ಮೊಳಕಾಲ್ಮುರು ತಾಲೂಕಿನಲ್ಲಿ ಜಮೀನು ಇಲ್ಲದಂತ ಬಡವರಿಗೆ ಬಗರ್ ಹುಕ್ಕಂ ಜಮೀನುಗಳನ್ನು ಸರ್ಕಾರ ದಿಂದ ಮಂಜೂರು ಮಾಡಿಸಲು – ಮುಂದಾದ ಶಾಸಕರು.
ಮೊಳಕಾಲ್ಮುರು ಜೂನ್.29
![](https://i0.wp.com/sknewskannada.in/wp-content/uploads/2024/06/IMG-20240629-WA0054.jpg?resize=708%2C531&ssl=1)
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಾ ಆಡಳಿತ ಸೌಧ ಸಭಾಂಗಣದಲ್ಲಿ ಜನಪ್ರಿಯ ಶಾಸಕರಾದ ಶ್ರೀ ಎನ್ ವೈ ಗೋಪಾಲಕೃಷ್ಣರವರು ವಿಧಾನ ಸಭಾ ಕ್ಷೇತ್ರದ ಬಗರು ಹುಕ್ಕಂ ಸಮೀಕರಣ ಸಮಿತಿ ಪ್ರಥಮ ಸಭೆಯಲ್ಲಿ ಪಾಲ್ಗೊಂಡರು. ಜಮೀನು ಇಲ್ಲದಂತ ಬಡವರಿಗೆ ಈಗ ಸುಮಾರು ವರ್ಷದಿಂದ ಬಗರು ಹುಕ್ಕಂ ಅರ್ಜಿಗಳನ್ನು ಯಥಾಸ್ಥಿತಿಗೆ ಹಾಕಲಾಗಿತ್ತು ಈಗ ಎನ್ ವೈ ಗೋಪಾಲಕೃಷ್ಣ ಶಾಸಕರು ಈ ಜಮೀನು ಇಲ್ಲದಂತ ಬಡವರಿಗೆ ಬಗರ್ ಹುಕ್ಕಂ ಅರ್ಜಿ ಹಾಕಿದಂತ ಫಲಾನುಭವಗಳಿಗೆ ಯಾರಿಗೆ ಜಮೀನುಗಳು ಇರುವುದಿಲ್ಲವೋ ಅಂತ ಫಲಾನುಭವಿಗಳನ್ನು ಪತ್ತೆ ಹಚ್ಚಿ ಪಟ್ಟಿ ಮಾಡಲು ಮುಂದಾದ ಶಾಸಕರು ಈ ಸಂದರ್ಭದಲ್ಲಿಜಗದೀಶ್ ತಹಶೀಲ್ದಾರ್, ತಾಲೂಕ್ ಪಂಚಾಯತಿ ಇ.ಓ ಪ್ರಕಾಶ್ ಸಮಿತಿಯ ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳು ಮೊದಲಾದವರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ತಿಪ್ಪೇಸ್ವಾಮಿ. ಹೊಂಬಾಳೆ ಮೊಳಕಾಲ್ಮುರು.