ಆಯುಷ್ ಇಲಾಖೆ ಸಿಬ್ಬಂದಿ ಪಿ. ಲಿಂಗರಾಜ್ ನಿವೃತ್ತಿ ಬೀಳ್ಕೊಡುಗೆ ಸಮಾರಂಭ.
ಹೂಡೇಂ ಜೂನ್.01
![](https://i0.wp.com/sknewskannada.in/wp-content/uploads/2024/06/IMG-20240601-WA0047.jpg?resize=708%2C531&ssl=1)
ಕಾನ ಹೊಸಹಳ್ಳಿ ಸಮೀಪದ ಹೂಡೇಂ ಆಯುಷ್ ಕೇಂದ್ರದ ಡಿ ಗ್ರೂಪ್ ನೌಕರ ಪಿ ಲಿಂಗರಾಜ್ ನವರ ವಯೋನಿವೃತ್ತಿ ಬೀಳ್ಕೊಡುಗೆ ಸಮಾರಂಭವನ್ನು ಹೂಡೇಂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಏರ್ಪಡಿಸಲಾಗಿತ್ತು. ಡಿ ಗ್ರೂಪ್ ನೌಕರರ ಪಿ ಲಿಂಗರಾಜ್ ಕೂಡ್ಲಿಗಿ ತಾಲೂಕಿನ ಅರಣ್ಯ ಇಲಾಖೆಯಲ್ಲಿ 10 ವರ್ಷ ಸೇವೆ ಸಲ್ಲಿಸಿದ್ದು ನಂತರ ಸರ್ಕಾರದ ಆದೇಶದಂತೆ ಬಳ್ಳಾರಿ ಜಿಲ್ಲೆಯ ಎರಗುಡಿ ಗ್ರಾಮದ ಆಯುಷ್ ಕೇಂದ್ರದಲ್ಲಿ 8 ವರ್ಷ ಹಾಗೂ ಹೂಡೇಂ ಆಯುಷ್ ಕೇಂದ್ರದಲ್ಲಿ 12 ವರ್ಷ ಸೇವೆ ಸಲ್ಲಿಸಿದ್ದು, ಒಟ್ಟು 30 ವರ್ಷ ಡಿ ಗ್ರೂಪ್ ನೌಕರರಾಗಿ ಸೇವೆ ಸಲ್ಲಿಸಿದ್ದು ಸರ್ಕಾರದ ಆದೇಶದಂತೆ ವಯೋನಿವೃತ್ತಿ ಹೊಂದಿದ್ದರಿಂದ.
![](https://i0.wp.com/sknewskannada.in/wp-content/uploads/2024/06/IMG-20240601-WA0049.jpg?resize=708%2C531&ssl=1)
ಹೂಡೇಂ ಗ್ರಾಮದ ಆಯುಷ್ ಕೇಂದ್ರದ ಸಿಬ್ಬಂದಿ ಮತ್ತು ಅಧಿಕಾರಿಗಳು ಹಾಗೂ ಹೂಡೇಂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡಿ ಗ್ರೂಪ್ ನೌಕರ ಲಿಂಗರಾಜ್ ರವರಿಗೆ ಹೂಮಾಲೆ ಹಾಕಿ ಗೌರವಿಸಿ ಬೀಳ್ಕೊಡುಗೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಆರೋಗ್ಯ ವೈದ್ಯಧಿಕಾರಿ ಡಾ ಧರ್ಮಸಿಂಗ್ ಭಾಗವಹಿಸಿ ಲಿಂಗರಾಜು ಇವರನ್ನು ಸನ್ಮಾನಿಸಿ ಮಾತನಾಡಿದರು ಅವರ ಕರ್ತವ್ಯದ ಅವಧಿಯಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದವರಾಗಿದ್ದು, ಸಾರ್ವಜನಿಕರಲ್ಲಿ ಉತ್ತಮ ಬಾಂದವ್ಯ ಉಳ್ಳವರಾಗಿದ್ದರು ಎಂದು ತಿಳಿಸಿ, ವಿಶ್ರಾಂತ ಜೀವನ ಸುಖ, ಸುಖ ಶಾಂತಿ, ನೆಮ್ಮದಿಯೊಂದಿಗೆ ಇರಲಿ ಎಂದು ಆಶೀಸಿದರು, ಈ ಸಂದರ್ಭದಲ್ಲಿ ಡಾ. ಶಿವಲಿಂಗಪ್ಪ, ಚಂದ್ರಪ್ಪ, ಸಿಬ್ಬಂದಿಗಳು ಉಷಾ, ಲಕ್ಷ್ಮಿ ಸೇರಿದಂತೆ ಇತರೆ ಸಿಬ್ಬಂದಿಗಳು ಸಾರ್ವಜನಿಕರು ಹಾಜರಾಗಿದ್ದರು.
ಹೋಬಳಿ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್.ವೀರೇಶ್. ಕಾನಾ ಹೊಸಹಳ್ಳಿ.