“ಅಂತ ಕಚಡ ಕೆಲಸ ಮಾಡೋರಲ್ಲ” ಅಪ್ಪು ಅಭಿಮಾನಿ..

Appu Fans Challenged Challenging Star Darshan: ನಟ ದರ್ಶನ್ ಅವರ ಮೇಲೆ ಹೊಸಪೇಟೆಯಲ್ಲಿ(Hospet) ಚಪ್ಪಲಿ ಎಸೆದ ಪ್ರಕರಣ ಖಂಡನೀಯ ಎಂದು ಸಿನೆಮಾ ರಂಗದ ಹಲವರು, ರಾಜಕಾರಣಿಗಳು ಮತ್ತು ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದಾರೆ.ದರ್ಶನ್‌ ಹಾಗೂ ರಚಿತಾ ರಾಮ್‌(Rachita Ram) ಅಭಿನಯದ ‘ಕ್ರಾಂತಿ’ (Kranti)ಸಿನಿಮಾ ಮುಂದಿನ ವರ್ಷ ಜನವರಿ 26 ರಂದು ತೆರೆ ಕಾಣುತ್ತಿದೆ. ಈಗಾಗಲೇ ಚಿತ್ರತಂಡ ಪ್ರಚಾರ ಕಾರ್ಯ ಆರಂಭಿಸಿದೆ. ದರ್ಶನ್‌ , ರಚಿತಾ ರಾಮ್‌ ಹಾಗೂ ಚಿತ್ರತಂಡ ವಿವಿಧ ವಾಹಿನಿಗಳ ಇಂಟರ್‌ವ್ಯೂನಲ್ಲಿ ಭಾಗವಹಿಸುತ್ತಿದ್ದಾರೆ. ‘ರಾಬರ್ಟ್‌’ ನಂತರ ದರ್ಶನ್‌ ಅವರನ್ನು ಮತ್ತೆ ತೆರೆ ಮೇಲೆ ನೋಡಲು ಅಭಿಮಾನಿಗಳು ಕೂಡಾ ಕಾಯುತ್ತಿದ್ದಾರೆ.

ಈ ನಡುವೆ ನಿನ್ನೆ ಬಳ್ಳಾರಿಯ ಹೊಸಪೇಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದರ್ಶನ್‌ಗೆ ಅವಮಾನ ಮಾಡಲಾಗಿದೆ. ಅವರ ಮೇಲೆ ಚಪ್ಪಲಿ ಎಸೆದವರ ವಿರುದ್ಧ ಎಲ್ಲೆಡೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಅದೇ ರೀತಿ ಇದು ಅಪ್ಪು ಫ್ಯಾನ್ಸ್ ಮಾಡಿದ್ದು ಎಂದವರಿಗೆ ಖಡಕ್ ಆಗೆ ಉತ್ತರಿಸಿದ್ದ ರಾಜ್ ಕುಟುಂಬದ ಅಭಿಮಾನಿಯೊಬ್ಬರ ವೀಡಿಯೋ ಸದ್ಯ ವೈರಲ್(Video Viral) ಆಗಿದೆ.

ಅಂತ ಕಚಡ ಕೆಲಸ ನಾವು ಮಾಡೊಲ್ಲ :-

ಶಿವಣ್ಙ ವೇದ ಸಿನೆಮಾಗಾಗಿ ನಿನ್ನೆಯಿಂದ ಕಾಯುತ್ತಿದ್ದೆವು ಈಗ ಆಸಮಯ ಸನ್ನಿಹಿತವಾಗಿದೆ. ಶಿವಣ್ಣ ಮತ್ತಷ್ಟು ಯಂಗ್ ಆಗಿ ಈ ಸಿನೆಮಾದಲ್ಲಿ ಕಾಣುತ್ತಿದ್ದಾರೆ. ತುಂಬಾ ಖುಷಿಯಾಗ್ತಿದೆ. ಅಪ್ಪು ಸರ್ ನಮಗೆ ದೇವರಿದ್ದಂತೆ ನಾವು ರಾಜ್ ಕುಟುಂಬದ ದೊಡ್ಡ ಫ್ಯಾನ್ಸ್ ಹೋಸಪೇಟೆಯಲ್ಲಿ ನಡೆದ ಘಟನೆಗೆ ಅಪ್ಪು ಸರ್ ಅಭಿಮಾನಿಗಳು ಕಾರಣ ಎಂದದ್ದನ್ನು ನಾವು ಸಹಿಸಲಾರೆವು. ನಾವು ಅಂತ ಕಚಡ ಕೆಲಸ ಮಾಡಲಾರೆವು.

 

ಇನ್ನೊಬ್ಬರನ್ನು ತುಳಿದು ಅವಮಾನ ಮಾಡಿ ಬದುಕುವ ಜಾಯಮಾನ ನಮ್ಮದಲ್ಲ. ರಾಜವಂಶ ಯಾವತ್ತಿದ್ರು ರಾಜರ ತರಾನೆ ಎದುರೆದುರೆ ಮಾತನಾಡುತ್ತೇವೆ ಹೊರತು ಹೀಗೆಲ್ಲ ಮಾಡಲಾರೆವು. ಯಾರು ಮಾಡಿದ್ದಾರೋ ಅದನ್ನು ಪೊಲೀಸರು ಹುಡುಕಲಿ. ಯಾರೋ‌ಮಾಡಿದ ತಪ್ಪಿಗೆ ಅಣ್ಣವ್ರ ಫ್ಯಾಮಿಲಿ ಬಗ್ಗೆ ಮಾತನಾಡಿದರೆ ನಾವು ಸುಮ್ಮನಿರೊಲ್ಲ ಎಂದು ಅಪ್ಪು ಹಾಗೂ ರಾಜ್ ಕುಟುಂಬದ ಅಭಿಮಾನಿಯಾದ ಹುಬ್ಬಳ್ಳಿ ಮೂಲದ ರಾಜೇಶ್ ಅವರು ವೇದ ಸಿನೆಮಾ ಇವೆಂಟ್ ನಲ್ಲಿ ಮಾತನಾಡಿದ್ದಾರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Your email address will not be published. Required fields are marked *

Back to top button