ಸಂತ ಸೇವಾಲಾಲ್ ಮಹಾರಾಜರ 284ನೇ ಜಯಂತೋತ್ಸವ ಆಚರಣೆ.
ಚಿಕ್ಕಮಗಳೂರು (ಫೆ.24) :
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಪಟ್ಟಣದ ಡಾಕ್ಟರ್ ಬಿಆರ್ ಅಂಬೇಡ್ಕರ್ ಭವನದಲ್ಲಿ, ತರೀಕೆರೆ ಮತ್ತು ಅಜ್ಜಂಪುರ ತಾಲೂಕು ಬಂಜಾರ ಸಂಘದ ವತಿಯಿಂದ ಏರ್ಪಡಿಸಿದ್ದ ಸಂತ ಸೇವಾಲಾಲ್ ಮಹಾರಾಜರ 284ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಸರ್ದಾರ್ ಸೇವಾಲಾಲ್ ಸ್ವಾಮೀಜಿರವರು ಕಾರ್ಯಕ್ರಮ ಉದ್ಘಾಟನೆ ಮಾಡಿ ಬಂಜಾರ ಸಮಾಜಕ್ಕೆ ಒಬ್ಬನೇ ದೇವರು ಒಂದೇ ಭಾಷೆ ಒಂದೇ ರೀತಿಯ ಉಡುಗೆ ತೊಡುಗೆ ,ಒಂದೇ ರೀತಿಯ ಸಂಸ್ಕೃತಿ ಇದೆ ಎಂದು ಹೇಳಿದರು.
ಬಂಜಾರ ಸಮಾಜದವರೆಲ್ಲರೂ ಸ್ವಾಭಿಮಾನದಿಂದ ಸಂಘಟನೆ ಯಾಗಬೇಕು ತಮ್ಮ ಹಕ್ಕುಗಾಗಿ ಹೋರಾಡೋಣ ಎಂದು ಹೇಳಿದರು. ಬಂಜಾರ ಸಮಾಜದವರೆಲ್ಲರೂ ವಿದ್ಯಾವಂತರಾಗಿದ್ದಾರೆ, ಆರ್ಥಿಕವಾಗಿ ಅಭಿವೃದ್ಧಿ ಹೊಂದಿದ್ದಾರೆ, ರಾಜಕೀಯವಾಗಿಯೂ ಸ್ಥಾನಮಾನ ಪಡೆದಿದ್ದಾರೆ, ಐಎಎಸ್, ಐಪಿಎಸ್ ಅಧಿಕಾರಿಗಳಾಗಿ ಉನ್ನತ ಸ್ಥಾನಮಾನಗಳನ್ನು ಪಡೆದಿದ್ದಾರೆ, ನ್ಯಾಯಮೂರ್ತಿ ಎಜೆ ಸದಾಶಿವ ಆಯೋಗದ ವಿರುದ್ಧ ಹೋರಾಟ ಮಾಡಲು ಎಲ್ಲರೂ ಸಂಘಟಿತರಾಗಬೇಕು ಸ್ವಾಭಿಮಾನಿಗಳಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮಂಜು ಮಹಾರಾಜ ಸ್ವಾಮೀಜಿಗಳು ಉಪಸ್ಥಿತರಿದ್ದರು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಕೆ ಆರ್ ಧ್ರುವ ಕುಮಾರ್, ಸಮಾಜ ಸೇವಕ ಕಾಂಗ್ರೆಸ್ ಪಕ್ಷದ ಆಕಾಂಕ್ಷಿ ಯಾದ ಎಚ್ ಎಮ್ ಗೋಪಿಕೃಷ್ಣ, ತಾಲೂಕು ಬಂಜಾರ ಸಂಘದ ಅಧ್ಯಕ್ಷರಾದ ಸತ್ಯಪ್ಪ, ಗೌರವ ಅಧ್ಯಕ್ಷರಾದ ರಾಮಪ್ಪ, ಗೋವಿಂದ ನಾಯ್ಕ, ಯುವ ಘಟಕದ ಯೋಗೇಶ್ ನಾಯಕ, ಕಡೂರು ತಾಲೂಕಿನ ಮಹಿಳಾ ಬಂಜಾರ ಸಂಘದ ಅಧ್ಯಕ್ಷರಾದ ರಾಜೇಶ್ವರಿ ಬಾಯಿ, ಹಿರಿಯ ಪತ್ರಕರ್ತರಾದ ಬಿ ಕೃಷ್ಣ ನಾಯ್ಕ, ಚನ್ನ ನಾಯಕ ಮುಂತಾದವರು ಉಪಸ್ಥಿತರಿದ್ದರು.