಿ ಚಳ್ಳಕೆರೆ.