ನಗರ ಸಭೆಯ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕ ಹಕ್ಕು ರಕ್ಷಣೆ & ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ದೂರು
ಗದಗ ಸಪ್ಟೆಂಬರ್.21
ಪೌರ ಕಾರ್ಮಿಕರ ನೇರ ನೇಮಕಾತಿ ಸಂಬಂದಿಸಿದಂತೆ ನಗರಸಭೆ ಅಧಿಕಾರಿಗಳ ಬೇಜವಾಬ್ದಾರಿ ವರ್ತನೆಯಿಂದಾಗಿ 23 ಜನ ಪೌರ ಕಾರ್ಮಿಕ ಅರ್ಜಿದಾರರ ಅರ್ಜಿ ವಜಾಗೊಂಡಿದ್ದು ತಪ್ಪಿತಸ್ಥ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳ ಮೇಲೆ ಕ್ರಮಕ್ಕಾಗಿ ಸಾರ್ವಜನಿಕ ಹಕ್ಕು ರಕ್ಷಣೆ & ಬ್ರಷ್ಟಾಚಾರ ವಿರೋಧಿ ಸಂಸ್ಥೆ ರಾಜ್ಯ ಅಧ್ಯಕ್ಷ ರಾ ದೇ ಕಾರಭಾರಿ ಇಂದು ನಗರ ಸಭೆಯ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.
ಪೌರ ಕಾರ್ಮಿಕರ ನೇರ ನೇಮಕಾತಿ ವಿಷಯಕ್ಕೆ ಸಂಬಂಧಿಸಿದಂತೆ 23 ಜನ ಪೌರ ಕಾರ್ಮಿಕರು ನೇರ ನೇಮಕಾತಿ ಬಯಸಿ ನಗರ ಸಭೆಯ ಪೌರಾಯುಕ್ತರ ಮೂಲಕ ಅರ್ಜಿ ಸಲ್ಲಿಸಿದ್ದರು.
ಅರ್ಜಿ ಸಲ್ಲಿಸುವಾಗಲೂ ಸಹ ಅಂದು ಪ್ರಭಾರಿ ಪೌರಾಯುಕ್ತರ ಸಂಘದ ರಾ ದೇ ಕಾರಭಾರಿ ಮತ್ತು ಕರ್ನಾಟಕ ಮಾದಿಗ ಸಂಘರ್ಷ ಸಮಿತಿ ಗದಗ ಜಿಲ್ಲಾ ಅದ್ಯಕ್ಷರಾದ ರಾಘವೇಂದ್ರ ಪಿ ಪರಾಪೂರ ಕಾರ್ಮಿಕರ ಅರ್ಜಿ ಬಗ್ಗೆ ಚರ್ಚಿಸಿ ಅರ್ಜಿ ಸಲ್ಲಿಸಲಾಗಿತ್ತು, ತದ ನಂತರ ಸದರಿ ಅರ್ಜಿಗಳನ್ನು ಪರಿಶೀಲಿಸಿ ಪೌರಾಯುಕ್ತರ ಹಾಗೂ ಸಂಬಂಧಿಸಿದ ಅಧಿಕಾರಿಗಳ ಸಹಿ ಪಡೆದು ಮೆಲಾಧಿಕಾರಿಗಳಿಗೆ ಸಲ್ಲಿಸಬೇಕಾಗಿತ್ತು ಆದರೆ ನಗರ ಸಭೆಯ ಅಧಿಕಾರಿಗಳು ತಮ್ಮ ಬೇಜವಾಬ್ದಾರಿತನದಿಂದ ಯಥಾಸ್ಥಿತಿ ಅರ್ಜಿಗಳನ್ನು ಮೇಲಾಧಿಕಾರಿಗಳಿಗೆ ಸಲ್ಲಿಸಿದ ಕಾರಣ ಎಲ್ಲಾ 23 ಜನ ಪೌರ ಕಾರ್ಮಿಕರ ಅರ್ಜಿಗಳು ತಿರಸ್ಕಾರಗೊಂಡಿರುತ್ತವೆ.
ಅಧಿಕಾರಿಗಳ ಬೇಜವಾಬ್ದಾರಿಯ ಬಗ್ಗೆ ಸ್ಪಷ್ಟೀಕರಣ ನೀಡಲು ಇಂದು ಮಾನ್ಯ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಅಧಿಕಾರಿಗಳ ಮೇಲೆ ಕ್ರಮಕ್ಕಾಗಿ ಸಾರ್ವಜನಿಕ ಹಕ್ಕು ರಕ್ಷಣೆ & ಬ್ರಷ್ಟಾಚಾರ ವಿರೋಧಿ ಸಂಸ್ಥೆ ರಾಜ್ಯ ಅಧ್ಯಕ್ಷ ರಾ ದೇ ಕಾರಭಾರಿಯವರೊಂದಿಗೆ ಕರ್ನಾಟಕ ಮಾದಿಗ ಸಂಘರ್ಷ ಸಮಿತಿ ಗದಗ ಜಿಲ್ಲಾ ಅಧ್ಯಕ್ಷರಾದ ರಾಘವೇಂದ್ರ ಪಿ ಪರಾಪೂರ, ಮೇರಿ ರಾದೇ ಕಾರಭಾರಿ ಅನೇಕರು ಉಪಸ್ಥಿತರಿದ್ದರು.
ರಾ ದೇ ಕಾರಭಾರಿ
7760433113