ದೇವಸ್ಥಾನಗಳಿಲ್ಲದ ಊರುಗಳನ್ನು ಹೇಗೆ ಹುಡುಕಲು ಸಾಧ್ಯವಿಲ್ಲವೋ ಹಾಗೆಯೇ ಧರ್ಮಸ್ಥಳ ಸಂಸ್ಥೆ ಕಾಲಿಡದ – ಊರುಗಳನ್ನು ಹುಡುಕಲು ಸಾಧ್ಯವಿಲ್ಲ.

ಮಾರಿಯಮ್ಮನಹಳ್ಳಿ ಪೆ.01

ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ತಾಂಡಾದ ಆಂಜನೇಯ ದೇವಸ್ಥಾನದ ಸಭಾ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸಾಮೂಹಿಕ ವೈಭವ ಲಕ್ಷ್ಮಿ ಪೂಜಾ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿತ್ತು. ಸಾಮೂಹಿಕವಾಗಿ ನಡೆದಂತಹ ಈ ಪೂಜಾ ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಸ್ವಯಂ ಪ್ರೇರಿತವಾಗಿ ಭಾಗವಹಿಸಿ ಪೂಜೆ ಕಾರ್ಯಕ್ರಮ ನೆರವೇರಿಸಿದರು ನಂತರ ವೇದಿಕೆಯಲ್ಲಿ ಸಭಾ ಕಾರ್ಯಕ್ರಮ ನೆರವೇರಿತು ಸಭಾ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿದಂತಹ ಶ್ರೀ ಶ್ರೀ ಶ್ರೀ ನಿರಂಜನ ಪ್ರಭು ದೇವರು ಒಪ್ಪತ್ತೇಶ್ವರ ಮಠ ನಾಗಲಾಪುರ ಇವರು ಆಶೀರ್ವಚನ ನೀಡಿದರು. ದೇವಸ್ಥಾನ ಗಳಿಲ್ಲದ ಊರುಗಳನ್ನು ಹೇಗೆ ಹುಡುಕಲು ಸಾಧ್ಯವಿಲ್ಲವೋ ಹಾಗೆಯೇ ಧರ್ಮಸ್ಥಳ ಸಂಸ್ಥೆ ಕಾಲಿಡದ ಊರುಗಳನ್ನು ಹುಡುಕಲು ಈ ಕರ್ನಾಟಕದಲ್ಲಿ ಸಾಧ್ಯವೇ ಇಲ್ಲ ಸಮಾಜದ ಕಟ್ಟ ಕಡೆಯ ವ್ಯಕ್ತಿಗಳನ್ನು ಕೂಡ ತಲುಪಿದಂತಹ ಶ್ರೇಯಸ್ಸು, ಧರ್ಮಸ್ಥಳ ಸಂಸ್ಥೆಗೆ ಸಲ್ಲುತ್ತದೆ ಸಮಾಜ ನಿರ್ಮಾಣದಲ್ಲಿ ಧರ್ಮಸ್ಥಳ ಸಂಸ್ಥೆಯ ಕೊಡುಗೆ ಅಪಾರ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದಂತಹ ಸಂಸ್ಥೆಯ ಜಿಲ್ಲಾ ನಿರ್ದೇಶಕರಾದ ಶ್ರೀ ಸತೀಶ್ ಶೆಟ್ಟಿ ಅವರು ಮಾತನಾಡಿ ಪ್ರತಿ ದಿನದ ಬದುಕಿನ ಜಂಜಾಟದಲ್ಲಿ ಮನುಷ್ಯ ಮನಃ ಶಾಂತಿ ಕಳೆದು ಕೊಂಡು ಬಿಟ್ಟಿದ್ದಾನೆ ಮನಃ ಶಾಂತಿ ಸಿಗಬೇಕಾದರೆ ಪ್ರತಿಯೊಂದು ಊರಲ್ಲಿ ಇಂತಹ ಧಾರ್ಮಿಕ ಕಾರ್ಯಕ್ರಮಗಳು ಪೂಜೆ ಪುನಸ್ಕಾರಗಳು ನಡೆದಾಗ ಮನುಷ್ಯನಿಗೆ ಒಂದಿಷ್ಟು ನೆಮ್ಮದಿ ಸಿಗಲು ಸಾಧ್ಯ ಇದನ್ನರಿತ ಪರಮ ಪೂಜ್ಯ ಡಾ, ಡಿ.ವೀರೇಂದ್ರ ಹೆಗ್ಗಡೆ ಅವರು ಧಾರ್ಮಿಕ ಪೂಜೆ ಪುನಸ್ಕಾರಗಳು ಕೇವಲ ಧರ್ಮಸ್ಥಳದಲ್ಲಿ ಮಾತ್ರ ನಡೆದರೆ ಸಾಕಾಗುವುದಿಲ್ಲ ಬದಲಾಗಿ ಸಮಾಜದ ಕಟ್ಟೆ ಕಡೆಯ ಹಳ್ಳಿಗಳಲ್ಲಿಯೂ ಕೂಡ ಇಂತಹ ಕಾರ್ಯಕ್ರಮಗಳನ್ನು ನೀವು ತಲುಪಿಸಬೇಕು ಎಂದು ಹೇಳುತ್ತಾರೆ ಅವರ ಆಶಯದಂತೆ ಪ್ರತಿ ಹಳ್ಳಿಯಲ್ಲೂ ಕೂಡ ಇಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲಾಗುತ್ತಿದೆ ಎಂದು ಹೇಳಿದರು. ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದಂತಹ ಶ್ರೀ ಕೃಷ್ಣ ನಾಯ್ಕ್ ಅವರು ಮಾತನಾಡಿ ಧರ್ಮಸ್ಥಳ ಸಂಸ್ಥೆಯು ಬ್ಯಾಂಕಿನಿಂದ ಹಣ ಕೊಡ ಸೋದು ಮಾತ್ರವಲ್ಲದೆ ಬಂದಂತಹ ಅಲ್ಪ ಆದಾಯದಲ್ಲಿ ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಅನ್ನುವಂತೆ ಆ ಹಣವನ್ನು ಸಾಮಾಜಿಕ ಕೆಲಸ ಕಾರ್ಯಗಳಿಗೆ ಉಪಯೋಗಿಸುತ್ತಿದೆ ಎಂದರು. ಇನ್ನೊರ್ವ ಮುಖ್ಯ ಅತಿಥಿಗಳಾದ ಏಕಾಂಬರೇಶ ನಾಯ್ಕ್ ಅವರು ಮಾತನಾಡಿ ಯಾವುದೇ ಸರಕಾರವೂ ಕೂಡ ಮಾಡದಂತಹ ಜನೋಪಯೋಗಿ ಕಾರ್ಯಕ್ರಮಗಳನ್ನು ಧರ್ಮಸ್ಥಳ ಸಂಸ್ಥೆಯು ಮಾಡುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆ ಪಡುವಂತಹ ವಿಚಾರ ಎಂದು ಹೇಳಿದರು. ಮುಖ್ಯವಾಗಿ ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ತಾಲೂಕಿನ ಯೋಜನಾಧಿಕಾರಿ ಶ್ರೀ ಮಾರುತಿ ಎಸ್, ಶ್ರೀ ಕೃಷ್ಣ ನಾಯ್ಕ್, ಶ್ರೀ ಏಕಾಂಬರೇಶ ನಾಯ್ಕ್, ಶ್ರೀ ಡಾಕ್ಯ ನಾಯ್ಕ, ಶ್ರೀ ಭೀಮ ನಾಯ್ಕ್, ಶ್ರೀ ಧರ್ಮ ನಾಯ್ಕ್, ಶ್ರೀ ಕಮ್ಯಾ ನಾಯ್ಕ್, ಶ್ರೀ ಲಲ್ಯಾ ನಾಯ್ಕ, ಶ್ರೀ ಪ್ರಕಾಶ್ ನಾಯ್ಕ್, ಶ್ರೀ ವೆಂಕಟೇಶ್, ಶ್ರೀ ಎಂ ಲಕ್ಷ್ಮಣ್ ನಾಯ್ಕ್, ಶ್ರೀ ಆರ್ ಲಕ್ಷ್ಮಣ್, ಶ್ರೀ ರಾಜೇಶ್ ನಾಯ್ಕ್, ಶ್ರೀಮತಿ ಮಂಜುಳಾ ಬಾಯಿ, ಶ್ರೀ ಗುರು ಸೋಮಪ್ಪ ಮುಖ್ಯೋಪಾಧ್ಯಾಯರು ಮುಂತಾದ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ತಾಲೂಕಿನ ಯೋಜನಾಧಿಕಾರಿ ಮಾರುತಿ ಎಸ್ ಸ್ವಾಗತಿಸಿದರು, ಸಂಸ್ಥೆಯ ಕೃಷಿ ಅಧಿಕಾರಿ ಶ್ರೀ ಚನ್ನಪ್ಪ ನಿರೂಪಣೆ ಮಾಡಿದರು, ವಲಯದ ಮೇಲ್ವಿಚಾರಕ ಶ್ರೀ ನಂದನ್ ಕುಮಾರ್ ವಂದಿಸಿದರು ಕಾರ್ಯಕ್ರಮದಲ್ಲಿ ಮೇಲ್ವಿಚಾರಕ ಶ್ರೀ ಮಲ್ಲಪ್ಪ, ಸೇವಾ ಪ್ರತಿ ನಿಧಿಗಳಾದ ಶ್ರೀಮತಿ ಗೌರಿ, ರೇಣುಕಾ, ಚೆನ್ನಮ್ಮ, ಲಕ್ಷ್ಮಿ, ಕಲಾವತಿ, ಕಾವೇರಿ, ಅಂಜಿನಮ್ಮ, ಯಶೋಧ, ಹಾಗೂ CSC ಸೇವಾದಾರರಾದ ರೂಪ ಹಾಗೂ ಶೃತಿ ಒಕ್ಕೂಟದ ಪದಾಧಿಕಾರಿಗಳು, ಸ್ವಸಾಯ ಸಂಘದ ಸದಸ್ಯರು, ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಮರಿಯಮ್ಮನಹಳ್ಳಿ ತಾಂಡಾ ಇವರಿಂದ ಅದ್ದೂರಿ ಮನರಂಜನ ಕಾರ್ಯಕ್ರಮಗಳು ಜರುಗಿದವು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಾಲತೇಶ್.ಶೆಟ್ಟರ್.ಹೊಸಪೇಟೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button