ವಿ.ಎಂ.ಎಸ್.ಆರ್ ವಸ್ತ್ರದ ಮಹಾ ವಿದ್ಯಾಲಯದ ವಿದ್ಯಾರ್ಥಿಗಳ ಉತ್ತಮ ಸಾಧನೆ.
ಹುನಗುಂದ ಮೇ.31
![](https://i0.wp.com/sknewskannada.in/wp-content/uploads/2024/05/IMG-20240531-WA0101-1.jpg?resize=565%2C992&ssl=1)
ಬಾಗಲಕೋಟೆ ವಿಶ್ವವಿದ್ಯಾಲಯ, ನಡೆಸಿದ ಪ್ರಥಮ ಸೆಮಿಸ್ಟರ್ ಫಲಿತಾಂಶ ಪ್ರಕಟವಾಗಿದ್ದು ಸ್ಥಳೀಯ ವಿ.ಎಂ.ಎಸ್.ಆರ್.ವಸ್ತೃದ ಕಲಾ, ವಿಜ್ಞಾನ ಹಾಗೂ ವಿ.ಎಸ್. ಬೆಳ್ಳಿಹಾಳ ವಾಣಿಜ್ಯ ಮಹಾವಿದ್ಯಾಲಯದ ಕಲಾ ವಿಭಾಗದ ವಿದ್ಯಾರ್ಥಿಗಳಾದ ಮಂಜುಳಾ ನಾಗೂರ ೯.೭೬ ಸಿಜಿಪಿಎ, ಬಸಪ್ಪ ಮೇಟಿ ೯.೪೦ ಸಿಜಿಪಿಎ, ಸುಶ್ಮಿತಾ ಪಾಟೀಲ ೯.೧೬ ಸಿಜಿಪಿಎ, ಸಾವಿತ್ರಿ ಕೊಟಗುಂಡ ೯.೦೮ ಸಿಜಿಪಿಎ, ಶೋಭಾ ಅಂಟರದಾನಿ ೯.೦೪ ಸಿಜಿಪಿಎ, ವಿಜ್ಞಾನ ವಿಭಾಗದಲ್ಲಿ ಸೃಷ್ಠಿ ಆರ್. ಗಡೇದ ೯.೦೬ ಸಿಜಿಪಿಎ,ಶಿವಾನಿ ಹೇರೂರ ೮.೯೬ ಸಿಜಿಪಿಎ, ಪ್ರಿಯಾಂಕಾ ಕಲಕೇರಿ ೮.೮೪ ಸಿಜಿಪಿಎ, ಸುಮ್ಮಯ್ಯಾಬೇಗಂ ೮.೮೪ ಸಿಜಿಪಿಎ ಮತ್ತು ವಾಣಿಜ್ಯ ವಿಭಾಗ ಸುಮ್ಮಯ್ಯ ಮುಲ್ಲಾ ೮.೬೪ ಸಿಜಿಪಿಎ, ಸುನೀತಾ ಕರಮುಡಿ ೮.೬೦ ಸಿಜಿಪಿಎ, ಭಾಗ್ಯಲಕ್ಷ್ಮೀ ಬೇನಕಟ್ಟಿ ೮.೫೬ ಸಿಜಿಪಿಎ, ರಮಜಾನಬಿ ಪಿಂಜಾರ ೮.೩೨ ಸಿಜಿಪಿಎ ಅಂಕಗಳನ್ನು ಪಡೆದುಕೊಂಡು ಮಹಾ ವಿದ್ಯಾಲಯದ ಕೀರ್ತಿಗೆ ಭಾಜನರಾಗಿದ್ದಾರೆ.ವಿದ್ಯಾರ್ಥಿಗಳಿಗೆ ವಿ.ಮ.ವಿ.ವ.ಸಂಘದ ಕಾರ್ಯಾಧ್ಯಕ್ಷರಾದ ಡಾ.ವಿ.ಸಿ.ಚರಂತಿಮಠ, ಗೌರವ ಕಾರ್ಯದರ್ಶಿಗಳಾದ ಡಾ.ಮಹಾಂತೇಶಕಡಪಟ್ಟಿ, ಸಂಘದ ನಿರ್ದೇಶಕರು, ಪ್ರಾಚಾರ್ಯ ಶಶಿಕಲಾ.ಕೆ.ಮಠ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.
ತಾಲೂಕ ವರದಿಗಾರರು ಹಾಗೂ ಎಸ್.ಕೆ. ನ್ಯೂಸ್ ಕನ್ನಡ ಚಾನಲ್: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ.