“ಸಂಭ್ರಮ ದಿಂದ ಕರಿ ಹರಿದ ಗೊರಬಾಳ ಗೌಡ್ರ ಎತ್ತುಗಳು”.
ಇಲಕಲ್ಲ ಜೂನ್.22
![](https://i0.wp.com/sknewskannada.in/wp-content/uploads/2024/06/IMG-20240622-WA0010.jpg?resize=460%2C1024&ssl=1)
ಇಲಕಲ್ಲ ತಾಲೂಕಿನ ಗೊರಬಾಳ ಗ್ರಾಮದಲ್ಲಿ ಕಾರ ಹುಣ್ಣಿಮೆ ಪ್ರಯುಕ್ತ ಊರಿನ ಪ್ರಮುಖ ಐದು ಗೌಡ್ರ ಮನೆ ಎತ್ತುಗಳು ಕರಿ ಹರಿವುದರ ಮೂಲಕ ಗ್ರಾಮದ ರೈತರಲ್ಲಿ ಸಂಭ್ರಮ ಮನೆ ಮಾಡಿತ್ತು. ಪ್ರಾಚೀನ ಕಾಲದಿಂದಲೂ ಆಚರಿಸುತ್ತಾ ಬಂದಿರುವ ಕಾರ ಹುಣ್ಣಿಮೆ ಕಾರ್ಯಕ್ರಮ ಪ್ರತಿ ಹಳ್ಳಿಯಲ್ಲೂ ರೈತರ ಸಂಭ್ರಮ ಮನೆ ಮಾಡಿದಂತಿರುತ್ತದೆ ರೈತರು ಹಬ್ಬದ ಒಂದು ದಿನ ಮುಂಚೆ ಎತ್ತುಗಳನ್ನು ಜಳಕ ಮಾಡಿಸಿ ಹೊನ್ನುಗ್ಗಿಯನ್ನು ಪ್ರಸಾದ ನೈವೇದ್ಯ ಮಾಡುವುದರ ಮೂಲಕ. ರೈತರು ಮನೆಯಲ್ಲಿರುವ ಎತ್ತುಗಳನ್ನು ಸಿಂಗಾರ ಮಾಡುವುದರ ಮೂಲಕ ಕಾರ ಹುಣ್ಣಿಮೆಯ ಸಂಭ್ರಮಕ್ಕೆ ಸಜ್ಜು ಗೊಳಿಸುವುದು ಮೊದಲಿನಿಂದಲೂ ವಾಡಿಕೆ, ಹೀಗೆ ರೈತರು ರೈತ ಮಹಿಳೆಯರು ಗ್ರಾಮದ ಗುರು ಹಿರಿಯರು ಯುವಕ ಯುವತಿಯರು ಚಿಕ್ಕ ಮಕ್ಕಳು ಎತ್ತುಗಳು ಓಡುವ ಸಂಭ್ರಮವನ್ನು ಕಂಡು ಖುಷಿ ಪಡುತ್ತಾರೆ. ರೈತರ ಹಬ್ಬ ಇದು ಆಗಿದ್ದು ಕಾರ ಹುಣ್ಣಿಮೆಯ ನಂತರ ರೈತರ ಚಟುವಟಿಕೆಗಳು ಗರಿಗೆದರಿವ ಪ್ರಯುಕ್ತ ರೈತರು ಕೂಡ ಕಾರ ಹುಣ್ಣಿಮೆಯನ್ನು ಸಂಭ್ರಮದಿಂದ ಆಚರಿಸುತ್ತಾ ಬರುತ್ತಾರೆ ಹೀಗೆ ಪ್ರಾಚೀನ ಕಾಲದಿಂದಲೂ ಪ್ರತಿ ಹಳ್ಳಿಯಲ್ಲಿ ಆಚರಿಸುತ್ತಾ ಬಂದಿರುವ ಈ ಹಬ್ಬವನ್ನು ಗೊರಬಾಳ ಗ್ರಾಮದ ರೈತರು ಸಂಭ್ರಮ ದಿಂದ ಆಚರಿಸಿದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರತಾಪ್ ವಾಯ್ ಕಿಳ್ಳಿ. ಇಲಕಲ್ಲ.